ಆ್ಯಪ್ನಗರ

ಎಫ್‌ಐಆರ್‌ನಲ್ಲಿ ಸಚಿವ ಅಶೋಕ ಪುತ್ರನ ಹೆಸರಿಲ್ಲ: ಬೊಮ್ಮಾಯಿ

ಹಾವೇರಿ: ಹೊಸಪೇಟೆ ಬಳಿ ನಡೆದ ಕಾರು ಅಪಘಾತ ಪ್ರಕರಣದ ಎಫ್‌ಐಆರ್‌ನಲ್ಲಿಸಚಿವ ಆರ್‌.ಅಶೋಕ ಪುತ್ರನ ಹೆಸರು ಇಲ್ಲಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 14 Feb 2020, 4:53 pm
ಹಾವೇರಿ: ಹೊಸಪೇಟೆ ಬಳಿ ನಡೆದ ಕಾರು ಅಪಘಾತ ಪ್ರಕರಣದ ಎಫ್‌ಐಆರ್‌ನಲ್ಲಿಸಚಿವ ಆರ್‌.ಅಶೋಕ ಪುತ್ರನ ಹೆಸರು ಇಲ್ಲಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web ashokas son not named in fir bommai
ಎಫ್‌ಐಆರ್‌ನಲ್ಲಿ ಸಚಿವ ಅಶೋಕ ಪುತ್ರನ ಹೆಸರಿಲ್ಲ: ಬೊಮ್ಮಾಯಿ


ನಗರದಲ್ಲಿಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಪಘಾತ ಪ್ರಕರಣದ ಕುರಿತು ಬಳ್ಳಾರಿ ಎಸ್ಪಿ ಜೊತೆ ಮಾತಾಡಿದ್ದೇನೆ. ಕಾರು ಅಪಘಾತದಲ್ಲಿಒಬ್ಬ ಪಾದಚಾರಿ, ಇನ್ನೊಬ್ಬ ಕಾರ್‌ನಲ್ಲಿದ್ದವನು ಸಾವನ್ನಪ್ಪಿದ್ದಾರೆ. ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ನ್ಯಾಯ ಸಮ್ಮತ ತನಿಖೆ ನಡೆಸಲಾಗುತ್ತದೆ. ಸದ್ಯ ಕಾರ್‌ ಅಪಘಾತ ಪ್ರಕರಣದಲ್ಲಿಯಾರಿದ್ದರು ಎಂದು ನಿಮಗೆ ಹೇಳುವುದಕ್ಕೆ ಬರೋದಿಲ್ಲಾ. ನನಗೂ ಹೇಳುವುದಕ್ಕೆ ಬರೋದಿಲ್ಲಾ, ತನಿಖೆ ನಂತರ ಎಲ್ಲಾಗೊತ್ತಾಗಲಿದೆ'' ಎಂದರು.

''ಹಾವೇರಿ ಜಿಲ್ಲೆಯಲ್ಲಿಅಧಿಕಾರಿಗಳ ಕಣ್ಣು ತಪ್ಪಿಸಿ ಮರಳು ಮಾಫಿಯಾ ನಡೆಯುತ್ತಿದೆ. ಇದರ ಬಗ್ಗೆ ಸ್ಥಳೀಯ ಸಾಮಾನ್ಯ ಜನರಿಗೆ ಮರಳು ಸಿಗುತ್ತಿಲ್ಲಎಂಬುದರ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮರಳಿನ ಸಮಸ್ಯೆ ಕುರಿತು ಸಿಎಂ ಈಗಾಗಲೇ ಚರ್ಚೆ ಮಾಡಿದ್ದಾರೆ. ಮರಳಿಗೆ ಹೊಸ ಯೋಜನೆ ರೂಪಿಸಿ ಪರಿಸರ ಕಾಪಾಡುವುದರ ಜೊತೆಗೆ ಸಾಮಾನ್ಯ ಜನರಿಗೆ ಮರಳು ಸಿಗುವ ವ್ಯವಸ್ಥೆ ಮಾಡುತ್ತೇವೆ'' ಎಂದರು.

ಈ ಸಂದರ್ಭದಲ್ಲಿಶಾಸಕ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿ.ಪಂ. ಸಿಇಒ ರಮೇಶ ದೇಸಾಯಿ, ಎಸ್‌ಪಿ ಕೆ.ಜಿ. ದೇವರಾಜು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ