ಆ್ಯಪ್ನಗರ

ಗುರುವಿನ ಸ್ಮರಣೆಯಿಂದ ವಿಘ್ನ ನಿವಾರಣೆ

ಸವಣೂರು: ನಿರಂತರ ಗುರುವಿನ ಸ್ಮರಣೆ ಕೈಗೊಂಡು ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಯಾವುದೇ ವಿಘ್ನಗಳು ಬಾರದೆ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಬಂಕಾಪೂರ ಅರಳೇಲೆಹೀರೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Vijaya Karnataka 18 Jul 2019, 5:00 am
ಸವಣೂರು: ನಿರಂತರ ಗುರುವಿನ ಸ್ಮರಣೆ ಕೈಗೊಂಡು ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಯಾವುದೇ ವಿಘ್ನಗಳು ಬಾರದೆ ಒಳ್ಳೆಯ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಬಂಕಾಪೂರ ಅರಳೇಲೆಹೀರೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Vijaya Karnataka Web HVR-17SVR2


ಸವಣೂರು ಪಟ್ಟಣದ ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ವೀರಶೈವ ಪರಂಪರೆ, ಗುರು ಪರಂಪರೆಯನ್ನು ಹೊಂದುವ ಮೂಲಕ ಮಾತೃ ಹೃದಯದೊಂದಿಗೆ ಭಕ್ತರಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಧಾರ್ಮಿಕ ಭಾವನೆಯನ್ನು ಮೂಡಿಸುತ್ತಿದೆ. ಮಕ್ಕಳು ಧರ್ಮ ಪರಂಪರೆ ಅರಿಯಲು ತಾಯಿಂದರು ಸಂಸ್ಕಾರವಂತರಾಗುವದು ಅವಶ್ಯವಾಗಿದೆ. ಗುರುವಿನ ಪಾದಪೂಜೆಯಿಂದಾಗಿ ಭಕ್ತರ ಮನದಲ್ಲಿನ ಕಲ್ಮಶವನ್ನು ಕಳೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶ್ರೀ ರೇಣುಕಾಚಾರ್ಯ ಮಂದಿರ ಸಮಿತಿ ಅಧ್ಯಕ್ಷ ರವತಪ್ಪ ಬಿಕ್ಕಣ್ಣವರ ವಹಿಸಿದ್ದರು. ದೇವಸ್ಥಾನ ಸೇವಾ ಸಮೀತಿ ಉಪಾದ್ಯಕ್ಷ ಬಸಯ್ಯ ಮಹಾಂತಿನಮಠ, ಮಹೇಶ ಸಾಲಿಮಠ, ಆನಂದಯ್ಯ ಕಲ್ಮಠ, ಗಂಗಾಧರಸ್ವಾಮಿ ಚರಂತಿಮಠ, ಪ್ರವೀಣ ಚರಂತಿಮಠ, ಫಕ್ಕಿರಯ್ಯ ಗುರುಸ್ವಾಮಿಮಠ, ಉಮೇಶ ಕಳಕಪ್ಪನವರ, ಶಿವಪುತ್ರಯ್ಯ ಚರಂತಿಮಠ, ನಂದೀಶ ಕಂಬಾಳಿಮಠ, ರಮೇಶ ಮರೋಳ, ಸುರೇಶ ಗಾಣಗೇರ, ಜಗದೀಶ ನೀರಲಗಿ, ಸಿದ್ದಪ್ಪ ಹೂಗಾರ, ಬಸವರಾಜ ದೇವಗೇರಿ, ಕೊಟ್ರಯ್ಯ ಕಲ್ಮಠ ಇದ್ದರು.

ನೂರಾರು ಭಕ್ತರಿಂದ ಶ್ರೀಗಳ ಪಾದಪೂಜೆ ಕೈಗೊಂಡು ಆಶೀರ್ವಾದ ಪಡೆದರು. ನಂತರ, ಅನ್ನಸಂತರ್ಪಣೆ ಜರುಗಿತು. ಬಿ.ಎಸ್‌.ಚಳ್ಳಾಳ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ