ಆ್ಯಪ್ನಗರ

ಹುಲ್ಲತ್ತಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ

ಹಿರೇಕೆರೂರು: ರಟ್ಟೀಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಸೆ.16ರಂದು ಬೆಳಗ್ಗೆ 8.30ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯತ್‌ ಆಶ್ರಯದಲ್ಲಿಹಿರೇಕೆರೂರ ತಾಲೂಕು ಮಟ್ಟದ 14ವರ್ಷದೊಳಗಿನ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಏರ್ಪಡಿಸಲಾಗಿದೆ.

Vijaya Karnataka 15 Sep 2019, 5:00 am
ಹಿರೇಕೆರೂರು: ರಟ್ಟೀಹಳ್ಳಿ ತಾಲೂಕಿನ ಹುಲ್ಲತ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಸೆ.16ರಂದು ಬೆಳಗ್ಗೆ 8.30ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯತ್‌ ಆಶ್ರಯದಲ್ಲಿಹಿರೇಕೆರೂರ ತಾಲೂಕು ಮಟ್ಟದ 14ವರ್ಷದೊಳಗಿನ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಏರ್ಪಡಿಸಲಾಗಿದೆ.
Vijaya Karnataka Web a primary school childrens sporting event in hullatti village
ಹುಲ್ಲತ್ತಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ


ಗ್ರಾಮದ ಶ್ರೀ ಲಕ್ಷಿತ್ರ್ಮೕನರಸಿಂಹ ಮಠದ ಶ್ರೀ ಬಸವರಾಜ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಿ.ಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಓಲಿಂಪಿಕ್‌ ಧ್ವಜಾರೋಹಣ ನೆರವೇರಿಸುವರು. ಎಸ್‌ಡಿಎಂಸಿ ಅಧ್ಯಕ್ಷ ಪರಮೇಶಪ್ಪ ಹಾದ್ರೀಹಳ್ಳಿ ಅಧ್ಯಕ್ಷತೆ ವಹಿಸುವರು. ಗ್ರಾಪಂ ಅಧ್ಯಕ್ಷ ವೀರನಗೌಡ ಬಿದರಿ, ಜಿಪಂ ಸದಸ್ಯ ಎನ್‌.ಎಂ.ಈಟೇರ್‌ ಕ್ರೀಡಾ ಜ್ಯೋತಿ ಬೆಳಗಿಸುವರು. ತಾಪಂ ಅಧ್ಯಕ್ಷ ಹೇಮಪ್ಪ ಮುದಿರೆಡ್ಡಿ ಕ್ರೀಡಾಕೂಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ದಿಳ್ಳೆಪ್ಪ ಹಳ್ಳಳ್ಳಿ, ಜಿ.ಪಂ ಸದಸ್ಯರಾದ ಸುಮಿತ್ರಾ ಪಾಟೀಲ್‌, ಶಿವರಾಜ ಹರಿಜನ, ಪ್ರಕಾಶ ಬನ್ನಿಕೋಡ್‌, ಮಾದೇವಕ್ಕ ಗೋಪಕ್ಕಳಿ, ತಾ.ಪಂ ಉಪಾಧ್ಯಕ್ಷೆ ಕವಿತಾ ಬಿದರಿ, ಗ್ರಾ.ಪಂ ಉಪಾದ್ಯಕ್ಷೆ ಈರಮ್ಮ ಕಟ್ಟೆಕಾರ್‌, ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ ಹಿರೇಗೌಡ್ರ, ಎಪಿಎಂಸಿ ಉಪಾಧ್ಯಕ್ಷ ಬೂತಲಿಂಗಪ್ಪ ಅಬಲೂರು, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಚಂದ್ರಪ್ಪ ಬೂದಿಹಾಳ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾಗಪ್ಪ ದಿವಿಗೀಹಳ್ಳಿ, ವಿಎಸ್‌ಎಸ್‌ ಬ್ಯಾಂಕ್‌ ಅದ್ಯಕ್ಷ ರಾಮಚಂದ್ರಪ್ಪ ದಿವಿಗೀಹಳ್ಳಿ ಹಾಗೂ ಮತ್ತಿತರರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ