ಪ್ರತಿ ಜಾನುವಾರಿಗೆ ದಿನಕ್ಕೆ 5 ಕೆ.ಜಿ. ಮೇವು
ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದ ಕುರಿ ಸಂವರ್ಧನಾ ಕೇಂದ್ರದಲ್ಲಿ ಹಾವೇರಿ ತಹಸೀಲ್ದಾರ ಕಛೇರಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಮೇವು ಬ್ಯಾಂಕ್ ಆರಂಭಿಸಿದರು.
Vijaya Karnataka 18 Jul 2019, 5:00 am
ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದ ಕುರಿ ಸಂವರ್ಧನಾ ಕೇಂದ್ರದಲ್ಲಿ ಹಾವೇರಿ ತಹಸೀಲ್ದಾರ ಕಛೇರಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಮೇವು ಬ್ಯಾಂಕ್ ಆರಂಭಿಸಿದರು.
ಈ ವೇಳೆ ತಹಶೀಲ್ದಾರ ಶಿವಕುಮಾರ ಮಾತನಾಡಿ, ಹಾವೇರಿ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಜಾನುವಾರುಗಳಿಗೆ ಮೇವಿನ ಅವಶ್ಯವಿರುವ ಕಾರಣ ಮೇವು ಬ್ಯಾಂಕ್ ಆರಂಭಿಸಲಾಗಿದೆ. ತಾಲೂಕಿನ ರೈತರು ಮೇವು ಖರೀದಿಸಲು ತಮ್ಮ ಹಳ್ಳಿಯ ವ್ಯಾಪ್ತಿಗೆ ಒಳಪಡುವ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಂದ ಜಾನುವಾರು ದೃಢೀಕರಣ ಪತ್ರ ತಂದು ಮೇವು ಪಡೆಯಬೇಕು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್ ಹುಬ್ಬಳ್ಳಿ ಮಾತನಾಡಿ, ದಿನವೊಂದಕ್ಕೆ ಒಂದು ಜಾನುವಾರುವಿಗೆ ಐದು ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಖಾಲಿಯಾದ ನಂತರ ಮತ್ತೆ ಪಡೆಯಬಹುದು. ಒಂದು ಕೆ.ಜಿ ಮೇವಿಗೆ 2 ರೂ. ದರ ನಿಗದಿಪಡಿಸಲಾಗಿದೆ. ಸದ್ಯ ಮೇವು ಬ್ಯಾಂಕಿನಲ್ಲಿ 1440 ಕೆ.ಜಿ ಒಣ ಮೇವು ಲಭ್ಯವಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ. ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ. ಗಂಗಾಧರ ಸುಕ್ತೆ, ಡಾ. ವಿಜಯಕುಮಾರ ಹಳಕಟ್ಟಿ, ಡಾ. ಅಣ್ಣಪ್ಪ ಸ್ವಾಮಿ, ಉಪ ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ, ಕಂದಾಯ ನಿರೀಕ್ಷ ಕ ಮಲ್ಲಾಡದ ಸೇರಿದಂತೆ ಉಪಸ್ಥಿತರಿದ್ದರು.
ಈ ವೇಳೆ ತಹಶೀಲ್ದಾರ ಶಿವಕುಮಾರ ಮಾತನಾಡಿ, ಹಾವೇರಿ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಜಾನುವಾರುಗಳಿಗೆ ಮೇವಿನ ಅವಶ್ಯವಿರುವ ಕಾರಣ ಮೇವು ಬ್ಯಾಂಕ್ ಆರಂಭಿಸಲಾಗಿದೆ. ತಾಲೂಕಿನ ರೈತರು ಮೇವು ಖರೀದಿಸಲು ತಮ್ಮ ಹಳ್ಳಿಯ ವ್ಯಾಪ್ತಿಗೆ ಒಳಪಡುವ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಂದ ಜಾನುವಾರು ದೃಢೀಕರಣ ಪತ್ರ ತಂದು ಮೇವು ಪಡೆಯಬೇಕು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಪರಮೇಶ ಎನ್ ಹುಬ್ಬಳ್ಳಿ ಮಾತನಾಡಿ, ದಿನವೊಂದಕ್ಕೆ ಒಂದು ಜಾನುವಾರುವಿಗೆ ಐದು ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಖಾಲಿಯಾದ ನಂತರ ಮತ್ತೆ ಪಡೆಯಬಹುದು. ಒಂದು ಕೆ.ಜಿ ಮೇವಿಗೆ 2 ರೂ. ದರ ನಿಗದಿಪಡಿಸಲಾಗಿದೆ. ಸದ್ಯ ಮೇವು ಬ್ಯಾಂಕಿನಲ್ಲಿ 1440 ಕೆ.ಜಿ ಒಣ ಮೇವು ಲಭ್ಯವಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ. ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿಗಳಾದ ಡಾ. ಗಂಗಾಧರ ಸುಕ್ತೆ, ಡಾ. ವಿಜಯಕುಮಾರ ಹಳಕಟ್ಟಿ, ಡಾ. ಅಣ್ಣಪ್ಪ ಸ್ವಾಮಿ, ಉಪ ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ, ಕಂದಾಯ ನಿರೀಕ್ಷ ಕ ಮಲ್ಲಾಡದ ಸೇರಿದಂತೆ ಉಪಸ್ಥಿತರಿದ್ದರು.