ಆ್ಯಪ್ನಗರ

ಪೈಪ್‌ ಒಡೆದು ಕೆರೆಯಂತಾದ ಉದ್ಯಾನ

ಹಿರೇಕೆರೂರ: ಪಟ್ಟಣದ ಜನತೆಗೆ ಒದಗಿಸುವ ಕುಡಿಯುವ ನೀರಿನ ಯೋಜನೆಯ ಪೈಪ್‌ ಒಡೆದ ಪರಿಣಾಮ ಜಿ.ಬಿ.ಶಂಕರ್‌ರಾವ್‌ ವೃತ್ತದ ಬಳಿ ಇರುವ ದುರ್ಗಾದೇವಿ ಉದ್ಯಾನವನಕ್ಕೆ ನೀರು ನುಗ್ಗಿದ್ದರಿಂದ ಉದ್ಯಾನವನದಲ್ಲಿನೀರು ನಿಂತು ಈಗ ಕೆರೆಯಂತಾಗಿದೆ.

Vijaya Karnataka 23 Jan 2020, 5:00 am
ಹಿರೇಕೆರೂರ: ಪಟ್ಟಣದ ಜನತೆಗೆ ಒದಗಿಸುವ ಕುಡಿಯುವ ನೀರಿನ ಯೋಜನೆಯ ಪೈಪ್‌ ಒಡೆದ ಪರಿಣಾಮ ಜಿ.ಬಿ.ಶಂಕರ್‌ರಾವ್‌ ವೃತ್ತದ ಬಳಿ ಇರುವ ದುರ್ಗಾದೇವಿ ಉದ್ಯಾನವನಕ್ಕೆ ನೀರು ನುಗ್ಗಿದ್ದರಿಂದ ಉದ್ಯಾನವನದಲ್ಲಿನೀರು ನಿಂತು ಈಗ ಕೆರೆಯಂತಾಗಿದೆ.
Vijaya Karnataka Web a garden with a pipe breaking lake
ಪೈಪ್‌ ಒಡೆದು ಕೆರೆಯಂತಾದ ಉದ್ಯಾನ


ಪಟ್ಟಣ ಪಂಚಾಯತಿಯ 7ನೇ ವಾರ್ಡ್‌ ವ್ಯಾಪ್ತಿಗೆ ಒಳಪಟ್ಟಿರುವ ದುರ್ಗಾದೇವಿ ಉದ್ಯಾನವನದಲ್ಲಿಹಾಕಿರುವ ದೊಡ್ಡ ಗಾತ್ರದ ಪೈಪುಗಳನ್ನು ಕಿಡಗೇಡಿಗಳು ಒಡೆದು ಹಾಕಿದ್ದಾರೆ. ಇದರಿಂದ ತುಂಗಭದ್ರಾ ನದಿ ಮೂಲದಿಂದ ಪಟ್ಟಣದ ಜನತೆಗೆ ಒದಗಿಸುವ ಕುಡಿಯುವ ನೀರು ಸಮರ್ಪಕವಾಗಿ ಪಟ್ಟಣ ನಿವಾಸಿಗಳಿಗೆ ದೊರೆಯದೆ, ದೊಡ್ಡ ಪ್ರಮಾಣದಲ್ಲಿನೀರು ಹರಿದು ವ್ಯರ್ಥವಾಗುತ್ತಿದೆ.

ನಿರ್ಲಕ್ಷತ್ರ್ಯ:
ಪ್ರತಿ ತಿಂಗಳು ಕುಡಿಯುವ ನೀರಿಗಾಗಿ ಲಕ್ಷಾಂತರ ರೂ.ಗಳನ್ನು ಹೆಸ್ಕಾಂಗೆ ವಿದ್ಯುತ್‌ ಸುಡುತಿಬಿಲ್ಲನ್ನು ತುಂಬಲಾಗುತ್ತಿದೆ. ವಸ್ತು ಸ್ಥಿತಿ ಹೀಗಿದ್ದರು ಒಡೆದಿರುವ ಪೈಪ್‌ಅನ್ನು ದುರಸ್ಥಿಪಡಿಸಲು ಪಟ್ಟಣ ಪಂಚಾಯತಿ ಅವರು ನಿರ್ಲಕ್ಷತ್ರ್ಯ ತೋರುತ್ತಿದ್ದಾರೆ. ಇದರಿಂದ ಕುಡಿಯುವ ನೀರಿನ ರೂಪದಲ್ಲಿಪ್ರತಿ ತಿಂಗಳು ಲಕ್ಷಾಂತರ ರೂ.ಗಳು ಖರ್ಚಾಗುತ್ತಿದೆ.

ಸುಮಾರು 2 ತಿಂಗಳಿಂದ ಪೈಪ್‌ಲೈನ್‌ ಒಡೆದು ನೀರು ಪೋಲಾಗುತ್ತಿದೆ, ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಒಡೆದಿರುವ ಪೈಪ್‌ಲೈನ್‌ಅನ್ನು ದುರಸ್ಥಿಪಡಿಸಿ, ಪೋಲಾಗುತ್ತಿರುವ ನೀರನ್ನು ತಡೆಯುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

2 ದಿನದಲ್ಲಿ ದುರಸ್ಥಿ: ದುರ್ಗಾದೇವಿ ಉದ್ಯಾನವನದಲ್ಲಿಹಾಕಿರುವ ಪೈಪ್‌ಲೈನ್‌ನ್ನು ಕಿಡಗೇಡಿಗಳು ಜಖಂಗೊಳಿಸಿದ್ದಾರೆ. ಉದ್ಯಾನವನದಲ್ಲಿದ್ದ ನಳಗಳನ್ನು ಕಿತ್ತುಹಾಕಿದ್ದಾರೆ, ಇದರಿಂದ ನೀರು ಪೋಲಾಗುತ್ತಿದೆ 2 ದಿನಗಳೊಳಗಾಗಿ ಪೈಪ್‌ಲೈನ್‌ ದುರಸ್ಥಿಗೊಳಿಸಲಾಗುವುದು ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ರಾಜಾರಾಂ ಪವಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ