ಆ್ಯಪ್ನಗರ

ಸಭೆಗೆ ಗೈರುಹಾಜರಿ: ಅಧಿಕಾರಿಗಳಿಗೆ ನೋಟಿಸ್‌

ಶಿಗ್ಗಾವಿ: ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕಾದ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಕೆಡಿಪಿ ಸಭೆಗೆ ಹಾಜರಾಗುವಂತೆ ಮುಂಜಾಗೃತವಾಗಿ ನೋಟಿಸ್‌ ನೀಡಿದ್ದರೂ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವಂತೆ ಗ್ರಾಪಂ ಅಧ್ಯಕ್ಷ ಪರಶುರಾಮ ಜಟ್ಟೇಪ್ಪನವರ ಪಿಡಿಒಗೆ ಸೂಚಿಸಿದರು.

Vijaya Karnataka 19 Feb 2020, 5:00 am
ಶಿಗ್ಗಾವಿ: ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕಾದ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಕೆಡಿಪಿ ಸಭೆಗೆ ಹಾಜರಾಗುವಂತೆ ಮುಂಜಾಗೃತವಾಗಿ ನೋಟಿಸ್‌ ನೀಡಿದ್ದರೂ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವಂತೆ ಗ್ರಾಪಂ ಅಧ್ಯಕ್ಷ ಪರಶುರಾಮ ಜಟ್ಟೇಪ್ಪನವರ ಪಿಡಿಒಗೆ ಸೂಚಿಸಿದರು.
Vijaya Karnataka Web absence for meeting notice to officers
ಸಭೆಗೆ ಗೈರುಹಾಜರಿ: ಅಧಿಕಾರಿಗಳಿಗೆ ನೋಟಿಸ್‌


ಮಂಗಳವಾರ ಗ್ರಾಪಂ ಕಾರ್ಯಾಲಯದಲ್ಲಿನಡೆದ ಕೆಡಿಪಿ ಸಭೆಯಲ್ಲಿಅಧಿಕಾರಿಗಳ ಗೈರು ಹಾಜರಾತಿಗೆ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಬಗ್ಗೆ ನಿರ್ಲಕ್ಷತ್ರ್ಯ ಮಾಡುತ್ತಿರುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ತಾಲೂಕು ಮತ್ತು ಜಿಲ್ಲಾಮಟ್ಟದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯವಂತೆ ಸೂಚಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿಬರುವ ಅಂಗನವಾಡಿಗಳು ಅವ್ಯವಸ್ಥೆಗೆ ಆಗರವಾಗಿವೆ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಸಭೆಗೆ ಆಗಮಿಸಲು ನೋಟಿಸ್‌ ನೀಡಿದ್ದರೂ ಸಭೆಗೆ ಬಂದಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ಚಂದಾಪುರ ಸೇರಿ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿ ಯೋಜನೆಗಳು ಸಕಾಲಕ್ಕೆ ಅನುಷ್ಠಾನಕ್ಕೆ ಪಿಡಿಒಗೆ ಸೂಚಿಸಿದರು.

ಬೇಸಿಗೆ ಆರಂಭದಲ್ಲಿಸಾರ್ವಜನಿಕರಿಗೆ ಕುಡಿಯವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನರೇಗಾ ಯೋಜನೆಯ ಪ್ರಗತಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಉಪಾಧ್ಯಕ್ಷ ಶಿವಪ್ಪ ಶಿರಬಡಗಿ, ಪಿಡಿಒ ಪಿ.ವೈ.ದೇವಣ್ಣವರ, ಕಾರ್ಯದರ್ಶಿ ಆರ್‌.ಬಿ.ಹರಿಜನ ಸೇರಿದಂತೆ ಶಾಲಾ ಮುಖ್ಯೋಪಾಧ್ಯಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ