ಆ್ಯಪ್ನಗರ

ಚೌಡಯ್ಯ ಸಮಾಜವನ್ನು ಎಸ್ಟಿಗೆ ಸೇರಿಸಿದರೆ ತೊಡೆ ಚರ್ಮದಿಂದ ಸಿಎಂಗೆ ಚಪ್ಪಲಿ!

“ನಾವು ಅಂಬಿಗರು ನಂಬಿಕಸ್ಥರು, ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್‌ ಶಾ ಭೇಟಿ ಮಾಡಿ ಎಸ್‌ಟಿಗೆ ಸೇರಿಸಿ. ಯಡಿಯೂರಪ್ಪ ಈಗಷ್ಟೇ ಅಲ್ಲ, ಮುಂದಿನ ಐದು ವರ್ಷದ ಸಿಎಂ ಆಗಲಿ,” ಎಂದು ಬಾಬುರಾವ್‌ ಚಿಂಚನಸೂರ ಹೇಳಿದ್ದಾರೆ.

Vijaya Karnataka 15 Jan 2020, 5:49 pm

ಹಾವೇರಿ: ಚೌಡಯ್ಯ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹುಟ್ಟಿ ಬಂದಿದ್ದಾರೆ. ಸಮಾಜವನ್ನು ಎಸ್‌ಟಿಗೆ ಸೇರಿಸಿದರೆ ಚಿಂಚನಸೂರ ದಂಪತಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ ಎಂಬುದಾಗಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹೇಳಿದ್ದಾರೆ.
Vijaya Karnataka Web Chaoudayya Community Program


ಹಾವೇರಿ ತಾಲೂಕಿನ ನರಸೀಪುರದಲ್ಲಿ ನಡಿಯುತ್ತಿರುವ ಅಂಬಿಗರ ಚೌಡಯ್ಯ ಜಯಂತೋತ್ಸವದಲ್ಲಿ ಮಾತನಾಡಿದ ಅವರು, “ನಾವು ಅಂಬಿಗರು ನಂಬಿಕಸ್ಥರು, ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್‌ ಶಾ ಭೇಟಿ ಮಾಡಿ ಎಸ್‌ಟಿಗೆ ಸೇರಿಸಿ. ಯಡಿಯೂರಪ್ಪ ಈಗಷ್ಟೇ ಅಲ್ಲ, ಮುಂದಿನ ಐದು ವರ್ಷದ ಸಿಎಂ ಆಗಲಿ,” ಎಂದರು.

ಅಂಬಿಗರ ಚೌಡಯ್ಯ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, “ವಾಸ್ತವಿಕ ಸಂಗತಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮಾತನಾಡಿದರೆ ಗೊಂದಲ ಉಂಟಾಗುತ್ತದೆ ಎನ್ನುವುದಕ್ಕೆ ಹರಿಹರ ಪೀಠದ ಘಟನೆಯೇ ಸಾಕ್ಷಿ,” ಎಂಬುದಾಗಿ ಮಂಗಳವಾರ ನಡೆದ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ’: ಕ್ಷಮೆ ಕೇಳಿದ ವಚನಾನಂದ ಸ್ವಾಮೀಜಿ

“ನಮ್ಮ ಸರಕಾರ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಗೊಂದಲ ಉಂಟಾಗಿರುವ ಸಂದರ್ಭದಲ್ಲಿ ಸಮಾಜಕ್ಕೆ ಇಷ್ಟೇ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದದ್ದು ಸೇರಿದಂತೆ ಏನೆಲ್ಲ ಘಟನೆಗಳು ಸಂಭವಿಸಿತು ಎನ್ನುವುದು ತಮಗೆಲ್ಲ ತಿಳಿದಿದೆ,” ಎಂದು ಹೇಳಿದ ಸಿಎಂ, “ಈ ಸಮಾರಂಭದಲ್ಲಿ ನಿಡುಮಾಮಿಡಿ ಶ್ರೀಗಳು ಸೇರಿದಂತೆ ಎಲ್ಲಾ ಶ್ರೀಗಳು ನೀಡಿರುವ ಮಾರ್ಗದರ್ಶನದಿಂದ ನನಗೆ ಆತ್ಮವಿಶ್ವಾಸ ಬಂದಿದೆ. ದಯವಿಟ್ಟು ಮುಂದಿನ ವರ್ಷ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಏನು ಮಾಡಬೇಕು ಎನ್ನುವ ಬಗ್ಗೆ ಸಲಹೆ ನೀಡಿದಲ್ಲಿ ಪಾಲಿಸಲು ಸಿದ್ದ,” ಎಂದು ವಿವರಿಸಿದರು.

ಗಂಗಾಮತ ಸಮಾಜ ಅಭಿವೃದ್ಧಿಗೆ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ಅನುದಾನ ನೀಡುವೆ. ಈ ಸಮಾಜವನ್ನು ಎಸ್‌ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ