ಆ್ಯಪ್ನಗರ

ಪಠ್ಯದ ಜತೆ ಕ್ರೀಡೆಗೂ ಪ್ರೋತ್ಸಾಹ ನೀಡಲು ಸಲಹೆ

ಬ್ಯಾಡಗಿ: ಬ್ಯಾಡ್ಮಿಂಟನ್‌ದಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು ಈಡೀ ದೇಶವೇ ಹೆಮ್ಮೆ ಪಡುವ ವಿಷಯ. ಪಠ್ಯದ ಜತೆಯಲ್ಲಿ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಿದಲ್ಲಿ ಇಂತಹ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿ ದೇಶಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಅಭಿಪ್ರಾಯ ಪಟ್ಟರು.

Vijaya Karnataka 27 Aug 2019, 5:00 am
ಬ್ಯಾಡಗಿ: ಬ್ಯಾಡ್ಮಿಂಟನ್‌ದಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು ಈಡೀ ದೇಶವೇ ಹೆಮ್ಮೆ ಪಡುವ ವಿಷಯ. ಪಠ್ಯದ ಜತೆಯಲ್ಲಿ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಿದಲ್ಲಿ ಇಂತಹ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿ ದೇಶಕ್ಕೆ ಕೀರ್ತಿ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಅಭಿಪ್ರಾಯ ಪಟ್ಟರು.
Vijaya Karnataka Web HVR-26BYD4A


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಆ.25 ದೇಶಕ್ಕೆ ಮತ್ತೊಂದು ಹಿರಿಮೆ ಗಳಿಕೆಯಾದ ದಿನ.ಮಹಿಳೆಯರಿಗೂ ಕ್ರೀಡೆಗೂ ಎಲ್ಲಿಯ ಸಂಬಂಧ ಎನ್ನುವ ಸ್ಥಿತಿಯಿಂದ ಹೊರಬಂದು ಭಾರತ ಇಂದು ಪಿ.ಟಿ.ಉಷಾ, ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಅವರಂತಹ ಮಹಿಳಾ ಆಟಗಾರ್ತಿಯರಿಂದ ಈಡೀ ಜಗತ್ತಿನಲ್ಲೆ ಪ್ರಕಾಶಿಸುತ್ತಿದೆ ಎಂದರು.

ಪ್ರೋತ್ಸಾಹವೇ ಶಕ್ತಿ: ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ ಮಾತನಾಡಿ, ಭಾರತದಂತಹ ಬೃಹತ್‌ ರಾಷ್ಟ್ರದಲ್ಲಿ ಕ್ರೀಡೆಗಳಿಗೆ ಸಿಗುತ್ತಿರುವ ಮಾನ್ಯತೆ ಅನುದಾನ ವಿಶ್ವದ ಬೇರೊಂದು ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ಬಹಳ ಕಡಿಮೆ ಎನಿಸುತ್ತಿದೆ, ಕ್ರೀಡಾಂಗಣ, ಕ್ರೀಡಾ ಸಲಕರಣೆ, ಕ್ರೀಡಾಪೋಷಕ ಮತ್ತು ಕ್ರೀಡಾ ತರಬೇತುದಾರರಿಲ್ಲದೇ ಕ್ರೀಡಾಪಟು ಉತ್ತಮ ಸಾಧನೆ ತೋರಲು ಸಾಧ್ಯವಿಲ್ಲ, ಆದರೆ ಬಹುತೇಕ ಕ್ರೀಡಾಂಗಣಗಳು ಮೂಲ ಸೌಕರ‍್ಯಗಳ ಕೊರತೆ ಎದುರಿಸುತ್ತಿದ್ದು, ಇದರಿಂದ ಅತ್ಯುತ್ತಮ ಪ್ರತಿಭೆಗಳು ಅರಳುವ ಮುನ್ನವೇ ಕಮರುತ್ತಿವೆ ಎಂದರು.

ಕ್ರೀಡೆ ನೀಡುತ್ತಿದೆ ಆರ್ಥಿಕ ಸಬಲತೆ: ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಹಿಂದಿನಂತೆ ಕ್ರೀಡೆ ಇದೀಗ ಕೇವಲ ಮನರಂಜನೆಯಾಗಿ ಮಾತ್ರ ಉಳಿದಿಲ್ಲ. ಹವ್ಯಾಸಿಯಾಗಿದ್ದ ಕ್ರೀಡೆಗಳು ಆಟಗಾರರಿಗೆ ಆರ್ಥಿಕ ಸ್ಥಿರತೆಯನ್ನು ತಂದುಕೊಡಲು ವೃತ್ತಿಪರವಾಗಿ ಪರಿವರ್ತ ನೆಗೊಂಡಿದ್ದು ಸ್ವಾಗತಾರ್ಹ, ಇದರ ಪರಿಣಾಮ ಇಂದು ಭಾರತ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾಪಟುಗಳನ್ನು ಹೊಂದಲು ಸಾಧ್ಯವಾಗಿದೆ ಎಂದರು.

ಮೊಬೈಲ್‌ನಿಂದ ಕ್ರೀಯಾಶೀಲತೆ ಮಾಯ: ಕ್ಷೇತ್ರ ಶಿಕ್ಷ ಣಾಧಿಕಾರಿ ರುದ್ರಮುನಿ ಮಾತನಾಡಿ, ಮೊಬೈಲ್‌, ದೂರದರ್ಶನ ಸೇರಿದಂತೆ ತಂತ್ರಜ್ಞಾನದ ವಸ್ತುಗಳ ಹಿಂದೆ ಬಿದ್ದಿರುವ ಯುವಕರಲ್ಲಿ ಕ್ರಿಯಾಶೀಲತೆ ಮಾಯವಾಗುತ್ತಿದೆ. ಇತ್ತೀಚೆಗೆ ಪಾಲಕರು ಸಹ ತಮ್ಮ ಮಕ್ಕಳು ಪಡೆಯುವ ಅಂಕಗಳ ಕುರಿತು ಚಿಂತನೆ ನಡೆಸುತ್ತಿದ್ದು, ಕ್ರೀಡೆಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವುದು ವಿಷಾದಕರ ಸಂಗತಿ ಎಂದರು.

ತಾಪಂ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಪುರಸಭೆ ಸದಸ್ಯೆ ಫಕ್ಕಿರಮ್ಮ ಛಲವಾದಿ, ರವೀಂದರ ಪಟ್ಟಣಶೆಟ್ಟಿ, ಸುರೇಶ ಯತ್ನಾಳ, ಎಂ.ಎಫ್‌ ಬಾರ್ಕೀ ಶಿವಬಸಪ್ಪ ಕುಳೆನೂರ ಶಿಕ್ಷ ಣ ಸಂಯೋಜಕ ಬಿ.ಎಚ್‌.ಎನ್‌.ರಾವಳ, ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಮಹೇಶ ನಾಯಕ್‌, ಮಾಲತೇಶ ಚಳಗೇರಿ, ಎ.ಟಿ.ಪೀಠದ, ಎಮ್‌.ಎಸ್‌. ಕರ್ಜಗಿ, ಬಿ. ಎನ್‌.ಹೊಸಗೌಡ್ರ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ