ಆ್ಯಪ್ನಗರ

6ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿಗ್ಗಾವಿ: ತಾಲೂಕಿನ ಕುನ್ನೂರ ಗ್ರಾಮದ ಹೊರವಲಯದಲ್ಲಿಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿಓದುತ್ತಿದ್ದ 6ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

Vijaya Karnataka 10 Dec 2019, 5:00 am
ಶಿಗ್ಗಾವಿ: ತಾಲೂಕಿನ ಕುನ್ನೂರ ಗ್ರಾಮದ ಹೊರವಲಯದಲ್ಲಿಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿಓದುತ್ತಿದ್ದ 6ನೇ ತರಗತಿ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
Vijaya Karnataka Web 6th grade student commits suicide
6ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ


ತಾಲೂಕಿನ ಮಡ್ಲಿಗ್ರಾಮದ ದ್ಯಾಮವ್ವ ಅಶೋಕ ಮರಲಿಂಗಪ್ಪನವರ (12) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.

ಈ ಕುರಿತು ದೂರು ನೀಡಿರುವ ಮೃತಳ ತಂದೆ ಅಶೋಕ ಮರಲಿಂಗಪ್ಪನವರ ಅವರು, ವಸತಿ ನಿಲಯದ ವಾರ್ಡನ್‌ ಆಗಾಗ ವಿದ್ಯಾರ್ಥಿನಿಗೆ ಬೈಯತ್ತಿದ್ದ, ಕಿರಿಕಿರಿ ಮಾಡುತ್ತಿದ್ದಾರೆ ಎಂದು ತಮ್ಮ ಬಳಿ ಹೇಳಿಕೊಂಡಿದ್ದ ಮಗಳಿಗೆ ನಾನು ಮತ್ತು ಹೆಂಡತಿ ಸುಧಾರಿಸಿಕೊಂಡು ಹೋಗಲು ತಿಳಿಸಿದ್ದವು. ಆದರೆ, ಭಾನುವಾರ ವಸತಿ ನಿಲಯದಿಂದ ಫೋನ್‌ ಕರೆ ಮಾಡಿ ನಿಮ್ಮ ಮಗಳಿಗೆ ಅರಾಮ ಇಲ್ಲ. ಬೇಗ ನಿಲಯಕ್ಕೆ ಬರಲು ತಿಳಿಸಿದರು.

ಬೇಗ ಬಂದರೆ ನಿಮ್ಮ ಮಗಳ ಮುಖ ನೋಡಲು ಸಾಧ್ಯ ಎಂದು ತಿಳಿಸಿ ನೇಣು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದರು. ಬೆಳಗ್ಗೆ 10-30ಕ್ಕೆ ಮಗಳನ್ನು ಮಾತನಾಡಿಸಿಕೊಂಡು ಬಂದೆ. ಮಧ್ಯಾಹ್ನ 3-30ಕ್ಕೆ ಸಾವಿನ ಸುದ್ದಿ ಕೇಳಿ ಸಂಜೆ 4-30ಕ್ಕೆ ಅಲ್ಲಿಗೆ ಹೋದಾಗ ಮೇಲಿನ ಕೊಠಡಿಯಿಂದ ಕೆಳಗಿನ ಕೊಠಡಿಗೆ ನನ್ನ ಮಗಳ ಶವ ತಂದು ಹಾಕಿದ್ದರು. ಮಗಳ ಸಾವು ಸಂಶಯ ಮೂಡಿಸಿದೆ ಎಂದು ತಡಸ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿತಿಳಿಸಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ