ಆ್ಯಪ್ನಗರ

ಪೊಲೀಸರಿಂದ ಸಮಸ್ಯೆಯಾದರೆ ದೂರು ನೀಡಲು ಪ್ರಾಧಿಕಾರ

ಹಾನಗಲ್ಲ: ಪೊಲೀಸ್‌ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಗಳಾದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಲು ಹೊಸ ಕಾನೂನು ಜಾರಿಯಾಗಿದೆ ಎಂದು ಹಾನಗಲ್ಲ ಸಿವಿಲ್‌ ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀಶೆ ಸುಜಾತಾ ಪಾಟೀಲ ಸಲಹೆ ನೀಡಿದರು.

Vijaya Karnataka 18 Jul 2019, 5:00 am
ಹಾನಗಲ್ಲ: ಪೊಲೀಸ್‌ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಗಳಾದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಲು ಹೊಸ ಕಾನೂನು ಜಾರಿಯಾಗಿದೆ ಎಂದು ಹಾನಗಲ್ಲ ಸಿವಿಲ್‌ ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀಶೆ ಸುಜಾತಾ ಪಾಟೀಲ ಸಲಹೆ ನೀಡಿದರು.
Vijaya Karnataka Web HVR-17HGL1


ಇಲ್ಲಿನÜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಪೊಲೀಸ್‌ ದೂರು ಪ್ರಾಧಿಕಾರ ಮತ್ತು ಮೂಲ ಕಾನೂನುಗಳ ಅರಿವು, ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸ್ಥ ಸಮಾಜ ನಿರ್ಮಾಣದ ಯಶಸ್ಸಿನಲ್ಲಿ ಪೊಲೀಸ್‌ ಇಲಾಖೆಯ ರಕ್ಷ ಣೆ ನಿರ್ವಹಣೆಯೂ ಅತ್ಯಂತ ಆವಶ್ಯಕ. ವಿದ್ಯಾರ್ಥಿ ಸಮುದಾಯ ನಾಳೆಗಾಗಿ ಇಂದೇ ಗುರು ಹಿರಿಯರ ಮಾರ್ಗದರ್ಶನದಲ್ಲಿ ಎಚ್ಚರದಿಂದ ಜೀವನ ನಡೆಸಬೇಕು. ಒಳ್ಳೆಯದನ್ನು ಪಡೆಯಲು ಮುಂದಾಗಬೇಕು ಎಂದರು.

ಪೊಲೀಸ್‌ ಇಲಾಖೆಯಿಂದ ಸಾರ್ವಜನಿಕರಿಗೆ ನ್ಯಾಯ ದೊರೆಯದಿದ್ದರೆ, ದೂರು ನೀಡಿ ನ್ಯಾಯ ಪಡೆಯುವ ಅವಕಾಶವಿದ್ದು, ನಕಾರಾತ್ಮಕ ವಿಚಾರಗಳಿಂದ ದೂರವಾಗಿ, ಎಲ್ಲರೂ ಸಕಾರಾತ್ಮಕ ಯೋಚನೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.

ಹಾನಗಲ್ಲ ಪೊಲೀಸ್‌ ಠಾಣೆಯ ಪಿಎಸ್‌ಐ ಗುರುರಾಜ ಮೈಲಾರ ಅವರು ಪೊಲೀಸ್‌ ದೂರು ಪ್ರಾಧಿಕಾರ ವಿಷಯದ ಕುರಿತು ಮಾತನಾಡಿ, ಪೊಲೀಸ್‌ ಎಂದರೆ ವಿಲನ್‌ ಅಲ್ಲ, ಪೊಲೀಸರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಅವಕಾಶವಿಲ್ಲ. ಪೊಲೀಸರು ಪ್ರಶ್ನಾತೀತರೂ ಅಲ್ಲ, ಪೊಲೀಸ್‌ ಠಾಣೆಗೆ ಹೋಗುವುದು ಅಪರಾಧವೂ ಅಲ್ಲ. ಪೊಲೀಸರ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸಬೇಕು, ಬರಿ ದೋಷಗಳ ವಿಜೃಂಭಣೆ ಮಾಡುವುದಲ್ಲ ಎಂದ ಅವರು, ವಾಹನ ಚಾಲನೆ ವಿಷಯದಲ್ಲಿ ನಿಯಮಗಳ ಉಲ್ಲಂಘನೆ ಸರಿಯಲ್ಲ. ಅಲ್ಲದೆ ಆನ್‌ಲೈನ್‌ ಚೀಟಿಂಗ್‌ನಂತಹ ಅಪರಾಧಕ್ಕೆ ಸಿಕ್ಕಿಕೊಳ್ಳಬೇಡಿ, ಮೊಬೈಲ್‌ ಒಳ್ಳೆಯದಕ್ಕೆ ಬಳಸಿ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ನಾಡಿಗೆ ಸಂದೇಶ ನೀಡಿದ ದಾರ್ಶನಿಕರು, ಸಂತರು, ಮಹಾತ್ಮರ ಆದರ್ಶಗಳ ಪಾಲನೆಯ ಮೂಲಕ ಭವಿಷ್ಯದ ಮಾದರಿ ಜೀವನ ನಡೆಸಲು ವಿದ್ಯಾರ್ಥಿ ದೆಸೆಯಿಂದಲೇ ಸಜ್ಜುಗೊಳ್ಳಬೇಕು ಎಂದರು.

ನ್ಯಾಯವಾದಿ ರವಿಬಾಬು ಪೂಜಾರ, ಮೋಟಾರು ವಾಹನ ಕಾಯಿದೆ ವಿಷಯದ ಕುರಿತು ಉಪನ್ಯಾಸ ನೀಡಿದರು, ವಾಹನ ಸವಾರರು, ನಿಯಮ ಬಾಹೀರ ವಾಹನ ಚಾಲನೆಯಿಂದ ಅಪಘಾತಕ್ಕೆ ಕಾರಣವಾಗುತ್ತದೆ. ಸ್ವಾತಂತ್ರ್ಯ ಸ್ವೆಚ್ಛೆ ಆಗದಿರಲಿ. ವಿದ್ಯಾರ್ಥಿ ಜೀವನ ಸಾರ್ಥಕವಾಗಬೇಕು ಎಂದರು.

ಪ್ರಾಚಾರ್ಯ ಮಾರುತಿ ಶಿಡ್ಲಾಪೂರ ಅಧ್ಯಕ್ಷ ತೆ ವಹಿಸಿದ್ದರು. ನ್ಯಾಯವಾದಿಗಳಾದ ವಿನಾಯಕ ಕುರುಬರ, ಎಸ್‌.ಜಿ.ತಿಳವಳ್ಳಿ, ಅಧಿಕ ಸಹಾಯಕ ಸರಕಾರಿ ಅಭಿಯೋಜಕಿ ಇಂದುಮತಿ ಪಾಟೀಲ, ಉಪನ್ಯಾಸಕರಾದ ಸಿ.ವೈ.ಹಾವೇರಿ, ಎಚ್‌.ಎಸ್‌.ಬಾರ್ಕಿ, ರವಿಕುಮಾರ ಹೊನ್ನಾಳಿ, ವೀಣಾ ದೇವರಗುಡಿ, ಆಯಿಷಾ, ರಾಜು ಮರಡಿ, ಗೌರಿ ಜಡೆಗೊಂಡರ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ