ಆ್ಯಪ್ನಗರ

ಸರಕಾರಿ ಕಾನ್ವೆಂಟ್‌ನಲ್ಲೂ ಬಿಸಿಯೂಟ

ರಾಜು ನದಾಫ ಹಾವೇರಿ: ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಶೀಘ್ರದಲ್ಲೇ ಪಿಯು ಕಾಲೇಜ್‌ಗಳಿಗೂ ವಿಸ್ತರಣೆಯಾಗಲಿರುವ ಮಧ್ಯಾಹ್ನದ ಬಿಸಿ ಊಟ ಪ್ರಸಕ್ತ ತಿಂಗಳಿಂದಲೇ ಸರಕಾರಿ ಕಾನ್ವೆಂಟ್‌ ಮಕ್ಕಳಿಗೂ ಲಭ್ಯವಾಗಿದೆ. ಮಕ್ಕಳು ಎನ್ನುವ ಕಾರಣಕ್ಕೆ ಪೌಷ್ಟಿಕಾಂಶ ಉಪಾಹಾರ ಮತ್ತು ಊಟ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

Vijaya Karnataka 18 Sep 2019, 5:00 am
ರಾಜು ನದಾಫ ಹಾವೇರಿ: ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಶೀಘ್ರದಲ್ಲೇ ಪಿಯು ಕಾಲೇಜ್‌ಗಳಿಗೂ ವಿಸ್ತರಣೆಯಾಗಲಿರುವ ಮಧ್ಯಾಹ್ನದ ಬಿಸಿ ಊಟ ಪ್ರಸಕ್ತ ತಿಂಗಳಿಂದಲೇ ಸರಕಾರಿ ಕಾನ್ವೆಂಟ್‌ ಮಕ್ಕಳಿಗೂ ಲಭ್ಯವಾಗಿದೆ. ಮಕ್ಕಳು ಎನ್ನುವ ಕಾರಣಕ್ಕೆ ಪೌಷ್ಟಿಕಾಂಶ ಉಪಾಹಾರ ಮತ್ತು ಊಟ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
Vijaya Karnataka Web also in the government convent
ಸರಕಾರಿ ಕಾನ್ವೆಂಟ್‌ನಲ್ಲೂ ಬಿಸಿಯೂಟ


ಬಿಪಿಎಲ್‌ ಕುಟುಂಬಗಳ ಮಕ್ಕಳಿಗಾಗಿ ಸರಕಾರ 2018-19 ನೇ ಸಾಲಿನಲ್ಲಿರಾಜ್ಯದ 176 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌.ಕೆ.ಜಿ/ಯು.ಕೆ.ಜಿ) ಆರಂಭಿಸಿದೆ. ಪ್ರತಿ ಶಾಲೆಯಲ್ಲಿಗರಿಷ್ಠ 60 ಮಕ್ಕಳಿಗೆ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.

ಪೌಷ್ಟಿಕ ಆಹಾರ:
ಪ್ರತಿ ತಾಲೂಕಿಗೆ ತಲಾ ಒಂದರಂತೆ ಆರಂಭಗೊಂಡಿರುವ ಈ ಸರಕಾರಿ ಕಾನ್ವೆಂಟ್‌ ಮಕ್ಕಳಿಗೆ ಅಪೌಷ್ಟಿಕತೆ ಬಾಧಿಸದಿರಲಿ ಎನ್ನುವ ಸದುದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 3 ರಿಂದ 6 ರ ವಯಸ್ಸಿನ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವನ್ನೇ ನೀಡಲು ನಿರ್ಧರಿಸಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಬಿಸಿ ಊಟ ಹಾಗೂ ಬಿಸಿ ಹಾಲು ಜತೆಗೆ ಕೆಲವು ನಿರ್ದಿಷ್ಠ ದಿನಗಳಲ್ಲಿಬಾಳೆ ಹಣ್ಣು, ಮೊಟ್ಟೆ ನೀಡಲು ಸಹ ಯೋಜಿಸಿದೆ.

ನಿರ್ವಹಣೆ ಹೇಗೆ?: ಈಗಾಗಲೇ ಪಕ್ಕದಲ್ಲೇ ಇರುವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟ ನೀಡಲಾ ಗುತ್ತಿದೆ. ಈ ಕೆಲಸವನ್ನೇ ಹೆಚ್ಚುವರಿ ವಹಿಸಲಾಗಿದೆ. ಅಗತ್ಯ ಬಿದ್ದಲ್ಲಿಇನ್ನೋರ್ವ ಅಡುಗೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಈ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 17 ಆಗಸ್ಟ್‌ 2019 ರಂದು ಸುತ್ತೋಲೆ ಹೊರಡಿಸಿದ್ದು, ಈ ಸುತ್ತೋಲೆ ಆಧರಿಸಿ ಜಿಲ್ಲೆಯ 7 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿಇದು ಜಾರಿಗೊಳಿಸುವಂತೆ ಜಿಲ್ಲಾಪಂಚಾಯಿತಿ ಸಿಇಒ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಕ್ಷರ ದಾಸೋಹ ವಿಭಾಗಕ್ಕೆ ಆದೇಶ ಹೊರಡಿ ಸಿದ್ದಾರೆ. ಈ ತಿಂಗಳಿಂದ ಆರಂಭಗೊಂಡಿದೆ.

ಬೆಳಗಿನ ಉಪಾಹಾರ: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಶೇಂಗಾ ಚೆಕ್ಕಿ/ ಉಂಡೆ ಹಾಗೂ ಕೆನೆ ಭರಿತ ಹಾಲು. ಬುಧವಾರ ಮತ್ತು ಶನಿವಾರ ಮೊಳಕೆ ಭರಿಸಿದ ಹೆಸರು ಕಾಳು.

ಮಧ್ಯಾಹ್ನ ಊಟ: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಅನ್ನ ಮತ್ತು ಸಾಂಬಾರು. ಬುಧವಾರ ಮತ್ತು ಶನಿವಾರ ಗೋಧಿ ಪಾಯಸ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಎರಡು ದಿನ ಬೇಯಿಸಿದ ಕೋಳಿ ಮೊಟ್ಟೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು.

ವಾರದ 5 ದಿನಗಳಲ್ಲಿಕೆನೆಭರಿತ ಹಾಲನ್ನು ಪ್ರಾರ್ಥನೆ ನಂತರ ತರಗತಿ ಆರಂಭಕ್ಕೂ ಮೊದಲು ನೀಡಲಾಗುತ್ತದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ