ಆ್ಯಪ್ನಗರ

ಸಮರ್ಪಣಾ ಭಾವವಿದ್ದರೆ ಸಾಧನೆ ಸಾಧ್ಯ

ರಾಣೇಬೆನ್ನೂರ: ಕ್ಷೇತ್ರ ಯಾವುದೇ ಇರಲಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧÜ್ಯ ಎಂದು ಮಾಜಿ ಸೈನಿಕ ಬ್ಯಾಡಗಿಯ ಎಂ.ಡಿ.ಚಿಕ್ಕಣ್ಣನವರ ಹೇಳಿದರು.

Vijaya Karnataka 5 Apr 2019, 5:00 am
ರಾಣೇಬೆನ್ನೂರ: ಕ್ಷೇತ್ರ ಯಾವುದೇ ಇರಲಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧÜ್ಯ ಎಂದು ಮಾಜಿ ಸೈನಿಕ ಬ್ಯಾಡಗಿಯ ಎಂ.ಡಿ.ಚಿಕ್ಕಣ್ಣನವರ ಹೇಳಿದರು.
Vijaya Karnataka Web HVR-4RNR4


ನಗರದ ಬಿಎಜೆಎಸ್‌ಎಸ್‌ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ, ಎನ್ನೆಸ್ಸೆಸ್‌ ಮತ್ತು ಯುವ ರೆಡ್‌ ಕ್ರಾಸ್‌ ಘಟಕಗಳ ಸಮಾರೋಪ, ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಲ್ಲದ ದೇವರ ಪೂಜಿಸಿಸುವುದಕ್ಕಿಂತ ನಿಮ್ಮ ಪ್ರತಿಯೊಂದು ಕಾರ್ಯದಲ್ಲಿ ನಿಮ್ಮ ಬೆನ್ನಲುಬು ಆಗಿರುವ ನಿಮ್ಮ ತಂದೆ ತಾಯಿಯನ್ನು ಗೌರವಿಸಿ ಅವರನ್ನು ಪೂಜನೀಯ ಭಾವದಿಂದ ಕಾಣುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ನೀವು ಪಡೆದಿರುವ ಶಿಕ್ಷ ಣ ಸಫಲವಾಗಬೇಕೆಂದರೆ ನಿಮ್ಮ ಜ್ಞಾನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಯುವಕರು ಸೇವೆ ಮಾಡುವುದರಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ದೇಶ ಕಾಯುವ ಯೋಧನೊಬ್ಬನೆ ದೇಶ ಸೇವೆ ಮಾಡಬೇಕಂದಿಲ್ಲ. ನೀವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶದ ಸೇವೆ ಮಾಡಬಹುದು. ಹಾಗಾದಲ್ಲಿ ಸಮಾಜದಲ್ಲಿ ಪರಿರ್ವತನೆ ತರಲು ಸಾದ್ಯ ಎಂದರು.

ಬಿಎಜೆಎಸ್‌ಎಸ್‌ ಸಮೂಹ ಶಿಕ್ಷ ಣ ಸಂಸ್ಥೆ ಆಡಳಿತಾಧಿಕಾರಿ ಡಾ.ಆರ್‌.ಎಂ.ಕುಬೇರಪ್ಪ ಮಾತನಾಡಿ, ಕೇವಲ ಪುಸ್ತಕ ಓದುವುದರಿಂದ ಯಾವುದೇ ರೀತಿಯ ಸಂಸ್ಕೃತಿ ಸಂಸ್ಕಾರ ಬರಲು ಸಾದ್ಯವಿಲ್ಲ. ಅದು ತಂದೆ ತಾಯಿ ಅಥವಾ ಪೋಷಕರಿಂದ ಲಭಿಸುತ್ತದೆ. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಒಳ್ಳೆಯ ನಡೆ ನುಡಿಯಿಂದ ನೀವು ಗೌರವಿತ ಜೀವನಸಾಗಿಸ ಬೇಕು ಆಗ ಮಾತ್ರ ನಿಮ್ಮ ಶಿಕ್ಷ ಣಕ್ಕೆ ಒಂದು ಅರ್ಥ ಬರಲು ಸಾಧ್ಯ ಎಂದರು.

ಪ್ರಾ.ಪ್ರಕಾಶ ಬಸಪ್ಪನವರ ಅಧ್ಯಕ್ಷ ತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಅಂತರಾಷ್ರ್ಟೀಯ ಪೋಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೇರಿಕಾದ ಚಿನ್ನದ ಪದಕ ಪುರಸ್ಕೃತ ಚಂದ್ರು ಶಿಡೇನೂರ ಅವರನ್ನು ಸನ್ಮಾನಿಸಲಾಯಿತು. ರವೀಂದ್ರಕುಮಾರ ಬಣಕಾರ, ರಾಜೀವ್‌ ಕೆ.ಎಂ., ನಿರ್ಮಲಾ ಬೆನ್ನೂರ, ಎಸ್‌.ಆರ್‌. ಚಿಕ್ಕಳ್ಳವರ, ಮಹೇಶ ಕಂಬಳಿ., ಎಂ.ಡಿ.ಹೊನ್ನಮ್ಮನವರ, ಗೋವಿಂದ, ಗೋಪಾಲ ಮತ್ತೂರ, ನವೀನ ಚಕ್ರಸಾಲಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ