ಹಿರೇಕೆರೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ತಾಲೂಕಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಂದು ದಿನದ ಗೌರವಧನ ಸಲ್ಲಿಸಲು ಒಪ್ಪಿಗೆ ಸೂಚಿಸಿ ಒಪ್ಪಿಗೆ ಪತ್ರವನ್ನು ಸೋಮವಾರ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಹಸೀಲ್ದಾರ್ ಆರ್.ಎಚ್.ಭಾಗವಾನ್ರಿಗೆ ಸಲ್ಲಿಸಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ನೀಲಮ್ಮ ವಾಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅತೀವೃಷ್ಠಿ ಮಳೆಯಿಂದ ಹಾಗೂ ನದಿಗಳಿಗೆ ಪ್ರವಾಹ ಉಂಟಾಗಿ ಮನೆ, ಆಸ್ತಿ ಕಳೆದುಕೊಂಡು ನಿರ್ಗತಿಕರಾದವರಿಗೆ ಬದುಕುವ ಧೈರ್ಯ ತುಂಬುವಂತಾಗಲು ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಒಂದು ದಿನದ ಗೌರವ ಧನ ನೀಡಲಿದ್ದೇವೆ ಎಂದು ಹೇಳಿದರು. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಒಪ್ಪಿಗೆ ಸೂಚಿಸಿದ ಪತ್ರವನ್ನು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದ್ದೇವೆ. ನಮ್ಮ ಒಂದು ದಿನದ ಗೌರವ ಧನವನ್ನು ಕಡಿತಗೊಳಿಸಿ ನೆರೆ ಸಂತ್ರಸ್ತರಿಗೆ ತಲುಪಿಸಲು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಸಿಡಿಪಿಒ ಎಂ.ವಿಜಯಕುಮಾರ, ಪ್ರೇಮಾ ಸಿದ್ದಪ್ಪಗೌಡ್ರ, ಪಾರ್ವತಮ್ಮ ಹಾದ್ರೀಹಳ್ಳಿ, ಸುನೀತಾ ಮರ್ಕಳ್ಳಿ, ಸರೋಜಾ ಚಕ್ರಸಾಲಿ, ಅನುಪಮಾ ಗಿರಣಿ, ಪಾರ್ವತಿ ಯತ್ತಿನಮನಿ, ಪ್ರೇಮಾ ಹುಲ್ಲಿನಕೊಪ್ಪ, ನೀಲಮ್ಮ ವೀರಾಪುರ, ಉಪಸ್ಥಿತರಿದ್ದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಅಧ್ಯಕ್ಷೆ ನೀಲಮ್ಮ ವಾಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅತೀವೃಷ್ಠಿ ಮಳೆಯಿಂದ ಹಾಗೂ ನದಿಗಳಿಗೆ ಪ್ರವಾಹ ಉಂಟಾಗಿ ಮನೆ, ಆಸ್ತಿ ಕಳೆದುಕೊಂಡು ನಿರ್ಗತಿಕರಾದವರಿಗೆ ಬದುಕುವ ಧೈರ್ಯ ತುಂಬುವಂತಾಗಲು ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಒಂದು ದಿನದ ಗೌರವ ಧನ ನೀಡಲಿದ್ದೇವೆ ಎಂದು ಹೇಳಿದರು. ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಒಪ್ಪಿಗೆ ಸೂಚಿಸಿದ ಪತ್ರವನ್ನು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದ್ದೇವೆ. ನಮ್ಮ ಒಂದು ದಿನದ ಗೌರವ ಧನವನ್ನು ಕಡಿತಗೊಳಿಸಿ ನೆರೆ ಸಂತ್ರಸ್ತರಿಗೆ ತಲುಪಿಸಲು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಸಿಡಿಪಿಒ ಎಂ.ವಿಜಯಕುಮಾರ, ಪ್ರೇಮಾ ಸಿದ್ದಪ್ಪಗೌಡ್ರ, ಪಾರ್ವತಮ್ಮ ಹಾದ್ರೀಹಳ್ಳಿ, ಸುನೀತಾ ಮರ್ಕಳ್ಳಿ, ಸರೋಜಾ ಚಕ್ರಸಾಲಿ, ಅನುಪಮಾ ಗಿರಣಿ, ಪಾರ್ವತಿ ಯತ್ತಿನಮನಿ, ಪ್ರೇಮಾ ಹುಲ್ಲಿನಕೊಪ್ಪ, ನೀಲಮ್ಮ ವೀರಾಪುರ, ಉಪಸ್ಥಿತರಿದ್ದರು.