ಆ್ಯಪ್ನಗರ

ಎಲ್ಲಾ ಶಿವಮಯವೋ

ಹಾವೇರಿ: ಜಿಲ್ಲಾದ್ಯಂತ ಆಲಯಗಳಲ್ಲಿಶಂಖ, ಘಂಟೆ, ಜಾಗಟೆಗಳ ನಿನಾದ. ಶಿವ ನಾಮಸ್ಮರಣೆ ಝೇಂಕಾರ. ಬಡವ-ಬಲ್ಲಿದ ಎಂಬ ಬೇಧವಿಲ್ಲದ ಭಕ್ತರ ಶ್ರದ್ಧಾಭಕ್ತಿ ಶುಕ್ರವಾರದ ಶಿವರಾತ್ರಿ ಆಚರಣೆಗೆ ಸಾಕ್ಷಿಯಾಗಿತ್ತು.

Vijaya Karnataka 22 Feb 2020, 5:00 am
ಹಾವೇರಿ: ಜಿಲ್ಲಾದ್ಯಂತ ಆಲಯಗಳಲ್ಲಿಶಂಖ, ಘಂಟೆ, ಜಾಗಟೆಗಳ ನಿನಾದ. ಶಿವ ನಾಮಸ್ಮರಣೆ ಝೇಂಕಾರ. ಬಡವ-ಬಲ್ಲಿದ ಎಂಬ ಬೇಧವಿಲ್ಲದ ಭಕ್ತರ ಶ್ರದ್ಧಾಭಕ್ತಿ ಶುಕ್ರವಾರದ ಶಿವರಾತ್ರಿ ಆಚರಣೆಗೆ ಸಾಕ್ಷಿಯಾಗಿತ್ತು.
Vijaya Karnataka Web 21 HAVERI 1A_23
ಹಾವೇರಿಯ ಬಸವೇಶ್ವರ ನಗರದಲ್ಲಿಶಿವನ ಮೂರ್ತಿಗೆ ಹರಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪುಷ್ಪ ಸಮರ್ಪಿಸಿ ಮಹಾ ಮಂಗಳಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಜಿಲ್ಲೆಯ ಎಲ್ಲತಾಲೂಕುಗಳ ಶಿವಾಲಯಗಳ ಜತೆಗೆ ಮಠ-ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವದಿಂದ ಮನೆಗಳಿಗೆ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಹಾವೇರಿಯಲ್ಲಿಬಸವೇಶ್ವರ ನಗರದ ಶಿವಾಲಯ, ಅಶ್ವಿನಿ ನಗರದ 12 ಅಡಿ ಎತ್ತರದ ಶಿವನ ಮೂರ್ತಿ ದರುಶನ, ಜಯದೇವ ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದಲ್ಲಿಜ್ಯೋತಿರ್ಲಿಂಗು ದರುಶನ, ವಿಜಯನಗರ ಉದ್ಯಾನವನದ 6 ಅಡಿ ಎತ್ತರದ ಶಿವನ ಮೂರ್ತಿ ಪೂಜಾ ಕೈಂಕರ್ಯದ ಜತೆಗೆ ಶ್ರೀಗಳ ಆಶೀರ್ವಚನ ಕೇಳಲು ಧಾವಿಸುತ್ತಿದ್ದ ಭಕ್ತರ ಸಂಖ್ಯೆ ಅತ್ಯಧಿಕವಾಗಿತ್ತು.

ಪುರಸಿದ್ಧೇಶ್ವರ ದೇವಸ್ಥಾನದಲ್ಲಿಭಕ್ತರು ಪೂಜಾ ಕೈಂಕರ್ಯದಲ್ಲಿಪಾಲ್ಗೊಂಡು ಭಕ್ತಿ ಸಮರ್ಪಿಸಿ ಧನ್ಯತಾಭಾವದಿಂದ ಸಂಭ್ರಮಿಸಿದರು. ಬಸವೇಶ್ವರ ನಗರದಲ್ಲಿಗಜಾನನ ಮತ್ತು ಆಂಜನೇಯ ದೇವಸ್ಥಾನ ಟ್ರಸ್ಟ್‌ ಕಮೀಟಿ ಆಶ್ರಯದಲ್ಲಿಆವರಣದಲ್ಲಿಶಿವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಲಾದ ದ್ವಾದಶ ಜ್ಯೋತಿರ್ಲಿಂಗಗಳ ಜತೆಗೆ ಗಜಾನನ ಮತ್ತು ಆಂಜನೇಯ ಮೂರ್ತಿಗಳಿಗೆ ಬೆಳಗ್ಗೆ 7 ರಿಂದ 9 ರ ವರೆಗೆ ಭಕ್ತರಿಂದ ಮಹಾ ರುದ್ರ ಅಭಿಷೇಕ. ಮಧ್ಯಾಹ್ನ 12 ಕ್ಕೆ ನಗರದ ಹರಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಆಶೀರ್ವಚನ ಹಾಗೂ ಅವರ ಅಮೃತ ಹಸ್ತದಲ್ಲಿಜರುಗಿದ ಮಹಾ ಮಂಗಳಾರತಿ ಪೂಜೆ ಶಿವ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು.

ಇದೇ ವೇಳೆ ನೆರೆದಿದ್ದ ಸಹಸ್ರಾರು ಭಕ್ತರು ದೇವಸ್ಥಾನದ ಕಮೀಟಿ ನೀಡಿದ ಶಿರಾ, ಉಪ್ಪಿಟ್ಟು ಸೇರಿದಂತೆ ಅಲ್ಪೋಪಹಾರ ಸ್ವೀಕರಿಸಿ ಧನ್ಯರಾದರು. ಈ ವೇಳೆ ನವದಂಪತಿ ಸಮೇತ ಆಗಮಿಸಿ ಸಂಭ್ರಮ ಪಡುತ್ತಿದ್ದ ಕುಟುಂಬಗಳು, ರಜೆಯ ಮಜಾದ ಜತೆಗೆ ಅಪ್ಪ-ಅಮ್ಮಂದಿರೊಂದಿಗೆ ಈ ದೇವಸ್ಥಾನಕ್ಕೆ ಬಂದು ಶಿವನ ದರುಶನ ಪಡೆದ ಮಕ್ಕಳ ಸಡಗರ ಹಬ್ಬವನ್ನುಂಟು ಮಾಡಿತ್ತು.

ಅಶ್ವಿನಿ ನಗರದಲ್ಲಿಕನಿಷ್ಠ 12 ಅಡಿ ಎತ್ತರದ ಶಿವನ ಮೂರ್ತಿ ನೋಡುವುದೇ ಒಂದು ಖುಷಿ. ದೂರದ ಮುರುಡೇಶ್ವರ ಶಿವನ ದರುಷನಕ್ಕೆ ಪರಿತಪಿಸುವ ಭಕ್ತರಿಗೆ ಹಾವೇರಿಯಲ್ಲೇ ಬೃಹತ್‌ ಶಿವನ ಮನೋಹರ ಮೂರ್ತಿ ದರುಶನ ನೋಡುವುದೇ ಭಾಗ್ಯ ಎಂದು ಸಂಭ್ರಮಿಸಿದವರೇ ಹೆಚ್ಚು. ಈ ಆಲಯದಲ್ಲೂಬೆಳಗಿನ 10 ರಿಂದ ಸಂಜೆಯವರೆಗೂ ವೀಕ್ಷಣೆಗೆ ಬರುತ್ತಿದ್ದ ಭಕ್ತರ ದಂಡೇ ಅಧಿಕವಾಗಿತ್ತು.

ಶಿವರಾತ್ರಿ ಆಚರಣೆಗೆ ಹಾವೇರಿಯಲ್ಲಿಒಂದಲ್ಲ, ಎರಡಲ್ಲಬರೋಬ್ಬರಿ ನಾಲ್ಕು ದಿಕ್ಕುಗಳಲ್ಲೂಶಿವಾಲಯ ನೋಡಲು ಸಿಗುವುದೇ ಅಪರೂಪ. ಈ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ-ಪುನಸ್ಕಾರದ ಮೂಲಕ ಧನ್ಯತೆ ಅನುಭವಿಸಿದವರ ಸಂಖ್ಯೆಯೇ ಅತ್ಯಧಿಕವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ