ಆ್ಯಪ್ನಗರ

ಕುರಿ ವ್ಯಾಪಾರಕ್ಕೆ ಸಂತೆ ವ್ಯವಸ್ಥೆ ಕಲ್ಪಿಸಿ

ರಾಣೇಬೆನ್ನೂರ : ನಗರದಲ್ಲಿಕುರಿ ವ್ಯಾಪಾರಕ್ಕೆ ಸಂತೆ ವ್ಯವಸ್ಥೆ ಮತ್ತು ಕಂಬಳಿ ನೇಕಾರರಿಗೂ ಸಹಾಯಧನ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಪ್ರದೇಶ ಕುರುಬ ಸಂಘದ ನೇತೃತ್ವದಲ್ಲಿಸಮಾಜದ ಜನರು ಉಪ ತಹಸೀಲ್ದಾರ ಎಂ.ಎಸ್‌.ಕಡೂರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

Vijaya Karnataka 28 May 2020, 5:00 am
ರಾಣೇಬೆನ್ನೂರ : ನಗರದಲ್ಲಿಕುರಿ ವ್ಯಾಪಾರಕ್ಕೆ ಸಂತೆ ವ್ಯವಸ್ಥೆ ಮತ್ತು ಕಂಬಳಿ ನೇಕಾರರಿಗೂ ಸಹಾಯಧನ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಪ್ರದೇಶ ಕುರುಬ ಸಂಘದ ನೇತೃತ್ವದಲ್ಲಿಸಮಾಜದ ಜನರು ಉಪ ತಹಸೀಲ್ದಾರ ಎಂ.ಎಸ್‌.ಕಡೂರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
Vijaya Karnataka Web arrange for sheep trade
ಕುರಿ ವ್ಯಾಪಾರಕ್ಕೆ ಸಂತೆ ವ್ಯವಸ್ಥೆ ಕಲ್ಪಿಸಿ


ಈ ಸಮಯದಲ್ಲಿಸಂಘದ ತಾಲೂಕು ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ತಾಲೂಕಿನಲ್ಲಿರುವ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕುರಿ ಸಾಕಣೆ ಮಾಡುವವರು ಮತ್ತು ಕುರಿ ಕಾಯುವವರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕುರಿಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಅವರೆಲ್ಲಕುಟುಂಬ ನಿರ್ವಹಣೆ ಮಾಡಲು ಪರಿತಪಿಸುವಂತಾಗಿದೆ. ಇವರಲ್ಲದೆ ತಾಲೂಕಿನಲ್ಲಿಕಂಬಳಿ ನೇಯ್ದು ಜೀವನ ಸಾಗಿಸುವ ಕುಟುಂಬಗಳು ಕೂಡ ಆರ್ಥಿಕ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ನೇಕಾರರಿಗೆ ಘೋಷಿಸಿರುವ ಪ್ಯಾಕೆಜ್‌ನಲ್ಲಿಕಂಬಳಿ ನೇಕಾರರನ್ನು ಸೇರ್ಪಡೆ ಮಾಡಬೇಕು ಹಾಗೂ ನಗರದಲ್ಲಿಈ ಹಿಂದಿನಂತೆ ವಾರದಲ್ಲಿಒಂದು ದಿನ ಕುರಿ ಮಾರಲು ಮಾರುಕಟ್ಟೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ತಾಲೂಕು ಪ್ರದೇಶ ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಚಂದ್ರಶೇಖರ ಕಂಬಳಿ, ಹನುಮಂತಪ್ಪ ದೇವರಗುಡ್ಡ ಆನಂದ ಹುಲ್ಬನಿ, ಕಿರಣ ಗುಳೇದ, ಭೀಮಪ್ಪ ಬಾಗಲರ, ಶಿವಪ್ಪ ಮೆಡ್ಲೇರಿ, ನಿಂಗಪ್ಪ ಗೌಡ್ರ, ಅಣ್ಣಪ್ಪ ಹಕಾರಿ, ಹುಚ್ಚಪ್ಪ ಪೂಜಾರ, ರಾಕೇಶ ಮೆಡ್ಲೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ