ಆ್ಯಪ್ನಗರ

ಭೂ ಪರಿಹಾರಕ್ಕೆ ಅಹೋರಾತ್ರಿ ಧರಣಿ

ರಾಣೇಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ನೀಡಿ ಪರಿಹಾರ ಸಿಗದ ರೈತರು, ರಾಜ್ಯ ರೈತ ಸಂಘಟನೆ ನೇತೃತ್ವದಲ್ಲಿಸೋಮವಾರ ರಾತ್ರಿಯಿಂದ ನಗರದ ಮಾಗೋಡ ರಸ್ತೆಯ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.

Vijaya Karnataka 29 Jan 2020, 5:00 am
ರಾಣೇಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ನೀಡಿ ಪರಿಹಾರ ಸಿಗದ ರೈತರು, ರಾಜ್ಯ ರೈತ ಸಂಘಟನೆ ನೇತೃತ್ವದಲ್ಲಿಸೋಮವಾರ ರಾತ್ರಿಯಿಂದ ನಗರದ ಮಾಗೋಡ ರಸ್ತೆಯ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
Vijaya Karnataka Web ahoratri dharani for land relief
ಭೂ ಪರಿಹಾರಕ್ಕೆ ಅಹೋರಾತ್ರಿ ಧರಣಿ


ಈ ಸಮಯದಲ್ಲಿರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಯೋಜನೆ ಜಾರಿಗಾಗಿ ಜಿಲ್ಲೆಯ ಹಿರೇಕೆರೂರ, ರಟ್ಟೀಹಳ್ಳಿ, ರಾಣೇಬೆನ್ನೂರ, ಹಾವೇರಿ ತಾಲೂಕುಗಳ ರೈತರು ಭೂಮಿ ನೀಡಿದ್ದಾರೆ. ಆ ಪೈಕಿ ಸುಮಾರು 200 ರೈತರಿಗೆ ಇದುವರೆಗೂ ಸರಕಾರದಿಂದ ಪರಿಹಾರ ದೊರಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಹೋರಾಟ ನಡೆಸಿದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆಕೆಡಿಕೊಳ್ಳುತ್ತಿಲ್ಲ. ರೈತರ ಸಮಸ್ಯೆ ಪರಿಹರಿಸಲು ಅವರಿಗೆ ಸಮಯವಿರುವುದಿಲ್ಲವಾಗಿದೆ. ಆದ್ದರಿಂದ ಕೂಡಲೇ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಅಲ್ಲಿಯವರæಗೂ ಈ ಧರಣಿ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲಎಂದು ಎಚ್ಚರಿಸಿದರು.

ಎಸ್‌.ಡಿ.ಹಿರೇಮಠ, ಈರಣ್ಣ ಬುಡಪನಹಳ್ಳಿ, ಜೆ.ಎಸ್‌.ಮರಕಳ್ಳಿ, ಪಿ.ಎಸ್‌.ಚಪ್ಪರದಹಳ್ಳಿಮಠ, ಎಸ್‌.ಪಿ.ಬೆಣ್ಣಿ, ಪಿ.ಬಿ.ಗುಬ್ಬಿ, ಪ್ರಕಾಶ ಬನ್ನಿಕೋಡ, ಪ್ರಕಾಶ ಸೊರಟೂರು, ರಮೇಶ, ಕೆ.ಬಿ.ಬನ್ನಿಕೋಡ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಅಸ್ವಸ್ಥಗೊಂಡ ಪ್ರತಿಭಟನಾಕಾರರು: ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿಭಾಗವಹಿಸಿರುವ ಪ್ರಭು ಸೊರಟೂರ, ಲಿಂಗನಗೌಡ ಸೊರಟೂರ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇಬ್ಬರನ್ನು ಮಂಗಳವಾರ ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ