ಆ್ಯಪ್ನಗರ

ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ

ಶಿಗ್ಗಾವಿ: ಜೂ.25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಸುರಕ್ಷತೆ ಜತೆಗೆ ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಂಡಿದ್ದಾಗಿ ಬಿಇಒ ಪಿ.ಕೆ.ಚಿಕ್ಕಮಠ ತಿಳಿಸಿದರು.

Vijaya Karnataka 25 Jun 2020, 5:00 am
ಶಿಗ್ಗಾವಿ: ಜೂ.25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಸುರಕ್ಷತೆ ಜತೆಗೆ ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ ಕೈಗೊಂಡಿದ್ದಾಗಿ ಬಿಇಒ ಪಿ.ಕೆ.ಚಿಕ್ಕಮಠ ತಿಳಿಸಿದರು.
Vijaya Karnataka Web all ready for smooth testing
ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ


ಪಟ್ಟಣದ ಬಿಇಒ ಕಚೇರಿಯಲ್ಲಿಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ತಾಲೂಕಿನಲ್ಲಿಒಟ್ಟು 10 ಮುಖ್ಯ ಪರೀಕ್ಷಾ ಕೇಂದ್ರಗಳಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ 6 ಹೆಚ್ಚುವರಿ ಉಪ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಶಿಗ್ಗಾವಿಯಲ್ಲಿ3, ಬಂಕಾಪುರದಲ್ಲಿ3, ದುಂಡಶಿ, ಬನ್ನೂರ, ಹೀರೆಬೇಂಡಿಗೇರಿ, ಶಿಶುವಿನಹಾಳದಲ್ಲಿತಲಾ 1 ಕೇಂದ್ರ ತೆರೆಯಲಾಗಿದೆ. ತಾಲೂಕಿನ ಒಟ್ಟು 20 ಸರಕಾರಿ ಪ್ರೌಢಶಾಲೆ, 3 ವಸತಿ ಶಾಲೆ, 14 ಅನುದಾನಿತ, 8 ಅನುದಾನ ರಹಿತ ಶಾಲೆ ಸೇರಿ 45 ಪ್ರೌಢ ಶಾಲೆಗಳಿಂದ 2931 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ60 ವಿದ್ಯಾರ್ಥಿಗಳು ಹೊರ ಜಿಲ್ಲೆ, ತಾಲೂಕುನಿಂದ ವಲಸೆ ಬಂದಿದ್ದಾರೆ ಎಂದರು.

ಅಗತ್ಯ ಕ್ರಮ :
ಎಲ್ಲಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜೇಶನ್‌ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ಮಾಸ್ಕ್‌, ಸ್ಯಾನಿಟೈಜೇಶನ್‌ ಬಾಟಲ್‌ಗಳನ್ನು ವಿತರಿಸಲಾಗುತ್ತಿದೆ. ಸೀಲ್‌ಡೌನ್‌ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರಿಗೆಯೊಂದಿಗೆ ಪ್ರತ್ಯೇಕ ಪರೀಕ್ಷೆ ಕೊಠಡಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿಆರೋಗ್ಯ ತಪಾಸಣಾ ಕೌಂಟರ್‌ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮೂರು ಥರ್ಮಲ್‌ ಸ್ಕ್ರೀನಿಂಗ್‌ ಮಷೀನ್‌ ನೀಡಿದೆ. ಪ್ರತಿ ಕೇಂದ್ರಗಳಲ್ಲಿಮಕ್ಕಳ ಸಹಾಯವಾಣಿ ಕೌಂಟರ್‌ ತೆರೆಯಲಾಗಿದೆ. ಪರಸ್ಪರ ಅಂತರ, ಶಿಸ್ತು ಕಾಪಾಡಲು ಒಬ್ಬ ದೈಹಿಕ ಶಿಕ್ಷಕ, ಸ್ಕೌಟ್‌ ಮತ್ತು ಗೈಡ್ಸ್‌ ಸ್ವಯಂ ಸೇವಕರನ್ನು ನೇಮಿಸಿದೆ.

ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು 7 ಬಸ್‌, 12 ಖಾಸಗಿ ಶಾಲಾ ವಾಹನಗಳನ್ನು ವಿವಿಧ ಗ್ರಾಮಗಳಿಗೆ ನಿಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸಕಾಲಕ್ಕೆ ವಿತರಿಸಲು ಮೂರು ಮಾರ್ಗ ಗುರುತಿಸಿದ್ದು, ಅದಕ್ಕೆ ವಾಹನ ಮತ್ತು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ 6000 ಮಾಸ್ಕ್‌, 3000 ಸ್ಯಾನಿಟೈಸರ್‌ ಬಾಟಲ್‌, ಮಕ್ಕಳ ಆರೋಗ್ಯ ತಪಾಸಣೆಗೆ 14 ಥರ್ಮಲ ಸ್ಕಿ್ರನಿಂಗ್‌ ಮಷೀನ್‌ ನೀಡಿದ್ದು, ಪರೀಕ್ಷಾ ದಿನದಂದು ವಿತರಿಸಲಾಗುವುದು ಚಿಕ್ಕಮಠ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ