ಹಾವೇರಿ: ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಪ್ರತಿ ವರ್ಷ ಉಚಿತ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ. ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಮಾಳಗೇರ ಹೇಳಿದರು.
ನಗರದ ತಾಲೂಕು ಸ್ತ್ರೀಶಕ್ತಿ ಬಾಲ ಭವನದಲ್ಲಿ ಶುಕ್ರವಾರ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏ.27 ರಿಂದ ಮೇ 6ರವರೆಗೆ ಆಯೋಜಿಸಲಾದ ತಾಲೂಕು ಮಟ್ಟದ ಬೇಸಿಗೆ ಶಿಬಿರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ, ತಮಗೆ ಆಸಕ್ತಿ ಇರುವ ಕಲೆಗಳಲ್ಲಿ ತರಬೇತಿಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಡಿ.ಎಚ್. ಮಾತನಾಡಿ, ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಶಿಬಿರ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಶಿಕ್ಷ ಣ ಸಂಯೋಜಕಿ ರೂಪಾ ಸಜ್ಜನ ಭಾಗವಹಿಸಿದ್ದರು.
ತರಬೇತಿ ಶಿಬಿರದಲ್ಲಿ ಸುಂದರ ಕುಲಕರ್ಣಿ ಯೋಗ ತರಬೇತಿ, ಮನೋಜ ಸಮೂಹ ನೃತ್ಯ ತರಬೇತಿ, ಶಿವಲೀಲಾ ಮಲ್ಲನಗೌಡ ಕರಕುಶಲ ಕಲೆ ತರಬೇತಿ, ವಾರುಣಿ ಮನ್ನಾರಿ ಸಮೂಹ ಗೀತೆ ತರಬೇತಿ ಹಾಗೂ ಎಮ್.ಜಿ.ಕಮ್ಮಾರ ಅವರು ಚಿತ್ರಕಲೆ ತರಬೇತಿ ನೀಡುವರು ಎಂದು ತಿಳಿಸಿದರು.