ಆ್ಯಪ್ನಗರ

ಮರಳು ದರ ನಿಗದಿಗೆ ಇಂದು 2ನೇ ಸಭೆ

ಹಾವೇರಿ: ಮರಳು ಲಭ್ಯವಿರದ ಪ್ರದೇಶದಲ್ಲಿ ಮತ್ತು ಲಭ್ಯವಿರುವ ಪ್ರದೇಶದಲ್ಲಿ ದರ ನಿಗದಿ ಸರಕಾರಕ್ಕೆ ಚಾಲೆಂಜ್‌ ಆಗಿದೆ. ದರ ನಿಗದಿ ಕುರಿತು ಈಗಾಗಲೇ ಸಚಿವ ಸಂಪುಟದ ಉಪ ಸಮಿತಿ ರಚಿಸಿ ಮೊದಲ ಸಭೆ ನಡೆದಿದೆ. ಜು.3ಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಎರಡನೇ ಸಭೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇ ಖರ ಪಾಟೀಲ ಹೇಳಿದರು.

Vijaya Karnataka 3 Jul 2019, 5:00 am
ಹಾವೇರಿ: ಮರಳು ಲಭ್ಯವಿರದ ಪ್ರದೇಶದಲ್ಲಿ ಮತ್ತು ಲಭ್ಯವಿರುವ ಪ್ರದೇಶದಲ್ಲಿ ದರ ನಿಗದಿ ಸರಕಾರಕ್ಕೆ ಚಾಲೆಂಜ್‌ ಆಗಿದೆ. ದರ ನಿಗದಿ ಕುರಿತು ಈಗಾಗಲೇ ಸಚಿವ ಸಂಪುಟದ ಉಪ ಸಮಿತಿ ರಚಿಸಿ ಮೊದಲ ಸಭೆ ನಡೆದಿದೆ. ಜು.3ಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಎರಡನೇ ಸಭೆ ನಡೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇ ಖರ ಪಾಟೀಲ ಹೇಳಿದರು.
Vijaya Karnataka Web 2nd meeting today for sand rate
ಮರಳು ದರ ನಿಗದಿಗೆ ಇಂದು 2ನೇ ಸಭೆ


ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಎಸ್‌ಆರ್‌ಪಿ ದರ 900 ರೂ. ಇದೆ. ಸ್ಥಳೀಯ ಲಭ್ಯತೆ ಆಧರಿಸಿ ಒಂದು ಸಾವಿರ ರೂ.ವರೆಗೆ ದರ ನಿಗದಿಪಡಿಸಿಕೊಂಡು ಮರಳು ಪೂರೈಸಲಾಗುತ್ತಿದೆ. ಎಸ್‌ಆರ್‌ಪಿಗಿಂತ ಕಡಿಮೆ ದರಕ್ಕೆ ಮರಳು ನೀಡುವಂತೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಸಮಿತಿ ಸಭೆ ಮಹತ್ವ ಪಡೆದಿದೆ ಎಂದರು.

ತೆಲಂಗಾಣ ಮಾದರಿ ಸೂಕ್ತ : ಮರಳು ನೀತಿ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತೆಲಂಗಾಣ ಸೇರಿದಂತೆ ಐದು ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದಾರೆ. ಬಹುತೇಕರು ತೆಲಂಗಾಣ ಮಾದರಿಯನ್ನೇ ಅನುಸರಿಸಿದರೆ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವತಃ ನನಗೂ ಈ ನೀತಿಯೇ ಉತ್ತಮ ಎನಿಸಿದೆ. ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಕೈಗೊ ಳ್ಳುವ ನಿರ್ಧಾರದ ಮೇಲೆ ಸರಕಾರದ ನೀತಿ ಅವಲಂಬಿಸಿದೆ ಎಂದರು.

ಮಾಜಿ ಸಚಿವ, ಶಾಸಕ ಸಿ.ಎಂ. ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ. ಜಿ.ಪಂ. ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಮುಂತಾದವರು ಉಪಸ್ಥಿತರಿದ್ದರು.

ಜಾರಕಿಹೊಳಿ ಉದ್ದೇಶ ಗೊತ್ತಿಲ್ಲ: ತಮ್ಮ ರಾಜೀನಾಮೆ ಕುರಿತಂತೆ ಶಾಸಕ ಆನಂದಸಿಂಗ್‌ ಅವರೇ ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ನನ್ನ ಪರಮಾತ್ಮರು. ಆದರೂ ಅವರು ಏಕೆ ರಾಜೀನಾಮೆ ನೀಡಿದರು ಎನ್ನುವ ಮಾಹಿತಿ ಗೊತ್ತಿಲ್ಲ. ಅವರನ್ನು ಭೇಟಿ ಮಾಡಿದ ನಂತರವೇ ಮಾಹಿತಿ ತಿಳಿಯಲಿದೆ ಎಂದರು.

ಅಸಮಾಧಾನ ಸಹಜ: ಕಾಂಗ್ರೆಸ್‌ 125 ವರ್ಷ ಇತಿಹಾಸ ಇರುವ ಶಿಸ್ತಿನ ಪಕ್ಷ. ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನ ಇದ್ದೇ ಇರುತ್ತದೆ. ಎಲ್ಲ ಪಕ್ಷಗಳಂತೆ ನಮ್ಮ ಪಕ್ಷದಲ್ಲೂ ಭಿನ್ನಾಭಿಪ್ರಾಯ ಸಹಜ. ಹಾಗೆಂದ ಮಾತ್ರಕ್ಕೆ ಸಮ್ಮಿಶ್ರ ಸರಕಾರ ಬೀಳುತ್ತದೆ ಎಂದರ್ಥವಲ್ಲ ಎಂದರು. ಆರಂಭದಿಂದಲೂ ಬಿಜೆಪಿ ನಮ್ಮ ಸರಕಾರದ ಪತನದ ಬಗ್ಗೆ ಕನಸು ಕಾಣುತ್ತಲೇ ಇದೆ. ಅದು ನನಸಾಗುವುದಿಲ್ಲ ಎಂದರು.

ನಾನೂ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ಈಗ ಸಚಿವನಾಗುವ ಅವಕಾಶ ಸಿಕ್ಕಿದೆ. ಮಾಜಿ ಸಚಿವ ರೋಶನ ಬೇಗ್‌ ಎಷ್ಟು ಬಾರಿ ಸಚಿವರಾಗಿದ್ದಾರೆ? ಅಲ್ಪಸಂಖ್ಯಾತರಿಗೆ ಅನ್ಯಾಯ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.

ಯಾರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಈ ಸರಕಾರ ಸುಭ್ರವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ