ಆ್ಯಪ್ನಗರ

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

ರಾಣೇಬೆನ್ನೂರ : ವ್ಯಾಸಂಗದ ಅವಧಿಯಲ್ಲಿವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಾಲೂಕಿನ ಸುಣಕಲ್ಲಬಿದರಿ ಪಿಯು ಕಾಲೇಜಿನ ಪ್ರೊ. ಎಚ್‌.ಶಿವಾನಂದ ಹೇಳಿದರು.

Vijaya Karnataka 15 Sep 2019, 5:00 am
ರಾಣೇಬೆನ್ನೂರ : ವ್ಯಾಸಂಗದ ಅವಧಿಯಲ್ಲಿವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಾಲೂಕಿನ ಸುಣಕಲ್ಲಬಿದರಿ ಪಿಯು ಕಾಲೇಜಿನ ಪ್ರೊ. ಎಚ್‌.ಶಿವಾನಂದ ಹೇಳಿದರು.
Vijaya Karnataka Web 14RNR3_23
ರಾಣೇಬೆನ್ನೂರಿನ ಬಿಜೆಎಸ್‌ಎಸ್‌ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಪ್ರೊ. ಎಚ್‌.ಶಿವಾನಂದ ಮಾತನಾಡಿದರು.


ಸ್ಥಳೀಯ ಬಿಎಜೆಎಸ್‌ಎಸ್‌ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಸಾಮಾಜಿಕ ಜವಾಬ್ದಾರಿ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಮಾತನಾಡಿದರು. ಭಾಷೆಯನ್ನು ದಿನ ನಿತ್ಯ ಬಳಕೆ ಮಾಡಿದರೆ ಅದು ತನ್ನಿಂತಾನೆ ಸುಲಭವಾಗಿ ಮಾತನಾಡಲು ಸಹಾಯಕವಾಗುತ್ತದೆ. ಜಾಗತೀಕರಣದಿಂದ ಇಂದಿನ ದಿನಮಾನಗಳ್ಲಿಶಿಕ್ಷಣದ ಪದ್ಧತಿಯೂ ಬದಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳ ಸಂಗ್ರಹಣೆಗೆ ಒತ್ತು ನೀಡಿ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರೊ. ಬಸವರಾಜ ಮಾಚೇನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾ. ಪ್ರಕಾಶ ಬಸಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಎಚ್‌.ಎ.ಭಿಕ್ಷಾವರ್ತಿಮಠ, ಶ್ರೀಕಾಂತ ಕುಂಚೂರ, ಎಂ.ಡಿ.ಹೊನ್ನಮ್ಮನವರ, ರವೀಂದ್ರ ಬಣಕಾರ, ಎಸ್‌.ಆರ್‌.ಚಿಕ್ಕಳ್ಳವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ