ಆ್ಯಪ್ನಗರ

ಆಟೊ ಡ್ರೈವರ್‌ ಈಗ ಟ್ರಾಫಿಕ್‌ ಕಂಟ್ರೋಲರ್‌!

​ರಟ್ಟೀಹಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಇಲ್ಲಿನ ಆಟೊ ಚಾಲಕರೊಬ್ಬರು ಈಗ ಸಂಚಾರ ವಾಹನ ನಿಯಂತ್ರಿಸುವಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ.ರಟೀಹಳ್ಳಿಯ ಆಟೊ ಚಾಲಕ ವೀರಪ್ಪ ಹೆಬ್ಬಳ್ಳಿ ಅವರು ಯಾವುದೇ ಫಲಾಪಕ್ಷೆ ಬಯಸದೇ ಕೊರೊನಾ ಹಿನ್ನೆಲೆಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಟೊ ಚಾಲಕರ

Vijaya Karnataka 7 Apr 2020, 5:00 am
ಕರಿಯಪ್ಪ ಚೌಡಕ್ಕನವರ
Vijaya Karnataka Web auto driver traffic controller now
ಆಟೊ ಡ್ರೈವರ್‌ ಈಗ ಟ್ರಾಫಿಕ್‌ ಕಂಟ್ರೋಲರ್‌!

ರಟ್ಟೀಹಳ್ಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿಇಲ್ಲಿನ ಆಟೊ ಚಾಲಕರೊಬ್ಬರು ಈಗ ಸಂಚಾರ ವಾಹನ ನಿಯಂತ್ರಿಸುವಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಟೀಹಳ್ಳಿಯ ಆಟೊ ಚಾಲಕ ವೀರಪ್ಪ ಹೆಬ್ಬಳ್ಳಿ ಅವರು ಯಾವುದೇ ಫಲಾಪಕ್ಷೆ ಬಯಸದೇ ಕೊರೊನಾ ಹಿನ್ನೆಲೆಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಟೊ ಚಾಲಕರ ಸಮವಸ್ತ್ರವಾದ ಖಾಕಿ ಬಟ್ಟೆ ತೊಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೂ ತನ್ನ ಸ್ವಂತ ಆಟೊದಲ್ಲಿಮೈಕ್‌ ಕಟ್ಟಿಕೊಂಡು ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸುತ್ತಾರೆ.

ಜನ ಒಂದೆಡೆ ಸೇರಿದ್ದರೆ ಸಾಮಾಜಿಕ ಅಂತರ ಕಾಪಾಡುವ ಸಲಹೆ ನೀಡುವುದು, ಜನರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಟ್ರಾಫಿಕ್‌ ಸಮಸ್ಯೆ ಉಂಟಾದಾಗ ಟ್ರಾಫಿಕ್‌ ನಿಯಂತ್ರಿಸಿ ಗಮನಸೆಳೆಯುತ್ತಿದ್ದಾರೆ.

ಈ ಹಿಂದೆಯೂ ಯಾವುದೇ ಹಬ್ಬ, ಜಾತ್ರೆ, ಸಾರ್ವಜನಿಕ ಸಮಾರಂಭಗಳಲ್ಲಿವಾಹನಗಳನ್ನು ಸರದಿಯಾಗಿ ನಿಲ್ಲಿಸುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು, ಸರದಿ ಪ್ರಕಾರ ಜನರನ್ನು ಕಳಿಸುವುದು, ದೇವಸ್ಥಾನಕ್ಕೆ ಸರದಿಯಾಗಿ ಹೋಗಲು ನಿರ್ದೇಶಿಸುವುದು, ಈ ರೀತಿಯಾಗಿ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ