ಆ್ಯಪ್ನಗರ

ವಿಕೃತಿಯಿಂದ ಕಲಾತ್ಮಕ ಸಂಸ್ಕೃತಿ ಮಾಯ

ಅಕ್ಕಿಆಲೂರು: ವೈಜ್ಞಾನಿಕತೆ ಮತ್ತು ಆಧುನಿಕತೆ ನಮ್ಮ ಶ್ರೀಮಂತ ಪರಂಪರೆ ಕೈ ಬಿಡುವಂತೆ ಎಂದಿಗೂ ಹೇಳುವುದಿಲ್ಲ. ಆದರೆ ಆಚರಣೆಗೆ ತರುತ್ತಿರುವ ನಾವು ಭಿನ್ನವೆಂದು ತೋರಿಸಿಕೊಳ್ಳುವ ಹುಚ್ಚಿನಲ್ಲಿವಿಕೃತಿಯನ್ನೇ ಆಧುನಿಕತೆಯ ಚಿಹ್ನೆ ಎಂಬ ರೀತಿಯಲ್ಲಿಬಳಸುತ್ತಿರುವುದರಿಂದ ನಮ್ಮ ಗತಕಾಲದ ಕಲಾತ್ಮಕ ಸಂಸ್ಕೃತಿ ಮಾಯವಾಗುತ್ತಿದೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Vijaya Karnataka 7 Nov 2019, 5:00 am
ಅಕ್ಕಿಆಲೂರು: ವೈಜ್ಞಾನಿಕತೆ ಮತ್ತು ಆಧುನಿಕತೆ ನಮ್ಮ ಶ್ರೀಮಂತ ಪರಂಪರೆ ಕೈ ಬಿಡುವಂತೆ ಎಂದಿಗೂ ಹೇಳುವುದಿಲ್ಲ. ಆದರೆ ಆಚರಣೆಗೆ ತರುತ್ತಿರುವ ನಾವು ಭಿನ್ನವೆಂದು ತೋರಿಸಿಕೊಳ್ಳುವ ಹುಚ್ಚಿನಲ್ಲಿವಿಕೃತಿಯನ್ನೇ ಆಧುನಿಕತೆಯ ಚಿಹ್ನೆ ಎಂಬ ರೀತಿಯಲ್ಲಿಬಳಸುತ್ತಿರುವುದರಿಂದ ನಮ್ಮ ಗತಕಾಲದ ಕಲಾತ್ಮಕ ಸಂಸ್ಕೃತಿ ಮಾಯವಾಗುತ್ತಿದೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
Vijaya Karnataka Web news/haveri
ವಿಕೃತಿಯಿಂದ ಕಲಾತ್ಮಕ ಸಂಸ್ಕೃತಿ ಮಾಯ


ಡೊಳ್ಳೇಶ್ವರ ಗ್ರಾಮದಲ್ಲಿಆಯೋಜಿಸಲಾಗಿದ್ದ ನುಡಿ ಹಬ್ಬ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತು ನಾವೆಲ್ಲರೂ ಬಲ್ಲವರು. ಆ ದಿಸೆಯಲ್ಲಿಕನ್ನಡ ನಾಡು, ನುಡಿ ಅಭಿಮಾನ ಹೊಂದಿ ಮುನ್ನೆಡೆಯ ಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂಥÜ ಕಾರ್ಯಕ್ರಮಗಳಲ್ಲಿಒಂದೆಡೆ ಕಲೆತು ಆ ಶ್ರೀಮಂತ ಸಂಸ್ಕೃತಿ ಮೆಲಕು ಹಾಕಿ ಅದರ ಭದ್ರ ಬುನಾದಿಯ ಮೇಲೆ ವೈಜ್ಞಾನಿಕತೆ ಮತ್ತು ಆಧುನಿಕತೆ ಸೇರಿಸಿಕೊಂಡು ಸುಂದರ ಬದುಕಿನ ಸೌಧ ಕಟ್ಟಿಕೊಳ್ಳಬೇಕಿದೆ ಎಂದರು.

ಶಿಕ್ಷಕ ಕೆ.ಆರ್‌.ಹಿರೇಮಠ ಉಪನ್ಯಾಸ ನೀಡಿ, ಬದುಕಿನ ಅಗತ್ಯತೆ ಪೊರೈಸಿಕೊಳ್ಳುವ ಭಾಷೆ ಮಾತೃಭಾಷೆಯಾಗಿದ್ದು ಯುವ ಸಮೂಹ ಆ ಭಾಷೆ ಚೆನ್ನಾಗಿ ಅರಿತು ಉಳಿದ ಭಾಷೆಗಳನ್ನೂ ಸಹ ಸಂದರ್ಭಾನುಸಾರ ಕಲಿತು ಸಾಮರಸ್ಯದಿಂದ ಬದುಕುವುದನ್ನು ಕಲಿತುಕೊಂಡಾಗಲೇ ಜೀವನ ಅರಳಿದ ಹೂವಾಗಿ ಘಮಘಮಿಸುತ್ತದೆ ಎಂದರು.

ಉದ್ಘಾಟನೆ ನೆರವೇರಿಸಿದ ಗ್ರಾಪಂ ಅಧ್ಯಕ್ಷ ಎಂ.ಎಂ.ಮುಂಡರಗಿ ಮಾತನಾಡಿ, ಮಕ್ಕಳು ಕನ್ನಡ ನಾಡಿನ ವೀರಪರಂಪರೆಯಿಂದ ಸ್ಪೂರ್ತಿ ಪಡೆಯುವ ವಾತಾವರಣ ಹಿರಿಯರು ಕಲ್ಪಿಸಿಕೊಡಬೇಕಿದೆ. ಇತಿಹಾಸದ ಅರಿವು ಇದ್ದಾಗ ಮಾತ್ರ ಭವಿಷ್ಯದ ಯೋಜನೆ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಕೋಟೇಶ್‌ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್‌.ಎಚ್‌.ತಳ್ಳಿಹಾಳ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಬೆಂಗಳೂರಿನ ನೈಸ್‌ ಸಂಸ್ಥೆಯ ಉಪಾಧ್ಯಕ್ಷ ಶಿವಪ್ಪ ಭಜಂತ್ರಿ ಸನ್ಮಾನಗೊಂಡರು. ಉರ್ದು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಇಸಾಕ್‌ಅಹ್ಮದ್‌ ಚಿಕ್ಕೇರಿ, ಬಸವಣ್ಣೆಪ್ಪ ವರ್ದಿ, ಭಾಷಾಸಾಬ ಹಾವೇರಿ, ಮುಖ್ಯೋಪಾಧ್ಯಾಯ ಅಶೋಕ ಹನುಮಾಪೂರ, ಪಿಡಿಒ ಚೇತನಾ ಪಿ.ಬಿ. ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ