ಆ್ಯಪ್ನಗರ

ನೋಟಾಗೆ ಭರ್ಜರಿ ಮತಗಳ ಪೇಟ

ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾರ ಪ್ರಭುಗಳು ನೋಟಾಗೆ ಫಿದಾ ಆಗಿ ಭರ್ಜರಿ ಮತಗಳ ಪೇಟಾ ತೊಡಿಸಿದ್ದಾರೆ.

Vijaya Karnataka 10 Dec 2019, 5:00 am
ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾರ ಪ್ರಭುಗಳು ನೋಟಾಗೆ ಫಿದಾ ಆಗಿ ಭರ್ಜರಿ ಮತಗಳ ಪೇಟಾ ತೊಡಿಸಿದ್ದಾರೆ.
Vijaya Karnataka Web a grand ballot for nota
ನೋಟಾಗೆ ಭರ್ಜರಿ ಮತಗಳ ಪೇಟ


2018 ರ ಜಿಲ್ಲೆಯ ಆರೂ ವಿಧಾನ ಸಭಾ ಕ್ಷೇತ್ರಗಳಲ್ಲಿಜರುಗಿದ ಸಾರ್ವತ್ರಿಕ ಚುನಾವಣೆಗಿಂತ ಈ ಉಪ ಸಮರಕ್ಕೆ ಎರಡೂ ಕ್ಷೇತ್ರದಲ್ಲಿ2300 ಕ್ಕೂ ಅಧಿಕ ನೋಟಾ ಮತಗಳನ್ನು ಹಾಕಿದ್ದಾರೆ. ಈ ಮತಗಳ ಪ್ರಮಾಣ ಕ್ಷೇತ್ರದ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಿದ್ದಾರೆ ಎನ್ನುವುದನ್ನು ಈ ಮೂಲಕ ಸಾಕ್ಷೀಕರಿಸಿದ್ದಾರೆ.

ಉಪ ಚುನಾವಣೆಯಲ್ಲಿಹಿರೇಕೆರೂರ ಕ್ಷೇತ್ರದಲ್ಲಿಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ 85562 ಮತಗಳನ್ನು ಪಡೆದಿದ್ದರೆ, ಪರಾಭವಗೊಂಡಿರುವ ಕಾಂಗ್ರೆಸ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ 56495 ಮತಗಳನ್ನು ಪಡೆದಿದ್ದಾರೆ. ಕಣದಲ್ಲಿದ್ದ ಇನ್ನಿತರ 7 ಪಕ್ಷೇತರ ಅಭ್ಯರ್ಥಿಗಳು ಪಡೆದಿರುವ ಮತಗಳ ಸಂಖ್ಯೆಗೆ ಹೋಲಿಸಿದಲ್ಲಿ789 ನೋಟಾ ಮತಗಳು ಮೂರನೇ ಸ್ಥಾನಕ್ಕೇರಿರುವುದು ವಿಶೇಷತೆಗೆ ಸಾಕ್ಷಿಯಾಗಿದೆ.

ಕಳೆದ ಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಪ್ರತಿಸ್ಪರ್ಧಿ ಕಾಂಗ್ರೆಸ ಅಭ್ಯರ್ಥಿ ಬಿ.ಸಿ. ಪಾಟೀಲ ಅವರಿಂದ ಕೇವಲ 555 ಮತಗಳ ಅಂತರದಲ್ಲಿಸೋಲು ಕಂಡಿದ್ದರು. ಈ ವೇಳೆ ನೋಟಾಗೆ ಬಿದ್ದಿದ್ದ 900 ಕ್ಕೂ ಅಧಿಕ ಮತಗಳು ಬಣಕಾರ ಅವರಿಗೆ ಸೋಲಿ ಸಲು ಕಾರಣವಾದವು ಎನ್ನುವುದು ಇಲ್ಲಿಗಮನಾರ್ಹ. ಈ ಬಾರಿ 789 ಮತಗಳ ಮೂಲಕ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಗೆಲುವಿಗೆ ಪ್ಲಸ್‌ ಆಗಿವೆ.

ರಾಣೇಬೆನ್ನೂರ ಕ್ಷೇತ್ರದಲ್ಲಿಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಮತ್ತು ಸೋತಿರುವ ಕಾಂಗ್ರೆಸ ಅಭ್ಯರ್ಥಿ ಕೆ.ಬಿ. ಕೋಳಿವಾಡ ನಂತರ 1608 ನೋಟಾ ಮತಗಳು ಮೂರನೇ ಸ್ಥಾನದಲ್ಲಿವೆ. ಅಖಾಡಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಗಳು ಪಡೆ ದಿರುವ ಮತಗಳಿಗಿಂತ ನೋಟಾ. ಮತಗಳಿಗೆ ಮನ್ನಣೆ ಸಿಕ್ಕಿರುವುದು ಸಹ ವಿಶೇಷವಾಗಿದೆ.

ಕಳೆದ ಚುನಾವಣೆಯಲ್ಲಿ1400 ಕ್ಕೂ ಅಧಿಕ ನೋಟಾ ಮತಗಳು ಸಾರ್ವತ್ರಿಕ ಚುನಾವಣೆ ಮೂಲಕ ಗಮನ ಸೆಳೆದಿದ್ದರೆ. ಈ ಉಪ ಚುನಾವಣೆಯಲ್ಲಿಅವುಗಳ ಸಂಖ್ಯೆಯನ್ನು 1608 ಕ್ಕೇರಿಸುವ ಮೂಲಕ ಮತದಾರ ಪ್ರಭುಗಳು ತಮ್ಮ ಮತಾದೇಶ ಏನು ಎನ್ನುವುದನ್ನು ನಿರೂಪಿಸಿ ದ್ದಾರೆ.

ಒಟ್ಟಿನಲ್ಲಿಜಿಲ್ಲೆಯ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿಗೆದ್ದ ಮತ್ತು ಸೋತ ಅಭ್ಯರ್ಥಿ ಗಳ ನಂತರ ನೋಟಾ ಮತಗಳು ಮೂರನೇ ಸ್ಥಾನಕ್ಕೇರಿರುವುದು ವಿಶೇಷವಾಗಿದೆ. ಮತದಾರ ಪ್ರಭುಗಳ ಈ ನೋಟಾ ಪೇಟಾ ಭವಿಷ್ಯದ ರಾಜಕಾರಣಕ್ಕೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆ ಯುವ ಸ್ಪಷ್ಠ ಸಂದೇಶ ರವಾನಿಸಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ