ಆ್ಯಪ್ನಗರ

ನೂತನ ಶಾಸಕರ ಅದ್ಧೂರಿ ಮೆರವಣಿಗೆ

ರಾಣೇಬೆನ್ನೂರ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಯ ಅರುಣಕುಮಾರ ಪೂಜಾರ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೋಮವಾರ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಭವ್ಯ ಸ್ವಾಗತ ಕೋರಿದರು.

Vijaya Karnataka 10 Dec 2019, 5:00 am
ರಾಣೇಬೆನ್ನೂರ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಯ ಅರುಣಕುಮಾರ ಪೂಜಾರ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೋಮವಾರ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಭವ್ಯ ಸ್ವಾಗತ ಕೋರಿದರು.
Vijaya Karnataka Web a grand procession of new legislators
ನೂತನ ಶಾಸಕರ ಅದ್ಧೂರಿ ಮೆರವಣಿಗೆ


ಫಲಿತಾಂಶ ಪ್ರಕಟವಾದ ನಂತರ ಹಾವೇರಿಯಿಂದ ನಗರಕ್ಕೆ ಆಗಮಿಸಿದ ನೂತನ ಶಾಸಕ ಅರುಣಕುಮಾರ ಮೊದಲಿಗೆ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು. ನಂತರ ತೆರೆದ ವಾಹನದಲ್ಲಿಅವರನ್ನು ಮೆರವಣಿಗೆ ಮೂಲಕ ಸಹಸ್ರಾರು ಜನರ ಸಂಭ್ರಮದೊಂದಿಗೆ ಕುರುಬಗೇರಿ ಕ್ರಾಸ್‌, ದುರ್ಗಾ ಸರ್ಕಲ್‌, ಎಂ.ಜಿ.ರಸ್ತೆ, ಪೊಸ್ಟ್‌ ಸರ್ಕಲ್‌ ಮಾರ್ಗವಾಗಿ ಸ್ಟೇಷನ್‌ ರಸ್ತೆಯ ಪಕ್ಷದ ಕಚೇರಿವರೆಗೂ ಕರೆದುಕೊಂಡು ಹೋಗಲಾಯಿತು.

ಗೆಲುವಿನ ಸಂತಸದಲ್ಲಿದ್ದ ಅರುಣಕುಮಾರ ತಮ್ಮತ್ತ ಕೈ ಬೀಸುತ್ತಿದ್ದ ಅಭಿಮಾನಿಗಳೆಡೆ ನಮಸ್ಕರಿಸುತ್ತಿದ್ದ ದೃಶ್ಯ ಕಂಡುಬಂದಿತು. ಮೆರವಣಿಗೆ ಪ್ರಾರಂಭದಿಂದ ಕೊನೆಯವರೆಗೂ ದಾರಿಯುದ್ದಕ್ಕೂ ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಕುರುಬಗೇರಿ ಕ್ರಾಸ್‌ ಬಳಿ ಜನರಿಗಾಗಿ ಪಲಾವ್‌ ವ್ಯವಸ್ಥೆ ಮಾಡಲಾಗಿತ್ತು.

ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಆರ್‌.ಶಂಕರ್‌, ಹರಿಹರದ ಮಾಜಿ ಶಾಸಕ ಬಿ.ಪಿ.ಹರೀಶ, ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಭಾರತಿ ಜಂಬಗಿ, ಚೋಳಪ್ಪ ಕಸವಾಳ, ಕರಿಯಪ್ಪ ತೋಟಗೇರ, ಗೀತಾ ರವೀಂದ್ರ, ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಚೆನ್ನಮ್ಮ ಗುರುಪಾದೇವರಮಠ, ರೂಪಾ ಬಾಕಳೆ, ಶಶಿಕಲಾ ಮಾಗನೂರ ಮತ್ತಿತರರು ಮೆರವಣಿಗೆ ವಾಹನದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ