ಆ್ಯಪ್ನಗರ

ಆದರ್ಶ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಹಡಪದ ಅಪ್ಪಣ್ಣ

ಬ್ಯಾಡಗಿ : ಪಠ್ಯಪುಸ್ತಕಗಳಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ, ಬಗ್ಗೆ ಪ್ರಕಟಿಸುವ ಮೂಲಕ ಅವರ ಇತಿಹಾಸ ಹಾಗೂ ವಚನಗಳ ಮೇಲೆ ಬೆಳಕು ಚೆಲ್ಲುವಂತ ಕಾರ್ಯ ಸರಕಾರದಿಂದಾಗಬೇಕಿದೆ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.

Vijaya Karnataka 17 Jul 2019, 5:00 am
ಬ್ಯಾಡಗಿ : ಪಠ್ಯಪುಸ್ತಕಗಳಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ, ಬಗ್ಗೆ ಪ್ರಕಟಿಸುವ ಮೂಲಕ ಅವರ ಇತಿಹಾಸ ಹಾಗೂ ವಚನಗಳ ಮೇಲೆ ಬೆಳಕು ಚೆಲ್ಲುವಂತ ಕಾರ್ಯ ಸರಕಾರದಿಂದಾಗಬೇಕಿದೆ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು.
Vijaya Karnataka Web HVR-16BYD3A
ಬ್ಯಾಡಗಿಯಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಚನ್ನಮಲ್ಲಿಕಾರ್ಜುನ ಶ್ರೀ ಮಾತನಾಡಿದರು.


ಮಂಗಳವಾರ ಸ್ಥಳೀಯ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿಯೇ ಸಮಾಜದಲ್ಲಿ ಸರ್ವ ಜನಾಂಗಗಳ ಅಭಿವೃಧ್ಧಿಗೆ ಶ್ರಮಿಸಿ ಆದರ್ಶ ಸಮಾಜ ನಿರ್ಮಾಣ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟು ಸಮಾಜ ಸುಧಾರಣೆ, ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರು ಒಬ್ಬ ಮಹಾನ್‌ ಮಾನವತವಾದಿ ಎಂದರು.

ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಸರ್ವಧರ್ಮಗಳ ಗುರಿಯೂ ಒಂದೇ ಆಗಿದ್ದು ಅದು ಕೇವಲ ಮಾನವನ ಕಲ್ಯಾಣವಾಗಿದೆ, ಇಂತಹ ಸಾರ್ವತ್ರಿಕ ಸತ್ಯವನ್ನು 12 ಶತಮಾನಗಳ ಹಿಂದೆಯೇ ಹಡಪದ ಅಪ್ಪಣ್ಣನವರು ಸಾರಿದ್ದರು ಎಂದರು.

ಮನಿಪ್ರ ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿ, ಜನರಲ್ಲಿ ಇತ್ತೀಚೆಗೆ ಧಾರ್ಮಿಕ ಭಾವನೆಗಳು ಹಾಗೂ ಮಾನವೀಯ ಮೌಲ್ಯಗಳು ಇನ್ನಿಲ್ಲ ದಂತಾಗಿದೆ. ಸ್ವಾರ್ಥಕ್ಕಾಗಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ವ್ಯಕ್ತಿಗಳಿಂದ ತಾವು ಬದುಕಿರುವ ಸಮಾಜಕ್ಕೆ ಏನು ಕೊಡಬಲ್ಲರು ಎಂಬುದನ್ನು ತಿಳಿಯುವುದು ಕಷ್ಟವಾಗಿದೆ. ಸಮಾಜದಲ್ಲಿ ಹತ್ತು ಹಲವು ಸಂಘರ್ಷಗಳು ನಡೆಯುತ್ತಿದ್ದು, ಧರ್ಮ ಪರಿಪಾಲನೆಯಿಂದ ಮಾತ್ರ ಜನರಲ್ಲಿ ಸಾಮರಸ್ಯ ಮೂಡಲು ಸಾಧ್ಯವೆಂದರು. ಪ್ರಸ್ತಾವಿಕವಾಗಿ ಮಾತನಾಡಿದ ಶಿಕ್ಷ ಕ ವಿಜಯ ಮಲ್ಲೂರ ಮಾತನಾಡಿದರು.

ಇದಕ್ಕೂ ಮುನ್ನ ಶ್ರೀ ಬೀರೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಮೊಟೆಬೆನ್ನೂರ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬ್ಯಾಟೆಪ್ಪನವರ, ಸದಸ್ಯೆ ರೇಣವ್ವ ಕಟ್ಟಿಮನಿ, ಸೋಮಣ್ಣ ಕರ್ನೂಲ, ದುಂಡೆಪ್ಪ ಕಾಯಕದ, ಬಸಲಿಂಗಪ್ಪ ಕಾಯಕದ. ಶಿವಾನಂದ ಕಟ್ಟಿಮನಿ, ಫಕ್ಕೀರಪ್ಪ ಕಟ್ಟಿಮನಿ, ಹಾಲೇಶ ಕಾಯಕದ, ರವೀಂದ್ರ ಪಟ್ಟಣಶೆಟ್ಟಿ, ಫಕ್ಕೀರಮ್ಮ ಚಲವಾದಿ, ಧನಂಜ ಯಕುಮಾರ. ಆರ್‌.ಎಂ.ಹುಬ್ಬಳ್ಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ