ಆ್ಯಪ್ನಗರ

ಆಧಾರ್‌ ನೋಂದಣಿ ಪುನಾರಂಭ

ಹಾವೇರಿ: ಕೋವಿಡ್‌ ಹಿನ್ನೆಲೆಯಲ್ಲಿಸ್ಥಗಿತಗೊಳಿಸಲಾದ ಆಧಾರ್‌ ನೋಂದಣಿಯನ್ನು ಕೋವಿಡ್‌ ಸುರಕ್ಷಾ ಮಾನದಂಡ ಅನುಸರಿಸಿ ಸರಕಾರದ ಆದೇಶದಂತೆ ಪುನರ್‌ ಆರಂಭಿಸುವಂತೆ ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ನಿರ್ದೇಶನ ನೀಡಿದ್ದಾರೆ.

Vijaya Karnataka 18 May 2020, 5:00 am
ಹಾವೇರಿ: ಕೋವಿಡ್‌ ಹಿನ್ನೆಲೆಯಲ್ಲಿಸ್ಥಗಿತಗೊಳಿಸಲಾದ ಆಧಾರ್‌ ನೋಂದಣಿಯನ್ನು ಕೋವಿಡ್‌ ಸುರಕ್ಷಾ ಮಾನದಂಡ ಅನುಸರಿಸಿ ಸರಕಾರದ ಆದೇಶದಂತೆ ಪುನರ್‌ ಆರಂಭಿಸುವಂತೆ ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ನಿರ್ದೇಶನ ನೀಡಿದ್ದಾರೆ.
Vijaya Karnataka Web aadhaar registration restarted
ಆಧಾರ್‌ ನೋಂದಣಿ ಪುನಾರಂಭ


ಜಿಲ್ಲೆಯ ಆಧಾರ್‌ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಸ್ಪಂದನ, ಕರ್ನಾಟಕ ಒನ್‌, ಅಂಚೆ ಕಚೇರಿಗಳಲ್ಲಿಸಾರ್ವಜನಿಕರಿಗೆ ಆಧಾರ್‌ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲಾಆಧಾರ್‌ ಕೇಂದ್ರಗಳ ಆವರಣದಲ್ಲಿಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಬಳಸುವ ಕಂಪ್ಯೂಟರ್‌, ಪ್ರಿಂಟರ್‌, ಐರಿಸ್‌ ಹಾಗೂ ಇನ್ನಿತರ ಸಾಧನೆಗಳನ್ನು ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸಿ ಸೇವೆ ಪ್ರಾರಂಭಿಸಬೇಕು. ಪ್ರತಿ ದಾಖಲಾತಿ ಮತ್ತು ನವೀಕರಣದ ನಂತರ ಆಪರೇಟರ್‌ಗಳು ಬಯೋಮೆಟ್ರಿಕ್‌ ಸಾಧನಗೆಳನ್ನು ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಆಧಾರ್‌ ನೋಂದಣಿ ಕೇಂದ್ರದಲ್ಲಿಕಾರ್ಯನಿರ್ವಹಿಸುವ ಎಲ್ಲಸಿಬ್ಬಂದಿ ಆಗಾಗ್ಗೆ ಕೈಗಳನ್ನು ಸೋಪ್‌ನಿಂದ ಅಥವಾ ಸ್ಯಾನಿಟೈಜರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನೋಂದಣಿಯಲ್ಲಿಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು (ಕನಿಷ್ಠ ಒಂದು ಮೀಟರ್‌). ಕೆಲಸ ಮಾಡುವಾಗ ಸಿಬ್ಬಂದಿ ಮೂಗು, ಕಣ್ಣು, ಬಾಯಿ ಮುಟ್ಟುವುದನ್ನು ತಪ್ಪಿಸಬೇಕು. ಆಧಾರ್‌ ನೋಂದಣಿ ಕೇಂದ್ರದಲ್ಲಿಕಡ್ಡಾಯವಾಗಿ ಫೇಸ್‌ ಮಾಸ್ಕ್‌ ಧರಿಸಬೇಕು. ಮುಖವನ್ನು ಸೆರೆಹಿಡಿಯುವ ಸಮಯದಲ್ಲಿಮಾತ್ರ ನಿವಾಸಿಗಳು ಮುಖವಾಡವನ್ನು ತಾತ್ಪೂರ್ತಿಕವಾಗಿ ತೆಗೆಯಬೇಕು. ಆಧಾರ್‌ ಕೇಂದ್ರಕ್ಕೆ ಭೇಟಿ ನೀಡುವವರು ವೈಯಕ್ತಿಕ ನೈರ್ಮಲ್ಯ ಅನುಸರಿಸಬೇಕು. ಸಾರ್ವಜನಿಕರಿಗೆ ಕುಳಿತುಕೊಳ್ಳುವ ಆಸನಗಳು ಸಾಮಾಜಿಕ ಅಂತರದಿಂದ ಕೂಡಿರಬೇಕು. ಕೆಮ್ಮು, ಜ್ವರ, ಮುಂತಾದ ಲಕ್ಷಣಗಳು ಹೊಂದಿರುವ ಸಾರ್ವಜನಿಕರು ಅಥವಾ ಸಿಬ್ಬಂದಿ ಇತ್ಯಾದಿ ತೊಂದರೆಗಳು ಇರುವವರು ಕೇಂದ್ರಕ್ಕೆ ಬರದಂತೆ ಸೂಚಿಸಬೇಕು. ಆಧಾರ್‌ ನೋಂದಣಿ ಮಾಡುವ ಸಿಬ್ಬಂದಿಗಳು ಸ್ವ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಇವು ಕಡ್ಡಾಯ
*ಸ್ಯಾನಿಟೈಜರ್‌ ಬಳಕೆ ಕಡ್ಡಾಯ
*ಸಾಮಾಜಿಕ ಅಂತರ ಪಾಲನೆ
*ಫೇಸ್‌ ಮಾಸ್ಕ್‌ ಧರಿಸಬೇಕು
*ವೈಯಕ್ತಿಕ ನೈರ್ಮಲ್ಯ ಅಗತ್ಯ
*ಕೆಮ್ಮು, ಜ್ವರವಿದ್ದರೆ ಬರಬೇಡಿ

ಎಲ್ಲೆಲ್ಲಿನೋಂದಣಿ?
*ಆಧಾರ್‌ ಕೇಂದ್ರ
*ಅಟಲ್‌ಜೀ ಜನಸ್ನೇಹಿ ಕೇಂದ್ರ
*ಸ್ಪಂದನ ಕೇಂದ್ರ
*ಕರ್ನಾಟಕ ಒನ್‌
*ಅಂಚೆ ಕಚೇರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ