ಆ್ಯಪ್ನಗರ

‘ಬ್ಯಾಡಗಿ ಸತ್ತ ಪ್ರಜೆ’ಯಿಂದ ಸಮಸ್ಯೆಗೆ ಚಾಟಿ ಏಟು

ಬ್ಯಾಡಗಿ: ಮನರಂಜನೆಗೆ ಸೀಮಿತವಾಗಿರುವ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ 'ಬ್ಯಾಡಗಿ ಸತ್ತ ಪ್ರಜೆ' ಎಂಬ ಫೇಸ್‌ಬುಕ್‌ ಐಡಿಯು, ಸಾಮಾಜಿಕ ಸಮಸ್ಯೆಗಳನ್ನು ಪೋಸ್ಟ್‌ ಮಾಡುವ ಮೂಲಕ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದೆ.

Vijaya Karnataka 5 Mar 2019, 5:00 am
ಬ್ಯಾಡಗಿ: ಮನರಂಜನೆಗೆ ಸೀಮಿತವಾಗಿರುವ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ 'ಬ್ಯಾಡಗಿ ಸತ್ತ ಪ್ರಜೆ' ಎಂಬ ಫೇಸ್‌ಬುಕ್‌ ಐಡಿಯು, ಸಾಮಾಜಿಕ ಸಮಸ್ಯೆಗಳನ್ನು ಪೋಸ್ಟ್‌ ಮಾಡುವ ಮೂಲಕ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದೆ.
Vijaya Karnataka Web HVR-04BYD1A


ಈ ಮೂಲಕ ಸುಮಾರು 4000ಕ್ಕೂ ಹೆಚ್ಚು ಫಾಲೋವರ್ಸ್‌ನ್ನು ಹೊಂದಿರುವ 'ಬ್ಯಾಡಗಿ ಸತ್ತ ಪ್ರಜೆ'ಯು ಕಳೆದ 8 ತಿಂಗಳಿನಿಂದ ತಾಲೂಕಿನ ಹಾಟ್‌ ಫೇವರೆಟ್‌ ಆಗಿದೆ.

ಸಮಸ್ಯೆಗಳಿಗೆ ಪರಿಹಾರ:
ಪ್ರತಿದಿನವೂ ತಾಲೂಕಿನ ಒಂದೊಂದು ಜ್ವಲಂತ ಸಮಸ್ಯೆಗಳ ಬಗ್ಗೆ ಪೋಸ್ಟ್‌ ಹಾಕಲಾಗುತ್ತಿದ್ದು, ಈಗಾಗಲೆ ಹಲವಾರು ಸಮಸ್ಯೆಗಳಿಗೆ ಪರಿಹಾರವೂ ದೊರಕಿದೆ. ಸಂತೆ ಮೈದಾನಕ್ಕೆ ರಾತ್ರಿ ಹೊತ್ತಲ್ಲಿ ವಿದ್ಯುತ್‌ ಅಳವಡಿಕೆ, ರಕ್ಷ ಣೆಗೆ ಗೇಟ್‌ ಅಳವಡಿಕೆ, ಶಿವಪುರ ಬಡಾವಣೆಯಲ್ಲಿ ನಡೆಯುತ್ತಿದ್ದ ಶುದ್ಧ ಕುಡಿಯುವ ನೀರಿನ ಕಳವು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತಾ ಪೋಸ್ಟ್‌ಗಳನ್ನು ಹಾಕಿದ್ದರ ಫಲವಾಗಿ ಅಧಿಕಾರಿಗಳು ಎಚ್ಚೆತ್ತಕೊಂಡು ಸಮಸ್ಯೆಗಳನ್ನು ಪರಿಹರಿಸಿರುವುದೇ ಸಾಕ್ಷಿಯಾಗಿದೆ.

ಯಾರನ್ನೂ ಬೀಡಲ್ಲ: ಫೇಸ್‌ಬುಕ್‌ನಲ್ಲಿ ನೇರಾ ನೇರ ಮಾತುಗಳ ಮೂಲಕ ಮತ್ತು ಸಮಸ್ಯೆಗೆ ಸಂಬಂಧಿಸಿದ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುವ 'ಸತ್ತ ಪ್ರಜೆ'ಯು ರಾಜಕಾರಣಿಗಳು, ಸೋಮಾರಿ ಅಧಿಕಾರಿಗಳು, ರಾಜಕೀಯ ಮುಖಂಡರ ಹಿಂಬಾಲಕರು ನಡೆಸುವ ದಬ್ಬಾಳಿಕೆ, ನಿರ್ಲಕ್ಷ ್ಯ ಧೋರಣೆಯನ್ನು ಪತ್ತೆ ಹಚ್ಚಿ ಸಾಕ್ಷಿ ಸಮೇತ ಪೋಸ್ಟ್‌ ಮಾಡುತ್ತಿರುವುದರಿಂದ ತಾಲೂಕಿನಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾನೆ.

4000 ಫಾಲೋವರ್ಸ್‌: 'ಬ್ಯಾಡಗಿ ಸತ್ತ ಪ್ರಜೆ'ಯ ಸಾಮಾಜಿಕ ಎಚ್ಚರಿಕೆಯ ಕಾರ‍್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈಗಾಗಲೇ ತಾಲೂಕಿನ ಜನರಲ್ಲದೇ ರಾಜ್ಯದ 4 ಸಾವಿರಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಉತ್ತಮ ಕಾರ‍್ಯ ಮಾಡುತ್ತಿರುವುದಾಗಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಸತ್ತ ಪ್ರಜೆಯ 'ನಾನು ಬ್ಯಾಡಗಿ ಜನರ ಪರ' ಎಂಬ ಟ್ಯಾಗ್‌ಲೈನ್‌ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

ಯಾರಿವನು ಸತ್ತ ಪ್ರಜೆ: ಅಷ್ಟಕ್ಕೂ ಈ 'ಸತ್ತ ಪ್ರಜೆ' ಹಿಂದಿನ ವ್ಯಕ್ತಿಯ ಯಾರು ಎಂಬುದು ಇಲ್ಲಿಯವರೆಗೆ ಕುತೂಹಲ ಮೂಡಿಸಿದೆ. ಈ ಐಡಿ ಕ್ರಿಯೇಟ್‌ ಮಾಡಿ ನಿರ್ವಹಣೆ ಮಾಡುತ್ತಿರುವ ವ್ಯಕ್ತಿ ಯಾರು? ಎಂಬುದು ಇಲ್ಲಿಯರೆಗೂ ಪತ್ತೆಯಾಗಿಲ್ಲ.

ಪೋಸ್ಟ್‌ ಮಾಡುವ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಯಲು ಕೆಲವು ರಾಜಕೀಯ ಮುಖಂಡರು, ಅವರ ಹಿಂಬಾಲಕರು ತಂತ್ರಜ್ಞಾನ ಪರಿಣಿತರನ್ನು ಬಳಸಿ ಮೈಸೂರಿನಲ್ಲಿ ಕುಳಿತು ಕಂಡುಹಿಡಿಯಲು ಪ್ರಯತ್ನಪಟ್ಟರೂ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಒಂದೆರದು ಬಾರಿ ಬ್ಲಾಕ್‌ ಮಾಡಿದ್ದರೂ ಮತ್ತೆ 'ಸತ್ತ ಪ್ರಜೆ' ಪುನಾರಂಭಗೊಂಡು ಪೋಸ್ಟ್‌ಗಳನ್ನು ಮಾಡುತ್ತಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ