ಆ್ಯಪ್ನಗರ

2 ತಿಂಗಳಾದರೂ ದುರಸ್ತಿ ಕಾಣದ ಬಾಂದಾರ್‌ ರಸ್ತೆ

ರಟ್ಟೀಹಳ್ಳಿ: ಎರಡು ತಿಂಗಳ ಹಿಂದೆ ಕುಮದ್ವತಿ ನದಿ ಉಕ್ಕಿ ಹರಿದ ಪರಿಣಾಮ ಕುಡುಪಲಿ-ಬಡಸಂಗಾಪುರ ಬಾಂದಾರ್‌ ರಸ್ತೆ ಕೊಚ್ಚಿಹೋಗಿದ್ದು, ಈವರೆಗೂ ದುರಸ್ತಿ ಕಂಡಿಲ್ಲ. ಇದರಿಂದಾಗಿ ಇಲ್ಲಿಸಂಚಾರಕ್ಕೆ ವ್ಯತ್ಯಯವಾಗಿದೆ.

Vijaya Karnataka 17 Oct 2019, 5:00 am
ರಟ್ಟೀಹಳ್ಳಿ: ಎರಡು ತಿಂಗಳ ಹಿಂದೆ ಕುಮದ್ವತಿ ನದಿ ಉಕ್ಕಿ ಹರಿದ ಪರಿಣಾಮ ಕುಡುಪಲಿ-ಬಡಸಂಗಾಪುರ ಬಾಂದಾರ್‌ ರಸ್ತೆ ಕೊಚ್ಚಿಹೋಗಿದ್ದು, ಈವರೆಗೂ ದುರಸ್ತಿ ಕಂಡಿಲ್ಲ. ಇದರಿಂದಾಗಿ ಇಲ್ಲಿಸಂಚಾರಕ್ಕೆ ವ್ಯತ್ಯಯವಾಗಿದೆ.
Vijaya Karnataka Web 16 RATTIHALLI   6_23


ಸಾಮಾನ್ಯ ವಾಹನಗಳ ಸಂಚಾರ, ರೈತರ ಎತ್ತಿನಗಾಡಿಗಳ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಜನರು ಸುತ್ತುವರೆದು ಹೋಗಬೇಕಾಗಿದೆ. ರೈತರಂತೂ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಕುಮದ್ವತಿ ನದಿಯ ಬಾಂದಾರ್‌ ಮೇಲಿನ ಈ ರಸ್ತೆ ಬಡಸಂಗಾಪುರ ಗ್ರಾಮದಿಂದ ಕುಡುಪಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಹಾಳಾಗಿರುವುದರಿಂದ ಶಾಲಾ ಮಕ್ಕಳು, ರೈತರು, ಎರಡು ಗ್ರಾಮಸ್ಥರು ಸುತ್ತುವರೆದು ಹೋಗಬೇಕಾಗಿದೆ.

ತಾತ್ಕಾಲಿಕ ರಸ್ತೆ ದುರಸ್ತಿಗೆ ವಿರೋಧ:
ಹಾಳಾದ ಬಾಂದಾರ್‌ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಾಂದಾರ್‌ ಮುಂಭಾಗದ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಅಲ್ಲದೇ ಬಾಂದಾರ ಪಕ್ಕದ ಜಮೀನುಗಳಲ್ಲಿಸಾಕಷ್ಟು ಕೊರೆತ ಉಂಟಾಗಿದೆ. ಇದರಿಂದ ರೈತರಿಗೂ ತೊಂದರೆಯಾಗಿದೆ. ತಾತ್ಕಾಲಿಕವಾಗಿ ನಿರ್ಮಾಣ ಮಾಡುವ ಬದಲು ಮುಂದೆ ಮತ್ತೆ ಸಮಸ್ಯೆಯಾಗದಂತೆ ಕೆಲಸ ಮಾಡಬೇಕೆಂದು ಹಾಗೂ ಬಾಂದಾರ್‌ಗೆ ಹೊಸ ಗೇಟ್‌ಗಳನ್ನು ಅಳವಡಿಸಬೇಕೆಂದು ಇಲ್ಲಿನ ಜನರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ