ಹಾನಗಲ್ಲ: ಧರ್ಮಾ, ವರದಾ ನದಿಗಳು ಹುಚ್ಚೆದ್ದು ಹರಿಯುತ್ತಿದ್ದು, ಸಮೀಪದ ಕೃಷಿ ಜಮೀನುಗಳನ್ನು ಆಪೋಷನ ತೆಗೆದುಕೊಳ್ಳುತ್ತಿವೆ. ರಭಸದ ನಿರಂತರ ಮಳೆ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ.
ತಾಲೂಕಿನ ಕೊಂಡೋಜಿ ವಡಗೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರೇಶ ಯಲ್ಲಪ್ಪ ಕಾಡನವರ (38) ಎಂಬ ಯುವಕ ಮನೆ ಹಿತ್ತಲಿನ ಸಣ್ಣ ಪ್ರಮಾಣದ ಕೆರೆಯಲ್ಲಿ ಕಾಲು ಜಾರಿ ಮೃತಪಟ್ಟಿದ್ದಾನೆ. ತಾಲೂಕಿನ ನಾಲ್ಕರ್ ಕರ್ತಿ ಸಮೀಪ ಹಾವೇರಿ-ಶಿರಶಿ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಮೇಲೆ ಮರ ಉರುಳಿ ಬಿದ್ದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಶಿರಶಿ ಘಟಕಕ್ಕೆ ಸೇರಿದ ಬಸ್ ಮುಂಭಾಗ ಜಖಂಗೊಂಡಿದೆ. ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಪೊಲೀಸ್, ಅರಣ್ಯ ಇಲಾಖೆ ಮರ ತೆರವು ಕಾರ್ಯಾಚರಣೆ ಕೈಗೊಂಡು ರಸ್ತೆ ಸಂಚಾರಕ್ಕೆ ಸಹಕರಿಸಿದರು.
ತಾಲೂಕಿನ ಅಲ್ಲಾಪೂರ ಮತ್ತು ನರೇಗಲ್ ಗ್ರಾಮದಲ್ಲಿ ವರದಾ ನದಿ ಸಮೀಪದ ಕುರಿ ದಡ್ಡಿಗೆ ನದಿ ನೀರು ನುಗ್ಗಿ ಸುಮಾರು 350 ಮೇಕೆ, ಕುರಿಗಳು ಜಲಸಮಾಧಿ ಆಗಿವೆ. ಅಲ್ಲಾಪೂರ ಗ್ರಾಮದ ಜಿಲಾನಿ ಯೂಸೂಪ್ ಇನಾಂದಾರ್ ಅವರ 42 ಕುರಿ, ಮೇಕೆಗಳು, ನರೇಗಲ್ ಗ್ರಾಮದ ಮಿಶ್ಕಿನ್ಸಾಬ್ ಇನಾಂದಾರ್ ಅವರ 170 ಕುರಿಗಳು, ಗೌಸ್ಮೊದ್ದೀನ್ ಇನಾಂದಾರ್ ಅವರ 102 ಕುರಿಗಳು ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗಿವೆ. ಕೆಲವು ಕುರಿಗಳ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಗಂಗಪ್ಪ.ಎಂ ಮತ್ತು ಪಶು ವೈದ್ಯಾಧಿಕಾರಿ ಗಿರೀಶ ರಡ್ಡೇರ ಭೇಟಿ ನೀಡಿದ್ದರು.
ಧಾರಾಕಾರ ಮಳೆಯ ಪರಿಣಾಮ ವರದಾ ನದಿ ಪಾತ್ರದಲ್ಲಿ ಒಳಹರಿವು ಹೆಚ್ಚುತ್ತಿದೆ. ಧರ್ಮಾ ನದಿ ಅಚ್ಚುಕಟ್ಟು ಭಾಗದಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ನದಿ ಪಾತ್ರ ತುಂಬಿಕೊಂಡಿದೆ. ಧರ್ಮಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಧರ್ಮಾ ನದಿ ಸೇರುತ್ತಿರುವ ಕಾರಣ ನದಿಯ ರಭಸ ವೇಗ ಪಡೆದುಕೊಂಡಿದೆ.
ನದಿ ಪಾತ್ರದ ಗ್ರಾಮಸ್ಥರಿಗೆ ಕಂದಾಯ ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದ್ದು, ನದಿ ಸಮೀಪ ಹೋಗದಂತೆ ಎಚ್ಚರಿಸಿದೆ. ಅಲ್ಲದೆ, ಗಂಜಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಬುಧವಾರ ಅಲ್ಲಾಪೂರ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರ ತೆರೆಯಲಾಗಿದೆ. ಹಾನಗಲ್ಲನ ನವನಗರ ಭಾಗದಲ್ಲಿ ನೆಲೆಸಿರುವ ಅಲೆಮಾರಿ 60 ಕುಟುಂಬಗಳಿಗೆ ಗಂಜಿ ಕೇಂದ್ರ ತೆರೆಯುವ ಕಾರ್ಯ ನಡೆಯುತ್ತಿದೆ. ನಿರಂತರ ಮಳೆ ಜೊತೆಯಲ್ಲಿ ಜೋರು ಗಾಳಿಗೆ ಅಲ್ಲಲ್ಲಿ ಮರ ಉರುಳಿ ಬಿದ್ದಿವೆ. ಕೆಲವೆಡೆ ಮನೆಗಳು ಕುಸಿದಿವೆ.
ತಾಲೂಕಿನ ಮಂತಗಿ ಗ್ರಾಮದ ಮುತ್ತಣ್ಣ ಪೂಜಾರ ಅವರ ತೋಟಕ್ಕೆ ಪಕ್ಕದ ಝಡತಿ ಕಾಲುವೆ ನೀರು ನುಗಿದೆ. 50 ಸಾವಿರ ಅಡಿಕೆ ಸಸಿಗಳು, 5 ಸಾವಿರ ತೆಂಗು ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 6 ಎಕರೆ ಭಾಗದಲ್ಲಿ ಹಚ್ಚಿದ್ದ 25 ದೇಶಿ ತಳಿಯ ಭತ್ತದ ನಾಟಿ ಹಾನಿಗೊಂಡಿದೆ. 2 ಎಕರೆ ಅಡಿಕೆ ತೋಟ ನಾಶಗೊಂಡಿದ್ದು, ಮುತ್ತಣ್ಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಇದೇ ರೀತಿ ಮಳೆ ಮುಂದುವರೆದರೆ ವರದಾ, ಧರ್ಮಾ ನದಿ ತೀರದ ಗ್ರಾಮಗಳು ಮುಳುಗಡೆ ಆಗುವ ಭೀತಿ ಏರ್ಪಟ್ಟಿದೆ. ಹೀಗಾಗಿ ತಾಲೂಕು ಆಡಳಿತ ಹೈ ಅಲರ್ಟ್ನಲ್ಲಿದೆ.
ಜಲಾಶಯ ಭರ್ತಿ: ಮಳಗಿ ಧರ್ಮಾ ಜಲಾಶಯ ಒಂದೇ ದಿನದಲ್ಲಿ 6 ಅಡಿ ನೀರು ಸಂಗ್ರಹಗೊಂಡು ಮಂಗಳವಾರ ಕೋಡಿ ಬಿದ್ದಿದ್ದು, ಜಲಾಶಯದ ಹೆಚ್ಚುವರಿ ನೀರು ಧರ್ಮಾ ಒಡಲು ಸೇರಿಕೊಳ್ಳುತ್ತಿದೆ. ಹೀಗಾಗಿ ಧರ್ಮಾ ಭೋರ್ಗರೆಯುತ್ತಿದೆ. ಧರ್ಮಾ ದಂಡೆಯ ಕೃಷಿ ಪಂಪ್ಸೆಟ್ಗಳು ಮುಳುಗಿವೆ.
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್ ಗೋಯಲ್, ತಹಶೀಲ್ದಾರ್ ಗಂಗಪ್ಪ.ಎಂ ಮತ್ತು ಬೃಹತ್ ನೀರಾವರಿ ಇಲಾಖೆ ಎಇಇ ಶಿವಮೂರ್ತಿ ಅವರು ಧರ್ಮಾ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ತಾಲೂಕಿನ ಕೊಂಡೋಜಿ ವಡಗೇರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರೇಶ ಯಲ್ಲಪ್ಪ ಕಾಡನವರ (38) ಎಂಬ ಯುವಕ ಮನೆ ಹಿತ್ತಲಿನ ಸಣ್ಣ ಪ್ರಮಾಣದ ಕೆರೆಯಲ್ಲಿ ಕಾಲು ಜಾರಿ ಮೃತಪಟ್ಟಿದ್ದಾನೆ. ತಾಲೂಕಿನ ನಾಲ್ಕರ್ ಕರ್ತಿ ಸಮೀಪ ಹಾವೇರಿ-ಶಿರಶಿ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಮೇಲೆ ಮರ ಉರುಳಿ ಬಿದ್ದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಶಿರಶಿ ಘಟಕಕ್ಕೆ ಸೇರಿದ ಬಸ್ ಮುಂಭಾಗ ಜಖಂಗೊಂಡಿದೆ. ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಪೊಲೀಸ್, ಅರಣ್ಯ ಇಲಾಖೆ ಮರ ತೆರವು ಕಾರ್ಯಾಚರಣೆ ಕೈಗೊಂಡು ರಸ್ತೆ ಸಂಚಾರಕ್ಕೆ ಸಹಕರಿಸಿದರು.
ತಾಲೂಕಿನ ಅಲ್ಲಾಪೂರ ಮತ್ತು ನರೇಗಲ್ ಗ್ರಾಮದಲ್ಲಿ ವರದಾ ನದಿ ಸಮೀಪದ ಕುರಿ ದಡ್ಡಿಗೆ ನದಿ ನೀರು ನುಗ್ಗಿ ಸುಮಾರು 350 ಮೇಕೆ, ಕುರಿಗಳು ಜಲಸಮಾಧಿ ಆಗಿವೆ. ಅಲ್ಲಾಪೂರ ಗ್ರಾಮದ ಜಿಲಾನಿ ಯೂಸೂಪ್ ಇನಾಂದಾರ್ ಅವರ 42 ಕುರಿ, ಮೇಕೆಗಳು, ನರೇಗಲ್ ಗ್ರಾಮದ ಮಿಶ್ಕಿನ್ಸಾಬ್ ಇನಾಂದಾರ್ ಅವರ 170 ಕುರಿಗಳು, ಗೌಸ್ಮೊದ್ದೀನ್ ಇನಾಂದಾರ್ ಅವರ 102 ಕುರಿಗಳು ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗಿವೆ. ಕೆಲವು ಕುರಿಗಳ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಗಂಗಪ್ಪ.ಎಂ ಮತ್ತು ಪಶು ವೈದ್ಯಾಧಿಕಾರಿ ಗಿರೀಶ ರಡ್ಡೇರ ಭೇಟಿ ನೀಡಿದ್ದರು.
ಧಾರಾಕಾರ ಮಳೆಯ ಪರಿಣಾಮ ವರದಾ ನದಿ ಪಾತ್ರದಲ್ಲಿ ಒಳಹರಿವು ಹೆಚ್ಚುತ್ತಿದೆ. ಧರ್ಮಾ ನದಿ ಅಚ್ಚುಕಟ್ಟು ಭಾಗದಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ನದಿ ಪಾತ್ರ ತುಂಬಿಕೊಂಡಿದೆ. ಧರ್ಮಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಧರ್ಮಾ ನದಿ ಸೇರುತ್ತಿರುವ ಕಾರಣ ನದಿಯ ರಭಸ ವೇಗ ಪಡೆದುಕೊಂಡಿದೆ.
ನದಿ ಪಾತ್ರದ ಗ್ರಾಮಸ್ಥರಿಗೆ ಕಂದಾಯ ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದ್ದು, ನದಿ ಸಮೀಪ ಹೋಗದಂತೆ ಎಚ್ಚರಿಸಿದೆ. ಅಲ್ಲದೆ, ಗಂಜಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಬುಧವಾರ ಅಲ್ಲಾಪೂರ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರ ತೆರೆಯಲಾಗಿದೆ. ಹಾನಗಲ್ಲನ ನವನಗರ ಭಾಗದಲ್ಲಿ ನೆಲೆಸಿರುವ ಅಲೆಮಾರಿ 60 ಕುಟುಂಬಗಳಿಗೆ ಗಂಜಿ ಕೇಂದ್ರ ತೆರೆಯುವ ಕಾರ್ಯ ನಡೆಯುತ್ತಿದೆ. ನಿರಂತರ ಮಳೆ ಜೊತೆಯಲ್ಲಿ ಜೋರು ಗಾಳಿಗೆ ಅಲ್ಲಲ್ಲಿ ಮರ ಉರುಳಿ ಬಿದ್ದಿವೆ. ಕೆಲವೆಡೆ ಮನೆಗಳು ಕುಸಿದಿವೆ.
ತಾಲೂಕಿನ ಮಂತಗಿ ಗ್ರಾಮದ ಮುತ್ತಣ್ಣ ಪೂಜಾರ ಅವರ ತೋಟಕ್ಕೆ ಪಕ್ಕದ ಝಡತಿ ಕಾಲುವೆ ನೀರು ನುಗಿದೆ. 50 ಸಾವಿರ ಅಡಿಕೆ ಸಸಿಗಳು, 5 ಸಾವಿರ ತೆಂಗು ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 6 ಎಕರೆ ಭಾಗದಲ್ಲಿ ಹಚ್ಚಿದ್ದ 25 ದೇಶಿ ತಳಿಯ ಭತ್ತದ ನಾಟಿ ಹಾನಿಗೊಂಡಿದೆ. 2 ಎಕರೆ ಅಡಿಕೆ ತೋಟ ನಾಶಗೊಂಡಿದ್ದು, ಮುತ್ತಣ್ಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಇದೇ ರೀತಿ ಮಳೆ ಮುಂದುವರೆದರೆ ವರದಾ, ಧರ್ಮಾ ನದಿ ತೀರದ ಗ್ರಾಮಗಳು ಮುಳುಗಡೆ ಆಗುವ ಭೀತಿ ಏರ್ಪಟ್ಟಿದೆ. ಹೀಗಾಗಿ ತಾಲೂಕು ಆಡಳಿತ ಹೈ ಅಲರ್ಟ್ನಲ್ಲಿದೆ.
ಜಲಾಶಯ ಭರ್ತಿ: ಮಳಗಿ ಧರ್ಮಾ ಜಲಾಶಯ ಒಂದೇ ದಿನದಲ್ಲಿ 6 ಅಡಿ ನೀರು ಸಂಗ್ರಹಗೊಂಡು ಮಂಗಳವಾರ ಕೋಡಿ ಬಿದ್ದಿದ್ದು, ಜಲಾಶಯದ ಹೆಚ್ಚುವರಿ ನೀರು ಧರ್ಮಾ ಒಡಲು ಸೇರಿಕೊಳ್ಳುತ್ತಿದೆ. ಹೀಗಾಗಿ ಧರ್ಮಾ ಭೋರ್ಗರೆಯುತ್ತಿದೆ. ಧರ್ಮಾ ದಂಡೆಯ ಕೃಷಿ ಪಂಪ್ಸೆಟ್ಗಳು ಮುಳುಗಿವೆ.
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್ ಗೋಯಲ್, ತಹಶೀಲ್ದಾರ್ ಗಂಗಪ್ಪ.ಎಂ ಮತ್ತು ಬೃಹತ್ ನೀರಾವರಿ ಇಲಾಖೆ ಎಇಇ ಶಿವಮೂರ್ತಿ ಅವರು ಧರ್ಮಾ ಜಲಾಶಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.