ಆ್ಯಪ್ನಗರ

ಕೃಷಿ ಅಧಿಕಾರಿ ಎಸಿಬಿ ಬಲೆಗೆ

ಬ್ಯಾಡಗಿ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.

Vijaya Karnataka 18 Sep 2019, 5:00 am
ಬ್ಯಾಡಗಿ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web agriculture officer acb trap
ಕೃಷಿ ಅಧಿಕಾರಿ ಎಸಿಬಿ ಬಲೆಗೆ


ಬ್ಯಾಡಗಿ ಸಹಾಯಕ ಕೃಷಿ ನಿರ್ದೇಶಕ ಎನ್‌.ಜಿ.ಅಮೃತೇಶ್ವರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಘಟನೆ ವಿವರ: ಹಾವೇರಿ ಜಿಲ್ಲೆಯ ಸಂಗೂರಿನ ಮಂಜುನಾಥ ಮಣೆಗಾರ ರಾಣೇಬೆನ್ನೂರನಲ್ಲಿಕೃಷಿ ಪರಿಕರಗಳನ್ನು ಪೂರೈಸುವ ಕಾರ‍್ಯ ನಿರ್ವಹಿಸುತ್ತಿದ್ದು, ಬ್ಯಾಡಗಿ ತಾಲೂಕಿನಲ್ಲಿರೈತರಿಗೆ ಕೃಷಿ ಇಲಾಖೆ ಮೂಲಕ ಕೃಷಿ ಪರಿಕರಗಳನ್ನು ಪೂರೈಸಿದ್ದರು. ಮಂಜುನಾಥ ಅವರಿಗೆ ನೀಡಬೇಕಿದ್ದ ರೈತರ ವಂತಿಕೆ ಹಣ ರೂ.1.96 ಲಕ್ಷದ ಚೆಕ್‌ ನೀಡಲು ಕಳೆದೊಂದು ತಿಂಗಳಿನಿಂದ ಅಲೆದಾಡಿಸುತ್ತಿದ್ದ ಅಮೃತೇಶ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ ಹಾವೇರಿ ಜಿಲ್ಲಾಎಸಿಬಿಗೆ ದೂರು ಸಲ್ಲಿಸಿದ್ದರು.

ಎಸಿಬಿ ದಾಳಿ: ಮಂಜುನಾಥ ಅವರ ದೂರಿನನ್ವಯ ಮಂಗಳವಾರ ಮಧ್ಯಾಹ್ನ ತಹಸೀಲ್ದಾರ ಕಚೇರಿಯಲ್ಲಿವಿಶ್ವಕರ್ಮ ಜಯಂತಿ ಆಚರಣೆ ಮುಗಿಸಿ ಕಾರಿನಲ್ಲಿಹೊರಡುತ್ತಿದ್ದ ವೇಳೆ ಮಂಜುನಾಥ ಕೃಷಿ ಅಧಿಕಾರಿಗೆ 10 ಸಾವಿರ ರೂ.ನೀಡಿದ್ದಾನೆ. ಈ ಸಂದರ್ಭದಲ್ಲಿಏಕಾ ಏಕಿ ದಾಳಿ ನಡೆಸಿದ ಡಿವೈಎಸ್‌ಪಿ ಪ್ರಹ್ಲಾದ ನೇತೃತ್ವದ ಎಸಿಬಿ ತಂಡ ಅಧಿಕಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ