ಆ್ಯಪ್ನಗರ

ಕೆಟ್ಟ ಸರಕಾರ ಕೆಡವಲು ರಾಜೀನಾಮೆ ನೀಡಿದೆ: ಬಿ.ಸಿ.ಪಾಟೀಲ್‌

ಹಿರೇಕೆರೂರು: ನನ್ನ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅನುದಾನ ನೀಡಲು ನಿರ್ಲಕ್ಷತ್ರ್ಯ ತೋರಿದ್ದರಿಂದ ಕೆಟ್ಟ ಸಮ್ಮಿಶ್ರ ಸರಕಾರ ರಾಜ್ಯದಲ್ಲಿಇರಲೇಬಾರದು ಎಂದು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಹಣಕ್ಕಾಗಿ ನನ್ನ ಸ್ವಾಭಿಮಾನ ಮಾರಿಕೊಳ್ಳುವವನು ನಾನಲ್ಲಎಂದು ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.

Vijaya Karnataka 27 Sep 2019, 5:00 am
ಹಿರೇಕೆರೂರು: ನನ್ನ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅನುದಾನ ನೀಡಲು ನಿರ್ಲಕ್ಷತ್ರ್ಯ ತೋರಿದ್ದರಿಂದ ಕೆಟ್ಟ ಸಮ್ಮಿಶ್ರ ಸರಕಾರ ರಾಜ್ಯದಲ್ಲಿಇರಲೇಬಾರದು ಎಂದು ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಹಣಕ್ಕಾಗಿ ನನ್ನ ಸ್ವಾಭಿಮಾನ ಮಾರಿಕೊಳ್ಳುವವನು ನಾನಲ್ಲಎಂದು ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.
Vijaya Karnataka Web bad government resigns to dismantle bc patil
ಕೆಟ್ಟ ಸರಕಾರ ಕೆಡವಲು ರಾಜೀನಾಮೆ ನೀಡಿದೆ: ಬಿ.ಸಿ.ಪಾಟೀಲ್‌


ಅವರು ಪಟ್ಟಣದಲ್ಲಿಗುರುವಾರ ನಡೆದ ಬಿ.ಸಿ.ಪಾಟೀಲ್‌ ಅಭಿಮಾನಿ ಬಳಗದ ಸಭೆಯಲ್ಲಿಮಾತನಾಡಿ, ಕೆಟ್ಟ ಸರಕಾರ ಕೆಡವಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅಧಿಕಾರ, ಹಣಕ್ಕಾಗಿ ಶಾಸಕ ಸ್ಥಾನ ಮಾರಿಕೊಂಡಿಲ್ಲಎಂದರು.

ಕ್ಷೇತ್ರದ 86 ಕೆರೆಗಳಿಗೆ ನೀರು ತುಂಬಿಸುವ 185 ಕೋಟಿ ರೂ.ಗಳ ಸರ್ವಜ್ಞ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅನುದಾನ ನೀಡದೆ ತಿರಸ್ಕಾರ ಮಾಡಿದ್ದರು. ಸಮ್ಮಿಶ್ರ ಸರಕಾರದಲ್ಲಿಶಾಸಕರ ಮಾತುಗಳಿಗೆ ಬೆಲೆ ಇರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೇಳಿದರು ನೀಡಲಿಲ್ಲ. ಸರಕಾರ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ದೂರಿದರು.

ಈಗಿನ ಸರಕಾರ 185 ಕೋಟಿ ರೂ. ಅನುದಾನಕ್ಕೆ ಅನುಮತಿಸಿದ್ದು ಬೋರ್ಡ್‌ ಮುಂದೆ ಬಂದಿದೆ. 26.50 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಈಗಿನ ಸರಕಾರ ಅನುದಾನ ನೀಡಿದೆ ಎಂದು ಹೇಳಿದರು.

ಅಭಿಮಾನಿಗಳಾದ ಜಿ.ಪಿ.ಪ್ರಕಾಶ, ಬಿ.ಕೆ.ಕುರಿಯವರ, ಹನುಮಂತಪ್ಪ ಮೇಗಳಮನಿ, ಬಾಬು ಜಡದಿ, ಬಸವರಾಜ ಕಾಲ್ವೀಹಳ್ಳಿ, ಮಂಜು ಚಲವಾದಿ, ಸುರೇಶ ಮಡಿವಾಳರ ಮಾತನಾಡಿದರು. ಜಿ.ಶಿವನಗೌಡ ಅಧ್ಯಕ್ಷತೆ ವಹಿಸಿದ್ದರು. ಆರ್‌.ಎನ್‌.ಗಂಗೋಳ್‌, ಕರೇಗೌಡ ಸಣ್ಣಕ್ಕಿ, ಹನುಮಂತಪ್ಪ ಹಡಗದ, ಫೀರ್‌ಅಹ್ಮದ್‌ ಬೇವಿನಹಳ್ಳಿ, ಸೃಷ್ಠಿ ಪಾಟೀಲ್‌, ವನಜಾ ಪಾಟೀಲ್‌, ಮಂಜುನಾಥ ತಳವಾರ, ಲಿಂಗರಾಜ ಹಳ್ಳಪ್ಪಗೌಡ್ರ, ಗಣೇಶ ವರ್ಣೇಕರ್‌, ದೊಡ್ಡಗೌಡ ಪಾಟೀಲ್‌, ಈರಣ್ಣ ಹಳ್ಳೂರು, ಜಿಲಾನಿ ಬಳಿಗಾರ, ಸಿದ್ದಪ್ಪ ಮೇದೂರು, ನಾಗರಾಜ ಚಳಗೇರಿ, ಲಿಂಗರಾಜ ಕುಂಟನಗೌಡ್ರ, ರೇಣುಕಪ್ಪ , ಕೆ.ಆರ್‌.ಪಾಟೀಲ್‌, ವಿಜಯ ಶಿರೋಳ್‌, ಜಟ್ಟೆಪ್ಪ ಮಳಗೊಂಡರ, ಎಸ್‌.ಆರ್‌.ಶಿವಲೀಲಾ, ರಮೇಶ ಹಳ್ಳಪ್ಪಗೌಡ್ರ, ಮಾದೇವಪ್ಪ ಲಮಾಣಿ, ವಿಜಯ ಮಡಿವಾಳರ, ನಾಗರಾಜ ಹಿರೇಮಠ, ರಘು ರಂಗಕ್ಕನವರ, ನಾಗರಾಜ ಹೊಳಲಕೇರಿ, ಸಣ್ಣಗೌಡ ಪಾಟೀಲ್‌ ಉಪಸ್ಥಿತರಿದ್ದರು. ಡಿ.ಸಿ.ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರೇಗೌಡ ಸಣ್ಣಕ್ಕಿ ಸ್ವಾಗತಿಸಿದರು. ಬಸವರಾಜ ಕಾಲ್ವೀಹಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ