ಆ್ಯಪ್ನಗರ

ಸರ್ವ ಧರ್ಮಗಳಲ್ಲಿ ಬಾಂಧವ್ಯ ಬೆಳೆಯಲಿ

ಸವಣೂರು: ಸಂಬಂಧಗಳ ಮುಂದೆ ಜಾತಿ, ಧರ್ಮ ಹೆಚ್ಚು ಕಡಿಮೆ ಎನ್ನುವುದು ಇರುವುದಿಲ್ಲಾ. ಆದರೆ ಆಚರಣೆಯ ಪದ್ಧತಿಗಳು ಮಾತ್ರ ವಿಭಿನ್ನವಾಗಿವೆ. ಸರ್ವ ಧರ್ಮಗಳು ಸಂಬಂಧ ಬೆಸೆಯುವ ಮೂಲಕ ಒಂದಾಗುವದು ಅವಶ್ಯವಾಗಿದೆ ಎಂದು ಬಾಲೆಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 5 Mar 2019, 5:00 am
ಸವಣೂರು: ಸಂಬಂಧಗಳ ಮುಂದೆ ಜಾತಿ, ಧರ್ಮ ಹೆಚ್ಚು ಕಡಿಮೆ ಎನ್ನುವುದು ಇರುವುದಿಲ್ಲಾ. ಆದರೆ ಆಚರಣೆಯ ಪದ್ಧತಿಗಳು ಮಾತ್ರ ವಿಭಿನ್ನವಾಗಿವೆ. ಸರ್ವ ಧರ್ಮಗಳು ಸಂಬಂಧ ಬೆಸೆಯುವ ಮೂಲಕ ಒಂದಾಗುವದು ಅವಶ್ಯವಾಗಿದೆ ಎಂದು ಬಾಲೆಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web attachment to all religions
ಸರ್ವ ಧರ್ಮಗಳಲ್ಲಿ ಬಾಂಧವ್ಯ ಬೆಳೆಯಲಿ


ಸವಣೂರು ತಾಲೂಕಿನ ಗೋನಾಳ ಗ್ರಾಮದಲ್ಲಿ 14ನೇ ವರ್ಷದ ಜಲ್ಸಾ ಏ ಯಾದೇ ಹುಸೇನ್‌ ಉರುಸು ಸ್ಮರಣೋತ್ಸವದ ಅಂಗವಾಗಿ ಹಜರತ್‌ ಸೂಫಿ ಶಾ ಕಲಿಮುಲ್ಲಾ ಖಾದ್ರಿ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ಜರುಗಿದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ದೇವರು ಮನುಷ್ಯನನ್ನು ಮಾತ್ರ ಹುಟ್ಟಿಸಿದ್ದಾನೆ. ಆದರೆ, ಮನುಷ್ಯ ಜಾತಿ ಹಾಗೂ ಧರ್ಮ ಹುಟ್ಟುಹಾಕಿ ಗೊಂದಲ ಸೃಷ್ಟಿಸಿದ್ದಾನೆ ಎಂದರು.

ಸಮ್ಮೇಳನದಲ್ಲಿ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ತಾವು ಆಚರಿಸುವ ಧರ್ಮ ಗುರುಗಳ ಭೋಧನೆಯನ್ನು ಅಥೈರ್‍ಯಿಸಿಕೊಂಡು ಸರ್ವಧರ್ಮಿಯರೊಂದಿಗೆ ಹೊಂದಾಣಿಕೆ ಜೀವನ ಕೈಗೊಂಡಲ್ಲಿ ಮಾತ್ರ ಸಾರ್ಥಕ ಜೀವನ ಪಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಹಿರೇಬಾಗೆವಾಡಿ ಹಜರತ್‌ ಸಯ್ಯದ ಕಮಾಲುದ್ದಿನ್‌ಶಾಹ ಖಾದ್ರಿ ದಿವ್ಯ ಸಾನ್ನಿಧ್ಯ ಆಶೀರ್ವಚನ ನಿಡಿದರು. ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬೌದ್ಧ ಧರ್ಮ ವಿಶ್ಲೇಷಕ ಶಿಗ್ಗಾಂವಿ ಚನ್ನಪ್ಪ ಕುನ್ನೂರ ಕಾಲೇಜನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಿದರು.

ಹುಬ್ಬಳ್ಳಿಯ ಗುರುದ್ವಾರಾಸಿಂಗ ಸಭಾದ ಗ್ಯಾನಿ ಮೇಜರ್‌ ಸಿಂಗಜೀ, ಹಾವೇರಿ ಸೆಂಟ್‌ ಆನ್ಸ್‌ ಚರ್ಚ್‌ ಫಾದರ ಮಾರ್ಟನ್‌ ವಾಝ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಹಶೀಲ್ದಾರ ವಿ.ಡಿ.ಸಜ್ಜನ್‌, ಜಿ.ಪಂ ಸದಸ್ಯ ರಮೇಶ ದುಗ್ಗತ್ತಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಸೊಪ್ಪಿನ, ತಾ.ಪಂ ಸದಸ್ಯ ನಾಗೇಶ ಮೋತೆ, ಚಿಲ್ಲೂರಬಡ್ನಿ ಗ್ರಾ.ಪಂ ಉಪಾಧ್ಯಕ್ಷ ಕರಿಯಪ್ಪ ದೊಡ್ಡಮನಿ, ಸದಸ್ಯರಾದ ಖಾಜಾಸಾಬ್‌ ಆನಿ, ಮಹಬೂಬಿ ದೊಡ್ಡಮನಿ, ಶಾಸನಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ