ಆ್ಯಪ್ನಗರ

696 ವಿದ್ಯಾರ್ಥಿಗಳು ಗೈರು

ಹಾವೇರಿ: ಗುರುವಾರ ಆರಂಭಗೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲಾದ್ಯಂತ ಸುಗಮವಾಗಿ ಜರುಗಿತು.

Vijaya Karnataka 22 Mar 2019, 5:00 am
ಹಾವೇರಿ: ಗುರುವಾರ ಆರಂಭಗೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲಾದ್ಯಂತ ಸುಗಮವಾಗಿ ಜರುಗಿತು.
Vijaya Karnataka Web HVR-21 HAVERI 12


ಜಿಲ್ಲೆಯ 73 ಪರೀಕ್ಷೆ ಕೇಂದ್ರಗಳಲ್ಲಿ ಮೊದಲ ದಿನ ಕನ್ನಡ, ಇಂಗ್ಲಿಷ್‌, ಉರ್ದು ಒಳಗೊಂಡಿರುವ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ 20249 ವಿದ್ಯಾರ್ಥಿಗಳಲ್ಲಿ 19553 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅದರಲ್ಲಿ 9646 ಗಂಡು, 9907 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದಾರೆ. 696 ವಿದ್ಯಾರ್ಥಿಗಳು ಪರೀಕ್ಷೆ ಗೈರಾಗಿದ್ದು, ಅದರಲ್ಲಿ 456 ಗಂಡು ಮಕ್ಕಳು, 240 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿಲ್ಲ. ಪರೀಕ್ಷೆಯ ವೇಳೆ ಯಾವುದೇ ನಕಲು ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ತಿಳಿಸಿದರು.

ಪರೀಕ್ಷೆ ಕೇಂದ್ರಗಳಲ್ಲಿ ಸ್ವ್ಕಾಡ್‌, ಸಿಟಿಂಗ್‌ ಸ್ವ್ಕಾಡ್‌ ಸೇರಿದಂತೆ ಪರೀಕ್ಷೆ ವಿಕ್ಷಣೆ ಮಾಡುತ್ತಿದ್ದರು. ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಬಾಯಾರಿಕೆಯಾದರೆ ಕುಡಿಯುವ ನೀರು ಪೂರೈಸಲು ಸಿಬ್ಬಂದಿಗಳ ನೇಮಕ ಮಾಡಲಾಗಿತ್ತು. ಮಕ್ಕಳ ಆರೋಗ್ಯ ಮುನ್ನಚ್ಚೆರಿಕೆಯಿಂದ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಬಂದೋಬಸ್ತ್‌:
ಪರೀಕ್ಷಾ ಕೇಂದ್ರಗಳ ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿಷೇಧಿಸಲಾಗಿದೆ. 200 ಮೀಟರ್‌ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದರಿಂದ ಯಾರೊಬ್ಬರು ಸುಳಿಯದಂತೆ ಪೊಲೀಸ್‌ ಬಿಗಿ ಬದೋಬಸ್ತ್‌ ಕಲ್ಪಿಸಲಾಗಿತ್ತು.

ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೆ. ಹೊರಗಡೆ ಪಾಲಕರು ಕಾಯುತ್ತಾ ಕುಳಿತುಕೊಂಡಿದ್ದರು. ಪರೀಕ್ಷೆ ಮುಗಿಯುವರೆಗೂ ಕೂಡ ಅಲ್ಲಲ್ಲಿ ನಿಂತುಕೊಂಡಿದ್ದರು. ಇನ್ನೂ ಕೆಲವರು ಗುಂಪು ಗುಂಪಾಗಿ ಚರ್ಚೆ ಮಾಡುತ್ತಿರುವುದು ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ