ಆ್ಯಪ್ನಗರ

ಸದ್ಯಕ್ಕೆ ರಾಜಕೀಯ ಕ್ಷೇತ್ರಕ್ಕೆ ಬರಲ್ಲ: ಶಿವಲಿಂಗ ಶ್ರೀ

ರಟ್ಟೀಹಳ್ಳಿ: ಗುರು ಪರಂಪರೆಯ ವೃತ್ತಿಯಲ್ಲಿಪರಮೋಚ್ಛ ಸ್ಥಾನಕ್ಕೆ ಬಂದ ಮೇಲೆ ಇದಕ್ಕಿಂತ ದೊಡ್ಡ ಪದವಿ ಮತ್ತೊಂದಿಲ್ಲ. ಪ್ರಸ್ತುತ ದಿನದಲ್ಲಿರಾಜಕೀಯ ಕ್ಷೇತ್ರಕ್ಕೆ ಬರುವುದಕ್ಕೆ ನಮಗೆ ಮನಸ್ಸು ಇಲ್ಲ. ಹಾಗಾಗಿ ಸದ್ಯ ಯಾವುದೇ ಪಕ್ಷದಿಂದ ಚುನಾವಣೆಗೆ ತಾವು ಸ್ಫರ್ಧೆ ಮಾಡುವುದಿಲ್ಲಎಂದು ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 17 Nov 2019, 5:00 am
ರಟ್ಟೀಹಳ್ಳಿ: ಗುರು ಪರಂಪರೆಯ ವೃತ್ತಿಯಲ್ಲಿಪರಮೋಚ್ಛ ಸ್ಥಾನಕ್ಕೆ ಬಂದ ಮೇಲೆ ಇದಕ್ಕಿಂತ ದೊಡ್ಡ ಪದವಿ ಮತ್ತೊಂದಿಲ್ಲ. ಪ್ರಸ್ತುತ ದಿನದಲ್ಲಿರಾಜಕೀಯ ಕ್ಷೇತ್ರಕ್ಕೆ ಬರುವುದಕ್ಕೆ ನಮಗೆ ಮನಸ್ಸು ಇಲ್ಲ. ಹಾಗಾಗಿ ಸದ್ಯ ಯಾವುದೇ ಪಕ್ಷದಿಂದ ಚುನಾವಣೆಗೆ ತಾವು ಸ್ಫರ್ಧೆ ಮಾಡುವುದಿಲ್ಲಎಂದು ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web at present there is no politicsshivaling shree
ಸದ್ಯಕ್ಕೆ ರಾಜಕೀಯ ಕ್ಷೇತ್ರಕ್ಕೆ ಬರಲ್ಲ: ಶಿವಲಿಂಗ ಶ್ರೀ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಹಿರೇಕೆರೂರು ವಿಧಾನಸಭೆ ಚುನಾವಣೆಗೆ ರಟ್ಟೀಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಸ್ವಾಮೀಜಿ ಸ್ಪರ್ಧಿಸುತ್ತಾರೆಂದು ಸುದ್ದಿ ಹಬ್ಬಿತ್ತು. ಸ್ವಾಮೀಜಿಗಳು ಸ್ಪರ್ಧಿಸಬೇಕೊ ಬೇಡವೊ ಎಂಬ ಹಿನ್ನೆಲೆಯಲ್ಲಿಶುಕ್ರವಾರ ಮಠದ ಆವರಣದಲ್ಲಿಭಕ್ತರ ಸಭೆ ನಡೆದಿತ್ತು. ಸಭೆಯಲ್ಲಿಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಸಭೆಯಲ್ಲಿಶ್ರೀಗಳು ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಶನಿವಾರ ತಿಳಿಸುತ್ತವೆಂದು ಹೇಳಲಾಗಿತ್ತು ಎಂದರು.

ಭಕ್ತರು ನಮ್ಮನ್ನು ಈಗಲೂ ಗುರುವಾಗಿ ಸ್ವೀಕರಿಸುವ ಈ ಪರಂಪರೆ ಮುಂದುವರೆಸುವ ಅಪೇಕ್ಷೆಯುಳ್ಳವರಾಗಿರುವುದರಿಂದ ಗುರು ಪರಂಪರೆಯಲ್ಲಿ ಮುಂದುವರೆಯುತ್ತಿದ್ದೆವೆ. ಎಲ್ಲಾಪಕ್ಷದ ರಾಜಕೀಯ ಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿರುವ ನಿಟ್ಟಿನಲ್ಲಿಪ್ರಾಮಾಣಿಕ ಮತ್ತು ಪಾರದರ್ಶಕ ಅಭಿವೃದ್ಧಿ ಕಾರ‍್ಯ ಮಾಡಬೇಕೆಂದು ಎಚ್ಚರಕ್ಕೆ ಸಂದೇಶ ನೀಡುತ್ತವೆ. ಅಭಿವೃದ್ಧಿ ಕಾರ‍್ಯ ಆಗದೇ ಇದ್ದರೆ ಭಕ್ತರ ಇಚ್ಛಾನುಸಾರ ನಾವೇ ರಾಜಕೀಯ ಕ್ಷೇತ್ರಕ್ಕೆ ಇಳಿದು ಕ್ಷೇತ್ರದ ಸುಧಾರಣೆಗೆ ಬದ್ಧರಾಗಿರುತ್ತವೆ. ಎಲ್ಲರಾಜಕೀಯ ಪಕ್ಷದ ರಾಜ್ಯ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದು, ಅವರಿಗೂ ಸಹ ನಾವು ಅಭಿವೃದ್ಧಿ ಕಾರ‍್ಯ ಕೈಗೊಳ್ಳುವಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ 40 ಉದ್ದೇಶ ಈಡೇರಿಸಬೇಕೆಂದು ಮತ್ತು ತಾಲೂಕಿನ ಸಾಮಾಜಿಕ ನ್ಯಾಯ ವ್ಯವಸ್ಥೆಗೆ ಬದ್ಧರಾಗಿರಬೇಕೆಂದು ಸೂಚಿಸಿದ್ಧೇವೆ ಎಂದು ಹೇಳಿದರು.

ಎಂ.ಎಚ್‌.ಹರವಿಶೆಟ್ಟರ, ನಿಂಗಪ್ಪ ಚಳಗೇರಿ, ಶಿವಾನಂದ ಹಳ್ಳೇರ, ಬಸವರಾಜ ಬಾಗೂರು, ಎನ್‌.ಸಿ.ಕಠಾರೆ, ಯೋಗೇಶಯ್ಯ ಹಿರೇಮಠ, ರವೀಂದ್ರ ಗಂಗಪ್ಪನವರ, ರಾಜು ಹಿರೇಮಠ, ಕೆ.ಎಸ್‌.ಕಬ್ಬಿಣಕಂಥಿಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ