ಆ್ಯಪ್ನಗರ

ಸ್ಮಾರಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಶಿವಣ್ಣನವರ

ಬ್ಯಾಡಗಿ: ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಹುತಾತ್ಮ ಯೋಧ ಶಿವಲಿಂಗೇಶ್ವರ ಪಾಟೀಲ ಅವರ ಸ್ಮಾರಕ ನಿರ್ಮಾಣಕ್ಕಾಗಿ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 3 ಲಕ್ಷ ರೂ.ಗಳ ಅನುದಾನ ನೀಡಿದ್ದು, ತಾಲೂಕಿನ ಹೆಮ್ಮೆಯ ಯೋಧನ ಸ್ಮಾರಕ ನಿರ್ಮಾಣಕ್ಕೆ ಪಕ್ಷಾತೀತವಾಗಿ ಎಲ್ಲ ನಾಯಕರು ಕೈಜೋಡಿಸಬೇಕಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

Vijaya Karnataka 27 Aug 2019, 5:00 am
ಬ್ಯಾಡಗಿ: ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಹುತಾತ್ಮ ಯೋಧ ಶಿವಲಿಂಗೇಶ್ವರ ಪಾಟೀಲ ಅವರ ಸ್ಮಾರಕ ನಿರ್ಮಾಣಕ್ಕಾಗಿ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 3 ಲಕ್ಷ ರೂ.ಗಳ ಅನುದಾನ ನೀಡಿದ್ದು, ತಾಲೂಕಿನ ಹೆಮ್ಮೆಯ ಯೋಧನ ಸ್ಮಾರಕ ನಿರ್ಮಾಣಕ್ಕೆ ಪಕ್ಷಾತೀತವಾಗಿ ಎಲ್ಲ ನಾಯಕರು ಕೈಜೋಡಿಸಬೇಕಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
Vijaya Karnataka Web all involved in the construction of a memorial shivannanavar
ಸ್ಮಾರಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ಶಿವಣ್ಣನವರ


ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೈನಿಕರು ದೇಶದ ಸಂಪತ್ತು. ದೇಶ ಹಾಗೂ ನಮ್ಮೆಲ್ಲರ ರಕ್ಷ ಣೆಗಾಗಿ ತಮ್ಮ ಪ್ರಾಣವನ್ನೆ ಬಲಿದಾನ ನೀಡುವ ಅವರುಗಳ ತ್ಯಾಗಕ್ಕೆ ಯಾರಿಂದಲೂ ಬೆಲೆ ಕಟ್ಟಲಾಗದು, ಆದರೆ ಅವರು ಹುತಾತ್ಮರಾದ ಸಂದರ್ಭದಲ್ಲಿ ಅವರುಗಳ ಕುಟುಂಬದ ನೋವಲ್ಲಿ ನಾವು ಭಾಗಿಯಾದಾಗ ಮಾತ್ರ ಅವರ ಬಲಿದಾನಕ್ಕೆ ನಿಜವಾದ ಅರ್ಥ ದೊರೆಯಲಿದೆ ಎಂದರು.

ಚಿರಸ್ಮರಣೆಗೆ ಸ್ಮಾರಕ: ಶಿವಲಿಂಗೇಶ್ವರ ಅವರ ಚಿರಸ್ಮರಣೆಗಾಗಿ ಗುಂಡೇನಹಳ್ಳಿಯಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆನ್ನುವುದು ಗ್ರಾಮಸ್ಥರ ಹಾಗೂ ಎಲ್ಲರ ಆಶಯವಾಗಿದ್ದು, ಮಾನೆ ಅವರು ತಮ್ಮ ಪ್ರದೇಶಾಭಿವೃದ್ಧಿ ಅನುದಾದಲ್ಲಿ 3 ಲಕ್ಷ ರೂ. ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ. ಈ ಹಿಂದೆ ಕನವಳ್ಳಿ ಯೋಧನ ನೆನಪಿಗಾಗಿ ಅದೇ ಗ್ರಾಮದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾಗಿ ಸ್ಮರಿಸಿದರು.

ಸಂಸದರು ಶಾಸಕರು ಸಹಕಾರ ನೀಡಲಿ: ಉತ್ತಮ ಸ್ಮಾರಕ ನಿರ್ಮಾಣಕ್ಕೆ 15 ರಿಂದ 20 ಲಕ್ಷ ರೂ.ಗಳ ಅವಶ್ಯಕತೆಯಿದ್ದು, 3 ಲಕ್ಷ ಸಾಕಾಗದು. ಯೋಧನ ನೆನಪನ್ನು ಹಸಿರಾಗಿಸುವ ನಿಟ್ಟಿನಲ್ಲಿ ಮತ್ತು ಹುತಾತ್ಮಯೋಧನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದು, ಸ್ಥಳೀಯ ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹಾಗೂ ಸಂಸದ ಶಿವಕುಮಾರ ಉದಾಸಿ ತಲಾ 5 ಲಕ್ಷ ಅನುದಾನ ನೀಡಿದಲ್ಲಿ ಉತ್ತಮ ಹಾಗೂ ಐತಿಹಾಸಿಕ ಸ್ಮಾರಕ ನಿರ್ಮಾಣ ಸಾಧ್ಯವಾಗಲಿದೆ ಎಂದರಲ್ಲದೇ ವಿಧಾನ ಪರಿಷತ್‌ ಸದಸ್ಯರಾದ ಹೊರಟ್ಟಿ, ಎಸ್‌.ವಿ.ಸುಂಕನೂರ, ಪ್ರದೀಪ ಶೆಟ್ಟರ್‌, ಅವರೊಡನೆ ಪಕ್ಷಾತೀತವಾಗಿ ಸಹಕಾರ ಕೋರುವುದಾಗಿ ತಿಳಿಸಿದರು.

ಸಾವಲ್ಲೂ ಸಾರ್ಥಕತೆ: ರಮೇಶ ಸುತ್ತಕೋಟಿ ಮಾತನಾಡಿ, ಸೇನೆಗೆ ಸೇರಿದ ಕೂಡಲೇ ಮುಂದೊಂದು ದಿನ ಇಂತಹ ಅನಾಹುತ ಸಂಭವಿಸಿದಲ್ಲಿ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಕುಟುಂಸ್ಥರಿಗೆ ಮನವಿ ಮಾಡಿದ್ದ ಶಿವಲಿಂಗೇಶ್ವರ ಹುತಾತ್ಮನಾದ ಮೇಲೆಯೂ ಇಬ್ಬರ ಬಾಳಿಗೆ ಬೆಳಕಾಗಿ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದರಲ್ಲದೇ ರಾಜ್ಯ ಸರಕಾರ ಯೋಧನ ಕುಟುಂಬಕ್ಕೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಆದಷ್ಟು ಬೇಗ ನೀಡಲಿ ಎಂದರು.

ಯೋಧನ ತಂದೆ ಮಾಜಿ ಸೈನಿಕ ಹಾಗೂ ವೀರಭದ್ರಗೌಡ ಪಾಟೀಲ ಹಾಗೂ ತಾಯಿ, ಗ್ರಾಮಸ್ಥರಾದ ಮುತ್ತಣ್ಣ ಶಿಗ್ಗಾವಿ, ರವಿ ಹೊಸಮನಿ, ಸಿದ್ಧಣ್ಣ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ