ಆ್ಯಪ್ನಗರ

ಶಾಲೆ ಪಕ್ಕದಲ್ಲೇ ಶಿಥಿಲ ಟ್ಯಾಂಕ್‌

ರಾಣೇಬೆನ್ನೂರ: ಗ್ರಾಮದ ಜನತೆಗೆ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ಓವರ್‌ಹೆಡ್‌ ಟ್ಯಾಂಕ್‌ ಜನರಿಗೆ ವರವಾಗುವ ಬದಲಾಗಿ ಶಾಪವಾಗುವ ಲಕ್ಷ ಣಗಳು ತಾಲೂಕಿನ ತಿರುಮಲದೇವರಕೊಪ್ಪದಲ್ಲಿ ಕಾಣಬಹುದಾಗಿದೆ.

Vijaya Karnataka 6 Dec 2018, 5:00 am
ರಾಣೇಬೆನ್ನೂರ: ಗ್ರಾಮದ ಜನತೆಗೆ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ಓವರ್‌ಹೆಡ್‌ ಟ್ಯಾಂಕ್‌ ಜನರಿಗೆ ವರವಾಗುವ ಬದಲಾಗಿ ಶಾಪವಾಗುವ ಲಕ್ಷ ಣಗಳು ತಾಲೂಕಿನ ತಿರುಮಲದೇವರಕೊಪ್ಪದಲ್ಲಿ ಕಾಣಬಹುದಾಗಿದೆ.
Vijaya Karnataka Web a dull tank next to the school
ಶಾಲೆ ಪಕ್ಕದಲ್ಲೇ ಶಿಥಿಲ ಟ್ಯಾಂಕ್‌


ಗ್ರಾಮದ ರಂಗನಾಥಸ್ವಾಮಿ ದೇವಾಲಯ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಟ್ಯಾಂಕ್‌ ನಾಲ್ಕು ವರ್ಷಗಳಿಂದ ಸೋರುತ್ತಿದ್ದು ಯಾವುದೇ ಕ್ಷ ಣದಲ್ಲಿ ಧರೆಗುರುಳುವ ಎಲ್ಲ ಸಾಧ್ಯತೆಗಳಿವೆ.

ಈ ಕುರಿತು ಗ್ರಾಮಸ್ಥರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ನೀರಿನ ಟ್ಯಾಂಕ್‌ ಸ್ಥಿತಿ: ಟ್ಯಾಂಕಿನ ತಳಭಾಗದಲ್ಲಿ ಬಿರುಕು ಬಿಟ್ಟಿದ್ದು ಸಿಮೆಂಟ್‌ ಕಿತ್ತು ಹೋಗಿದೆ. ನೀರು ತುಂಬಿದಾಗ ಸೋರಿಕೆ ಹೆಚ್ಚಾಗಿ ಪಾಚಿ ಹುಟ್ಟಿಕೊಂಡಿದೆ. ಮೇಲ್ಭಾದಲ್ಲಿನ ಕಬ್ಬಿಣದ ಸಲಾಕೆಗಳು ಅಸ್ಥಿಪಂಜರದಂತೆ ಗೋಚರಿಸುತ್ತಿವೆ. ಇದನ್ನೆಲ್ಲಾ ಗಮನಿಸಿದರೆ ಟ್ಯಾಂಕ್‌ ಈಗಲೋ ಆಗಲೋ ಬೀಳುವ ಪರಿಸ್ಥಿತಿಯಲ್ಲಿದೆ.

ಭಯದಲ್ಲಿ ವಿದ್ಯಾರ್ಥಿಗಳು: ಟ್ಯಾಂಕ್‌ ಪಕ್ಕದಲ್ಲಿರುವ ಶಾಲೆಯಲ್ಲಿ 50 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಟ್ಯಾಂಕ್‌ನಿಂದಾಗಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಟ್ಯಾಂಕ್‌ ಅನತಿ ದೂರದಲ್ಲಿಯೇ ಬೇರೊಂದು ಟ್ಯಾಂಕ್‌ ನಿರ್ಮಿಸಲು ಜಾಗವಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ