ಆ್ಯಪ್ನಗರ

ಲೋಕ್‌ ಅದಾಲತ್‌ನಲ್ಲಿ 144 ಪ್ರಕರಣ ಇತ್ಯರ್ಥ

ಹಾನಗಲ್ಲ: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 144 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.

Vijaya Karnataka 14 Jul 2019, 5:00 am
ಹಾನಗಲ್ಲ: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 144 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
Vijaya Karnataka Web 144 cases settled in lok adalat
ಲೋಕ್‌ ಅದಾಲತ್‌ನಲ್ಲಿ 144 ಪ್ರಕರಣ ಇತ್ಯರ್ಥ


ಹಿರಿಯ ಸಿವಿಲ್‌ ನ್ಯಾಯಾಧೀಶೆ ಸುಜಾತಾ ಪಾಟೀಲ, ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಮತ್ತು ಕಿರಿಯ ವಿಭಾಗದ ನ್ಯಾಯಾಧೀಶೆ ಲಕ್ಷ್ಮೀ ಗರಗ ಅವರ ಮುಂದೆ ಬಂದ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.

ಪ್ರತಿ 4 ತಿಂಗಳಿಗೊಮ್ಮೆ ನಡೆಯುವ ಲೋಕ್‌ ಅದಾಲತ್‌ ಯಶಸ್ಸಿಗಾಗಿ ನ್ಯಾಯಾಲಯ ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದರು. ಲೋಕ್‌ ಅದಾಲತ್‌ನಲ್ಲಿ ಬರುವ ಪ್ರಕರಣಗಳ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳು ಹಾಜರಿದ್ದರು.

ವ್ಯಾಜ್ಯ ಪೂರ್ಣ ಪ್ರಕರಣಗಳಲ್ಲಿ (ಫ್ರೀ ಲಿಟಿಗೇಶನ್‌) ಮುಖ್ಯವಾಗಿ ಬ್ಯಾಂಕ್‌ ಸಂಬಂಧಿತ 64 ಪ್ರಕರಣಗಳು, 10 ಚೆಕ್‌ಬೌನ್ಸ್‌, 6 ಮೋಟಾರು ವಾಹನ ಪ್ರಕರಣಗಳು ಇತ್ಯರ್ಥಗೊಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ