ಆ್ಯಪ್ನಗರ

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಕಚ್ಚಿದ ಬೀದಿ ನಾಯಿ

ಬಂಕಾಪುರ: ಪಟ್ಟಣದಲ್ಲಿಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಮನೆಯಂಗಳದಲ್ಲಿಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಸೇರಿ ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.

Vijaya Karnataka 11 Sep 2019, 5:00 am
ಬಂಕಾಪುರ: ಪಟ್ಟಣದಲ್ಲಿಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಮನೆಯಂಗಳದಲ್ಲಿಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಸೇರಿ ನಾಲ್ವರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web a street dog biting a boy playing in the house
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಕಚ್ಚಿದ ಬೀದಿ ನಾಯಿ


ಖತೀಬ ನಗರದ ಮುಜಫರ್‌ ಇರ್ಫಾನಸಾಬ ಬೆಂಡಿಗೇರಿ (4) ಬಾಲಕ ಭಾನುವಾರ ಮನೆಯಂಗಳದಲ್ಲಿಆಟವಾಡುತ್ತಿರುವಾಗ ನಾಯಿಗಳು ದಾಳಿ ಮಾಡಿ ಕುತ್ತಿಗೆ, ಮುಖ ಕಚ್ಚಿ ಎಳೆದಾಡುತ್ತಿದ್ದವು. ಮಗುವಿನ ಚೀರಾಟ ಗಮನಿಸಿದ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ. ನಂತರ ಬಂಕಾಪುರ ಸಮುದಾಯ ಕೇಂದ್ರದಲ್ಲಿಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಇದೇ ರೀತಿ, ಸುಂಕದಕೇರಿ, ಮಾಗಿಕೇರಿಯ ಮೂರು ಜನರನ್ನು ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಗಾಯಗೊಂಡ ಮಗುವಿನೊಂದಿಗೆ ಪೊಲೀಸ್‌ ಠಾಣೆಯಲ್ಲಿಪುರಸಭೆ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಆಗ ಸ್ಥಳೀಯರನ್ನು ಸಮಾಧಾನಪಡಿಸಿದ ಪೊಲೀಸರು ಮೊದಲು ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಕ ಹೆಚ್ಚಿನ ಚಿಕಿತ್ಸೆಗೆ ಹೋಗಿದ್ದಾರೆ.

ಪಟ್ಟಣದ ಖತೀಬ ಪ್ಲಾಟ್‌ ಪುರಸಭೆ ಗಾಂವಠಾಣ ಜಾಗೆಯಲ್ಲಿಕಸಾಯಿಖಾನೆ ಮತ್ತು ಮಾಂಸದ ಮಾರುಕಟ್ಟೆಯಿದ್ದು ಜಾನುವಾರುಗಳ ತ್ಯಾಜ್ಯ, ಮಾಂಸದ ತುಂಡುಗಳನ್ನು ತಿನ್ನಲು ನಿತ್ಯ ನಾಯಿಗಳ ಗುಂಪು ಕಾದಾಡುತ್ತವೆ. ಇದರ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಸರಕಾರಿ ಉರ್ದು ಪ್ರಾಥಮಿಕ ಶಾಲೆ, ಶಾದಿ ಮಹಲ್‌ ಇರುವುದರಿಂದ ಈ ಮಾರ್ಗ ಸಂಚರಿಸುವ ಮಕ್ಕಳು, ಮಹಿಳೆಯರು ಭಯದಲ್ಲಿಯೇ ಸಂಚರಿಸುವಂತಾಗಿದೆ.

ಪುರಸಭೆ ಅಧಿಕಾರಿಗಳು ತಕ್ಷಣ ಬೀದಿನಾಯಿಗಳನ್ನು ನಿಯಂತ್ರಿಸುವುದಲ್ಲದೇ, ಕಸಾಯಿಖಾನೆ ಮತ್ತು ಮಾಂಸದ ಮಾರುಕಟ್ಟೆಯನ್ನು ತೆರವುಗೊಳಿಸಬೇಕು ಎಂದು ಇಸ್ಮಾಯಿಲ್‌ ಬಾವಿ, ಪುರಸಭೆ ಸದಸ್ಯ ಸಿದ್ದಿಖ ಖತೀಬ, ಇಮ್ತಿಯಾಜ್‌ ಕರಜಗಿ, ಅಲ್ಪಾಫ್‌ ದುಕಾನದಾರ, ಅಲ್ಪಾಫ್‌ ಯಲವಿಗಿ, ಅಬ್ದುಲ್‌ರಜಾಕ ಡೊರಳ್ಳಿ, ನೂರಹ್ಮದ ಪಟೇಲ, ನೌಶಾದಅಹ್ಮದ ಕನವಳ್ಳಿ, ಮಖಬೂಲ್‌ ಕನವಳ್ಳಿ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ