ಆ್ಯಪ್ನಗರ

ಶಿಕ್ಷಕರೊಂದಿಗೆ ಮುಕ್ತವಾಗಿ ಸಮಸ್ಯೆ ಹಂಚಿಕೊಳ್ಳಲು ಸಲಹೆ

ಗುತ್ತಲ: ಕಲಿಯಲು ಹಾಗೂ ಕಲಿಸಲು ದೇಹ ಭಾಷೆ ಅತ್ಯುತ್ತಮವಾಗಿರಬೇಕು. ಅಂದಾಗ ಮಾತ್ರ ಗುಣ ಮಟ್ಟದ ಶಿಕ್ಷಣ ನೀಡಲು ಹಾಗೂ ಪಡೆಯಲು ಸಾಧ್ಯವೆಂದು ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಹ ನಿರ್ದೇಶಕ ವೀರಣ್ಣ ಜತ್ತಿ ಹೇಳಿದರು.

Vijaya Karnataka 11 Feb 2020, 5:00 am
ಗುತ್ತಲ: ಕಲಿಯಲು ಹಾಗೂ ಕಲಿಸಲು ದೇಹ ಭಾಷೆ ಅತ್ಯುತ್ತಮವಾಗಿರಬೇಕು. ಅಂದಾಗ ಮಾತ್ರ ಗುಣ ಮಟ್ಟದ ಶಿಕ್ಷಣ ನೀಡಲು ಹಾಗೂ ಪಡೆಯಲು ಸಾಧ್ಯವೆಂದು ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯ ಸಹ ನಿರ್ದೇಶಕ ವೀರಣ್ಣ ಜತ್ತಿ ಹೇಳಿದರು.
Vijaya Karnataka Web advice to share problem freely with teachers
ಶಿಕ್ಷಕರೊಂದಿಗೆ ಮುಕ್ತವಾಗಿ ಸಮಸ್ಯೆ ಹಂಚಿಕೊಳ್ಳಲು ಸಲಹೆ


ಪಟ್ಟಣದ ಜಿಜಿಇ ಸೊಸಾಯಿಟಿಯ ಎಸ್‌ಆರ್‌ಎಸ್‌ ಪ್ರೌಢಶಾಲೆಯಲ್ಲಿಪಟ್ಟಣದ ವಿವಿಧ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಶನಿವಾರ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 84 ಮೌಲ್ಯಗಳಲ್ಲಿದೇಹ ಭಾಷೆಯೂ ಒಂದಾಗಿದೆ. ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ಪ್ರಶ್ನೆಗಳನ್ನು ಕೇಳುವಂತಾಗಬೇಕು. ಪಠ್ಯದಲ್ಲಿಬರುವ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು. ಶಿಕ್ಷಕರು ದೈಹಿಕವಾಗಿ ಸದೃಢರಾಗಿರುಬೇಕು. ಧ್ವನಿ ಸರಿಯಾಗಿರಬೇಕು ಮುಖ್ಯವಾಗಿ ಹೆಚ್ಚು ಜ್ಞಾನವನ್ನು ಹೊಂದಿರಬೇಕು ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಜಿಇ ಸೊಸಾಯಿಟಿಯ ಗೌರವ ಕಾರ್ಯದರ್ಶಿ ಸಿ.ಬಿ ಕುರವತ್ತಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೂರಿನ ಪಕ್ಕದ ಹೊಳಲ ಗ್ರಾಮದ ವೀರಣ್ಣ ಜತ್ತಿ ಅವರು ಉನ್ನತ ಅಧಿಕಾರದಲ್ಲಿದ್ದರೂ ಸಹ ಗುತ್ತಲದ ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಸಂವಾದಕ್ಕೆ ಆಗಮಿಸಿರುವುದುಕ್ಕೆ ನಮಗೆ ಹೆಮ್ಮೆ. ಅವರೊಂದಿಗಿನ ಸಂವಾದ ನಮ್ಮ ಗುತ್ತಲದ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ಹೋಗಲಾಡಿಸುವುದು. ಇದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಕುರುವತ್ತಿಗೌಡರ ಹೇಳಿದರು.

ಜಿಜಿಇ ಸಂಸ್ಥೆಯ ಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚಾರ್ಯ ಎಂ.ಸಿ ಕುರವತ್ತಿಗೌಡರ, ಬಿಆರ್‌ಸಿ ಸಿ.ಎಸ್‌ ಭಗವಂತಗೌಡ್ರ, ಶಿಕ್ಷಕರಾದ ನಾಗರಾಜ ಕಾಯಕದ, ಶರಣಪ್ಪ ಇಟಗಿ, ಬಿ.ಎನ್‌ ಗಟ್ಟಿಮನಿ, ಮಾಹಂತೇಶ ಅಜ್ಜೇವಡಿಮಠ, ವಿರೇಶ ರಿತ್ತಿಮಠ, ಎಂ.ಡಿ ಮಡಿವಾಳರ, ಹೇಮಗಿರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ ದೇವಳೆ ಸೇರಿದಂತೆ ಆರ್‌.ಕೆ ಆಂಗ್ಲಮಾಧ್ಯಮ್‌, ಡಿಡಿಎಂ ಪ್ರೌಢ ಹಾಗೂ ಉರ್ದು ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂವಾದ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು. ಎಸ್‌ಆರ್‌ಎಸ್‌ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್‌.ಎನ್‌ ಯಮನಕ್ಕನವರ ಸ್ವಾಗತಿಸಿದರು. ಶಿಕ್ಷಕ ಸಾರ್ಥಿ ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ನಾಗರಾಜ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ