ಆ್ಯಪ್ನಗರ

ಎಪಿಎಂಸಿ ಕಾಯಿದೆ ತಿದ್ದುಪಡಿ ಅವೈಜ್ಞಾನಿಕ

ಬ್ಯಾಡಗಿ: ಎಪಿಎಂಸಿ ಕಾಯಿದೆ ತಿದ್ದುಪಡಿ ಅವೈಜ್ಞಾನಿಕವಾಗಿದ್ದು, ಸಾವಿರಾರು ಕೋಟಿ ರೂ. ಆದಾಯ ತರುತ್ತಿರುವ ತನ್ನದೇ ಅಂಗ ಸಂಸ್ಥೆಗಳನ್ನು ಮುಚ್ಚಿಸಲು ಹೊರಟಿರುವದು ರೈತರಿಗೆ ಹಾಗೂ ವರ್ತಕರಿಗೆ ದ್ರೋಹವೆಸಗಿದಂತೆ ಎಂದು ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಕಿಡಿಕಾರಿದರು.

Vijaya Karnataka 16 May 2020, 5:00 am
ಬ್ಯಾಡಗಿ: ಎಪಿಎಂಸಿ ಕಾಯಿದೆ ತಿದ್ದುಪಡಿ ಅವೈಜ್ಞಾನಿಕವಾಗಿದ್ದು, ಸಾವಿರಾರು ಕೋಟಿ ರೂ. ಆದಾಯ ತರುತ್ತಿರುವ ತನ್ನದೇ ಅಂಗ ಸಂಸ್ಥೆಗಳನ್ನು ಮುಚ್ಚಿಸಲು ಹೊರಟಿರುವದು ರೈತರಿಗೆ ಹಾಗೂ ವರ್ತಕರಿಗೆ ದ್ರೋಹವೆಸಗಿದಂತೆ ಎಂದು ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಕಿಡಿಕಾರಿದರು.
Vijaya Karnataka Web apmc act amendment unscientific
ಎಪಿಎಂಸಿ ಕಾಯಿದೆ ತಿದ್ದುಪಡಿ ಅವೈಜ್ಞಾನಿಕ


ಪಟ್ಟಣದ ವರ್ತಕರ ಸಂಘದಲ್ಲಿನಡೆದ ಸಭೆಯಲ್ಲಿಮಾತನಾಡಿದ ಅವರು, ಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿಬಂರ್‍ಧ ತೆಗೆದು ಹಾಕುವುದು, ರೈತನ ಬೆಳೆಗೆ ನೇರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಭರದಲ್ಲಿದಲಾಲರನ್ನು (ಕಮೀಶನ್‌ ಏಜೆಂಟ) ಮತ್ತು ಅಧೀಕೃತ ಎಪಿಎಂಸಿಗಳನ್ನು ಹಾಳು ಮಾಡುವುದು ಸರಿಯಾದ ಕ್ರಮವಲ್ಲಎಂದರು.

ವರ್ತಕ ಸುರೇಶ ಮೇಲಗಿರಿ ಮಾತನಾಡಿ, ಎಪಿಎಂಸಿಗಳ ಹಸ್ತಕ್ಷೇಪ ಅಥವಾ ನಿಯಂತ್ರಣವಿಲ್ಲದೇ ಕೃಷಿ ಹುಟ್ಟುವಳಿಗಳ ಮಾರಾಟ ಸಾಧ್ಯವೇ? ಆಹಾರ ಸಂಸ್ಕರಣಾ ಕಂಪನಿಗಳು ರೈತನಿಂದ ನೇರವಾಗಿ ಸರಕು ಸಂಗ್ರಹಿಸಲು ಸಾಧ್ಯವೇ? ರೈತ ವಿರೋಧಿ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಗೌರವ ಕಾರ‍್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ರಾಜ್ಯದಲ್ಲಿ162 ಕ್ಕೂ ಹೆಚ್ಚು ಎಪಿಎಂಸಿ ಮತ್ತು 354 ಕ್ಕೂ ಹೆಚ್ಚು ಉಪ ಮಾರುಕಟ್ಟೆ ಇವೆ. ಅಧೀಕೃತ ಲೈಸನ್ಸ್‌ ಹೊಂದಿರುವ 17 ಸಾವಿರ ವರ್ತಕರು, 34 ಸಾವಿರ ಕಮೀಶನ್‌ ಏಜೆಂಟರು ಬೀದಿಗೆ ಬರಲಿದ್ದಾರೆ. ಕಾಯಿದೆ ತಿದ್ದುಪಡಿ ತರದಂತೆ ಸಿಎಂಗೆ ತಹಸೀಲ್ದಾರ್‌ ಮೂಲಕ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ