ಆ್ಯಪ್ನಗರ

ಎಸಿಬಿ ಬಲೆಗೆ ಕ್ಲರ್ಕ್‌

ಶಿಗ್ಗಾವಿ (ಹಾವೇರಿ): ಇಲ್ಲಿನ ಸಬ್‌ಜೈಲ್‌ ಕೈದಿಗಳಿಗೆ ಊಟ ಸರಬರಾಜು ಮಾಡುತ್ತಿದ್ದ ಪಟ್ಟಣದ ರೇಣುಕಾ ಹೋಟೆಲ್‌ ಮಾಲೀಕರಿಗೆ ಬಿಲ್‌ ಪಾವತಿಸಲು 75 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಕಂದಾಯ ಇಲಾಖೆ ದಾಖಲೆ ಕೊಠಡಿ ಕ್ಲರ್ಕ್‌ ಹಾಗೂ ಜೈಲ್‌ ಮೇಲ್ವಿಚಾರಕ ಕಿರಣ ತೇರದಾಳ ಎಂಬವರು ಎಸಿಬಿ ಬಲೆಗೆ ಬಿದ್ದ ಪ್ರಸಂಗ ಮಂಗಳವಾರ ನಡೆದಿದೆ.

Vijaya Karnataka 21 Feb 2019, 12:00 am
ಶಿಗ್ಗಾವಿ (ಹಾವೇರಿ): ಇಲ್ಲಿನ ಸಬ್‌ಜೈಲ್‌ ಕೈದಿಗಳಿಗೆ ಊಟ ಸರಬರಾಜು ಮಾಡುತ್ತಿದ್ದ ಪಟ್ಟಣದ ರೇಣುಕಾ ಹೋಟೆಲ್‌ ಮಾಲೀಕರಿಗೆ ಬಿಲ್‌ ಪಾವತಿಸಲು 75 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಕಂದಾಯ ಇಲಾಖೆ ದಾಖಲೆ ಕೊಠಡಿ ಕ್ಲರ್ಕ್‌ ಹಾಗೂ ಜೈಲ್‌ ಮೇಲ್ವಿಚಾರಕ ಕಿರಣ ತೇರದಾಳ ಎಂಬವರು ಎಸಿಬಿ ಬಲೆಗೆ ಬಿದ್ದ ಪ್ರಸಂಗ ಮಂಗಳವಾರ ನಡೆದಿದೆ.
Vijaya Karnataka Web acb trap clerk
ಎಸಿಬಿ ಬಲೆಗೆ ಕ್ಲರ್ಕ್‌


ಒಂದೂವರೆ ವರ್ಷದ ಹಿಂದಷ್ಟೇ ಸಬ್‌ಜೈಲ್‌ನ್ನು ಇಲ್ಲಿಂದ ಹಾವೇರಿಗೆ ಸ್ಥಳಾಂತರಿಸಲಾಗಿದೆ. ಈ ಹಿಂದೆ ಕೈದಿಗಳಿಗೆ ಊಟ ಸರಬರಾಜು ಮಾಡಿದ್ದ ಹೋಟೆಲ್‌ ಮಾಲೀಕ ಶಂಕ್ರಪ್ಪ ಯಲ್ಲಪ್ಪ ಗೌಳಿ ಅವರಿಗೆ 2017 ರಿಂದ 6 ಲಕ್ಷ ರೂ. ಬಿಲ್‌ ಬಾಕಿ ಇತ್ತು. ಇದನ್ನು ಪಾವತಿಸಲು ಕಿರಣ ತೇರದಾಳ 1 ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗೌಳಿ ದೂರು ನೀಡಿದ್ದರು. ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್‌.ಕೆ. ಅವರ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಹಣ ಪಡೆಯುತ್ತಿದ್ದ ತೇರದಾಳ ಸಿಕ್ಕಿ ಬಿದ್ದಿದ್ದಾರೆ.

''ಲಂಚದ ಹಣ ಪಡೆಯುತ್ತಿದ್ದಾಗ ತೇರದಾಳ ಅವರನ್ನು ಬಂಧಿಸಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ'' ಎಂದು ಡಿವೈಎಸ್ಪಿ ಪ್ರಲ್ಹಾದ ಎಸ್‌.ಕೆ. 'ವಿಕ'ಕ್ಕೆ ತಿಳಿಸಿದ್ದಾರೆ. ದಾಳಿಯಲ್ಲಿ ಇನ್ಸಪೆಕ್ಟರ್‌ಗಳಾದ ಬಸವರಾಜ ಹಳಬಣ್ಣ, ಸುದರ್ಶನ ಸೇರಿದಂತೆ ಎಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ