ಆ್ಯಪ್ನಗರ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

ರಟ್ಟೀಹಳ್ಳಿ: ಶಿಕ್ಷಣವು ಮಗುವಿನ ಮೂಲ ಹಕ್ಕಾಗಿದ್ದು, ಸಮಾಜದಲ್ಲಿರುವ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಎನ್‌.ವಿ.ನಾಯಕ ಹೇಳಿದರು.

Vijaya Karnataka 11 Jan 2020, 5:00 am
ರಟ್ಟೀಹಳ್ಳಿ: ಶಿಕ್ಷಣವು ಮಗುವಿನ ಮೂಲ ಹಕ್ಕಾಗಿದ್ದು, ಸಮಾಜದಲ್ಲಿರುವ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಎನ್‌.ವಿ.ನಾಯಕ ಹೇಳಿದರು.
Vijaya Karnataka Web a survey of children who dropped out of school
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ


ಶುಕ್ರವಾರ ರಟ್ಟೀಹಳ್ಳಿ ಹೊರವಲಯದಲ್ಲಿರುವ ಟೆಂಟ್‌ಗಳಿಗೆ ಭೇಟಿ ನೀಡಿ, ಸಮಗ್ರ ಶಿಕ್ಷಣ ಕರ್ನಾಟಕದಡಿಯಲ್ಲಿಜ. 8 ರಿಂದ 13 ರವರೆಗೆ ನಡೆಸಲಾಗುತ್ತಿರುವ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯದಲ್ಲಿಭಾಗವಹಿಸಿ ಮಾತನಾಡಿದರು. ಇಲಾಖೆಯು 6 ರಿಂದ 14 ವರ್ಷದೊಳಗಿನ ಎಲ್ಲಮಕ್ಕಳನ್ನು ತಮ್ಮ ನೆರೆ ಹೊರೆಯ ಶಾಲೆಗಳಿಗೆ ಸೇರಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಎಲ್ಲಸ್ತರಗಳ ಮಕ್ಕಳೂ ತಮ್ಮ ಸಾಮಾಜಿಕ-ಅರ್ಥಿಕ ಹಿನ್ನೆಲೆಗಳನ್ನು ಲೆಕ್ಕಿಸದೇ ಶಾಲೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳುತ್ತಿದೆ. ಯಾವುದೇ ಮಗುವು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ಗುರುತಿಸಿದ ಶಾಲೆಗೆ ಗೈರಾಗಿದ್ದ ಒಂದು ಮಗುವನ್ನು ರಟ್ಟೀಹಳ್ಳಿಯ ಕೆ.ಜಿ.ಎಸ್‌ ಶಾಲೆಗೆ ದಾಖಲಿಸಲಾಯಿತು. ಬಿಆರ್‌ಪಿ ಎಸ್‌.ಕೆ.ಶಿಕಾರಿಪುರ, ಸಿಆರ್‌ಪಿಗಳಾದ ಎಚ್‌.ಬಿ.ಮಕರಿ,ಪಿ.ಹೆಚ್‌.ತಿಮಲಾಪುರ ಮುಖ್ಯ ಶಿಕ್ಷಕರುಗಳಾದ ಜಿ.ಆರ್‌.ಹಾರ್ನಳ್ಳಿ, ವಿ.ಆರ್‌.ಪೂಜಾರ, ಎಂ.ಡಿ.ಮೆಡ್ಲೇರಿ, ಜೆ,ಹೆಚ್‌.ಕೂಲಂಬಿ, ಆರ್‌.ಬಿ.ಕಿರಗೇರಿ, ಪಿ.ಎಸ್‌.ನೇಕಾರ, ಪಿ.ಡಿ.ಪಾಟೀಲ, ಆರ್‌.ಎಂ.ಕುಲಕರ್ಣಿ ಸಮೀಕ್ಷಾ ಕಾರ್ಯದಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ