ಆ್ಯಪ್ನಗರ

ಹಾನಗಲ್ಲಏತ ನೀರಾವರಿಗೆ 300 ಕೋಟಿ

ಹಾನಗಲ್ಲ: ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ 300 ಕೋಟಿ ರೂ. ಮೀಸಲಿಟ್ಟು, 15 ದಿನಗಳಲ್ಲಿಕಾಮಗಾರಿಯ ಟೆಂಡರ್‌ ಕರೆಯುವ ಸಿದ್ಧತೆ ನಡೆಯುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Vijaya Karnataka 18 Oct 2019, 6:46 pm
ಹಾನಗಲ್ಲ: ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ 300 ಕೋಟಿ ರೂ. ಮೀಸಲಿಟ್ಟು, 15 ದಿನಗಳಲ್ಲಿಕಾಮಗಾರಿಯ ಟೆಂಡರ್‌ ಕರೆಯುವ ಸಿದ್ಧತೆ ನಡೆಯುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
Vijaya Karnataka Web 300 crores for irrigation
ಹಾನಗಲ್ಲಏತ ನೀರಾವರಿಗೆ 300 ಕೋಟಿ


ಗುರುವಾರ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ30 ಲಕ್ಷ ರೂ.ಗಳಲ್ಲಿನಿರ್ಮಾಣಗೊಳ್ಳುವ ಸರಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶ್ಯಾಡಗುಪ್ಪಿ ಸಂಪರ್ಕದ ರಸ್ತೆ ಸುಧಾರಣೆಯನ್ನು 2 ಕೋಟಿ ರೂ. ವೆಚ್ಚದಲ್ಲಿಕೈಗೊಳ್ಳಲಾಗುತ್ತದೆ. ಗ್ರಾಮದಲ್ಲಿಕಾಂಕ್ರೀಟ್‌ ರಸ್ತೆಗಳ ನಿರ್ಮಾಣಕ್ಕಾಗಿ 36 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿಹಾನಗಲ್ಲತಾಲೂಕು ಹೆಚ್ಚು ಕೆರೆಗಳನ್ನು ಹೊಂದಿದೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗುತ್ತದೆ. ಇದರಿಂದ ಕೃಷಿ ಒಳಗೊಂಡು ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ386 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆಗೊಂಡಿದ್ದು, ಶೇ 90 ರಷ್ಟು ಪರಿಹಾರ ಮೊತ್ತ ರೈತರ ಖಾತೆಗೆ ಜಮೆಗೊಂಡಿದೆ ಎಂದರು.

ಬೆಳೆವಿಮೆ ಕಂತು ಕಟ್ಟಿದ ರೈತರ ಫಸಲು ಸರ್ವೆ ಕಾರ್ಯವು ಈಗ ಡಿಜಿಟಲ್‌ ಆಗಿದೆ. ಸೆಟ್‌ಲೈಟ್‌ ಬಳಿಸಿ ಬೆಳೆನಷ್ಟದ ಲೆಕ್ಕಾಚಾರದ ವ್ಯವಸ್ಥೆ ಇದೆ. ಜಮೀನಿನಲ್ಲಿಬೆಳೆದ ಬೆಳೆಗೆ ಮಾತ್ರ ಕಂತು ಕಟ್ಟಿ ನಷ್ಟಕ್ಕೆ ಪರಿಹಾರ ಪಡೆಯುವ ಬದ್ಧತೆಯಿಂದ ಸಮಸ್ಯೆ ಏರ್ಪಡುವುದಿಲ್ಲಎಂದು ಶಿವಕುಮಾರ ಉದಾಸಿ ಹೇಳಿದರು.

ಬಳಿಕ ಮಾವಕೊಪ್ಪ ಗ್ರಾಮದಲ್ಲಿ12 ಲಕ್ಷ ರೂಗಳಲ್ಲಿಅಂಬೇಡ್ಕರ ಭವನ, ಶಿರಗೋಡ ಗ್ರಾಮದಲ್ಲಿ50 ಲಕ್ಷ ವೆಚ್ಚದಲ್ಲಿಮೌಲಾನಾ ಆಜಾದ್‌ ಮಾದರಿ ಶಾಲೆ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಜಿ.ಪಂ ಸದಸ್ಯರಾದ ರಾಘವೇಂದ್ರ ತಹಸೀಲ್ದಾರ್‌, ಟಾಕನಗೌಡ ಪಾಟೀಲ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಶಿವಲಿಂಗಪ್ಪ ತಲ್ಲೂರ, ಕಸ್ತೂರವ್ವ ವಡ್ಡರ, ರಾಜಣ್ಣ ಗೌಳಿ, ಕೃಷ್ಣ ಈಳಿಗೇರ, ನಿಂಗಪ್ಪ ಗೊಬ್ಬೇರ, ಅಧಿಕಾರಿಗಳಾದ ಚನ್ನಪ್ಪ ರಾಯಣ್ಣನವರ, ಎನ್‌.ಎಂ.ಪಾಟೀಲ, ಗಂಗಾ ಹಿರೇಮಠ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ