ಆ್ಯಪ್ನಗರ

ಆರ್ಟ್‌ ಗ್ಯಾಲರಿಯಿಂದ ಕಲಾ ಪ್ರೇಮ

ಹಾವೇರಿ: ಒಂದು ಕಾಲದಲ್ಲಿದೇವಸ್ಥಾನಗಳು ಲಲಿತ ಕಲೆಗಳ ಉಗಮ ತಾಣಗಳಾಗಿದ್ದವು. ಆದರೆ ಇಂದು ಕಲಾ ಗ್ಯಾಲರಿಗಳು ಹುಟ್ಟಿ ಕಲಾ ಪ್ರೇಮವನ್ನು ಜಾಗೃತಗೊಳಿಸುತ್ತಿವೆ ಎಂದು ಹಿರಿಯ ಕಲಾವಿದ ಮತ್ತು ಕಲಾ ವಿಮರ್ಶಕ ಚಿ.ಸು. ಕೃಷ್ಣಶೆಟ್ಟಿ ಹೇಳಿದರು.

Vijaya Karnataka 23 Sep 2019, 5:00 am
ಹಾವೇರಿ: ಒಂದು ಕಾಲದಲ್ಲಿದೇವಸ್ಥಾನಗಳು ಲಲಿತ ಕಲೆಗಳ ಉಗಮ ತಾಣಗಳಾಗಿದ್ದವು. ಆದರೆ ಇಂದು ಕಲಾ ಗ್ಯಾಲರಿಗಳು ಹುಟ್ಟಿ ಕಲಾ ಪ್ರೇಮವನ್ನು ಜಾಗೃತಗೊಳಿಸುತ್ತಿವೆ ಎಂದು ಹಿರಿಯ ಕಲಾವಿದ ಮತ್ತು ಕಲಾ ವಿಮರ್ಶಕ ಚಿ.ಸು. ಕೃಷ್ಣಶೆಟ್ಟಿ ಹೇಳಿದರು.
Vijaya Karnataka Web art love from the art gallery
ಆರ್ಟ್‌ ಗ್ಯಾಲರಿಯಿಂದ ಕಲಾ ಪ್ರೇಮ


ನಗರದ ಹೊರವಲಯದಲ್ಲಿರುವ ನಂದಿ ಬಡಾವಣೆಯಲ್ಲಿಭಾನುವಾರ ಹಂಚಿನಮನಿ ಆರ್ಟ್‌ ಗ್ಯಾಲರಿ ಉದ್ಘಾಟನಾ ಸಮಾರಂಭ ಮತ್ತು ಚಿತ್ರಕಲಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಲೆಯಾಗಲಿ ಮನಸ್ಸು ಮತ್ತು ಹೃದಯವನ್ನು ಸದಾ ಸ್ವಸ್ಥವಾಗಿ ಇಡುತ್ತದೆ. ಹಂಚಿನಮನಿ ಆರ್ಟ್‌ ಗ್ಯಾಲರಿ ಹೊಸ ಇತಿಹಾಸವನ್ನು ಸೃಷ್ಠಿ ಮಾಡಿದ್ದು ಕಲಾವಿದರು ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗೋಟಗೋಡಿ ಉತ್ಸವ ರಾಕ್‌ ಗಾರ್ಡನ ಕಲಾವಿದ ಟಿ.ಬಿ. ಸೊಲಬಕ್ಕನವರು ಮಾತನಾಡಿ, ಚಿತ್ರ ಕಲೆ ಉಳಿಯಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿಚಿತ್ರ ಕಲಾ ಶಿಕ್ಷಕರ ನೇಮಕಾತಿಯಾಗಬೇಕು. ಕಲಾವಿದರನ್ನು ಬೆಳೆಸಬೇಕಾಗಿದೆ ಎಂದ ಅವರು, ನಮ್ಮಲ್ಲಿಅನೇಕ ಅತ್ಯುತ್ತಮ ಚಿತ್ರ ಕಲಾವಿದರಿದ್ದಾರೆ. ಅವರ ಕಲಾ ಕೃತಿಗಳು ಹೊರದೇಶದಲ್ಲಿಮಾರಾಟವಾಗುತ್ತಿವೆ. ಆದರೆ ಚಿತ್ರಗಳು ನಮ್ಮಲ್ಲಿಯೇ ಸೂಕ್ತ ಮೌಲ್ಯ ಸಿಕ್ಕು ಕಲಾವಿದ ಬದುಕ ಬೆಳಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿರಾಜ್ಯದ ಬೇರೆ ಬೇರೆ ಭಾಗದಿಂದ 50 ಕ್ಕೂ ಹೆಚ್ಚು ಕಲಾವಿದರ ಚಿತ್ರಕಲಾ ಶಿಬಿರ ನಡೆಯಿತು. ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ ಚಿತ್ರಕಲಾ ಶಿಬಿರ ಉದ್ಘಾಟಿಸಿ, ಅರಮನೆ, ಪಂಚತಾರಾ ಹೋಟೆಲ್‌ಗಳಲ್ಲಿಬಂಡವಾಳಿಗರ ಸ್ವತ್ತಾಗಿದ್ದ ಚಿತ್ರಕಲೆ ಈಗ ಜನರ ಬಳಿ ಬಂದಿದೆ. ಕಲೆ ಉಳಿಯುವುದು ಮತ್ತು ಬೆಳೆಯುವುದು ಜನರ ನಡುವೆಯೇ ಹೊರತು ಅರಮನೆಯಲ್ಲಲ್ಲಎಂದರು.

ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಲಾವಿದರಿಗೆ ಕಲಾಕೃತಿಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಜಿಲ್ಲೆಯಲ್ಲಿಇಲ್ಲವಲ್ಲ ಎಂಬ ಕೊರಗು ಇತ್ತು. ಅವರಿಗೆ ಸೂಕ್ತ ವೇದಿಕೆ ಉಚಿತವಾಗಿ ಸಿಗುವ ಉದ್ದೇಶದಿಂದ ಕಲಾ ಗ್ಯಾಲರಿ ನಿರ್ಮಿಸಲಾಗಿದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಹಿರಿಯ ಕಲಾವಿದೆ ಎನ್‌.ಆರ್‌. ಬಾಳೀಕಾಯಿ, ಎಂಜನೀಯರ್‌ ಎಂ.ಎಂ. ಹೂಲಿಹಳ್ಳಿ, ಕಲಾವಿದ ಹರೀಶ ಮಾಳಪ್ಪನವರು ಮಾತನಾಡಿದರು. ವೇದಿಕೆಯಲ್ಲಿರೇಖಾ ಹಂಚಿನಮನಿ, ಸಿದ್ಧಪ್ಪ ಹಂಚಿನಮನಿ ಸೇರಿದಂತೆ ಉಪಸ್ಥಿತರಿದ್ದರು. ಆರಂಭದಲ್ಲಿಮಹಾಂತೇಶ ಮರಿಗೂಳಪ್ಪನವರ ಸ್ವಾಗತಿಸಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಡೆಸಿದರು. ಜಗದೀಶ ಚೌಟಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ