ಆ್ಯಪ್ನಗರ

ಕಾಯಕವನ್ನೇ ಅನುಭಾವ ಎಂದವರು ಬಸವಣ್ಣ

ಶಿಗ್ಗಾವಿ :ರೈತ ಸಂಘಟನೆ, ಚಳುವಳಿಗಳ ಮೂಲಕ ರಾಜಕೀಯ ಪ್ರವೇಶ ಮಾಡಿದ ನನಗೆ ರಾಜಕೀಯವಾಗಿ ಶಕ್ತಿ ನೀಡಿ, ಗಟ್ಟಿ ಉಸಿರು ಕೊಟ್ಟಿರುವ ರೈತರನ್ನು ಎಂದಿಗೂ ಮರೆಯಲ್ಲ. ಸ್ವಾಭಿಮಾನಿ ರೈತರೇ ಭಾರತ ದೇಶದಿಂದ ಪರಕೀಯರನ್ನು ಓಡಿಸಿದ್ದು ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

Vijaya Karnataka 19 Apr 2018, 5:00 am
ಹಾವೇರಿ :ವೈಯಕ್ತಿಕ ಕಾಯಕದ ಅನುಭವದ ಮೂಲಕ ಸಾಮೂಹಿಕ ಅನುಭಾವದ ಎತ್ತರಕ್ಕೆ ಒಯ್ಯುವ ವಚನ ಪ್ರಕಾರವನ್ನು ಸಾಮಾಜೀಕರಣಗೊಳಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
Vijaya Karnataka Web basavanna is the kindness of kakaka
ಕಾಯಕವನ್ನೇ ಅನುಭಾವ ಎಂದವರು ಬಸವಣ್ಣ


ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಬುಧವಾರ ನಡೆದ ಜಗಜ್ಯೋತಿ ಬಸವೇಶ್ವರರ 885ನೇ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿ, ನಾಡಿಗೆ ಬಿತ್ತರಿಸಿದರು ಎಂದು ಹೇಳಿದರು.

ಯುದ್ಧಗಳ ಜಗತ್ತಿನಲ್ಲಿ ಶರಣರ ಸಹಾಯದಿಂದ ಚಳುವಳಿಯನ್ನು ಮೊದಲಿಗೆ ರೂಪಿಸಿದವರು ಬಸವಣ್ಣನವರು. ಹಿಂಸೆ ಮತ್ತು ಯುದ್ಧಕ್ಕೆ ವಿರುದ್ಧವಾಗಿರುವ ಚಳುವಳಿಗಳು ಶೋಷಣೆಯಿಲ್ಲದ ಬದುಕಿನ ಪರವಾಗಿರುತ್ತವೆ. ಕನ್ನಡ ಭಾಷೆಯನ್ನು ಧರ್ಮದ, ದರ್ಶನದ, ಶಾಸ್ತ್ರದ, ಕಾಯಕಜೀವಿಗಳ ಸಾಹಿತ್ಯದ ಮತ್ತು ಚಳುವಳಿಯ ಭಾಷೆಯಾಗಿ ರೂಪಿಸಿ ಹೊಸ ಮಾನವೀಯ ವ್ಯವಸ್ಥೆಯನ್ನು ನಿರ್ಮಿಸಿದರು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕೆರಿಮತ್ತಿಹಳ್ಳಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಗಾಯತ್ರಿ ಮಾತನಾಡಿ, ಜಾತಿ ವರ್ಣಗಳ ಕಟ್ಟಳೆಗಳ ಮೂಲಕ ಹಾಕಿದ್ದ ನಿಗೂಢ ದಿಗ್ಬಂಧನವನ್ನು ಬಸವಣ್ಣ ಕಿತ್ತೆಸೆದು, ಇಡೀ ಮಾನವ ಕುಲ ಒಂದಾಗಿ ಸಕಲ ಜೀವಾತ್ಮರಿಗೂ ಲೇಸಿ ಬಯಸುವ ಹಾಗೆ ಬದುಕುವ ಕಲೆಯನ್ನು ಕಲಿಸಿದರು ಎಂದರು.

ಜೀವಕಾರುಣ್ಯ ತತ್ವದೊಂದಿಗೆ ಬಸವಣ್ಣ ಅಹಂಕಾರ ಮರ್ದನ ಮಾಡಿದರು. ಲಿಂಗ, ವರ್ಣ ಮತ್ತು ವರ್ಗಭೇದ ಮಾಡುವವರು ನಿಸರ್ಗ ವಿರೋಧಿಗಳು ಎಂದು ನಂಬಿದ್ದರು ಬಸವಣ್ಣ. ಶರಣರ ಸಂಕುಲದಲ್ಲಿ ಎಲ್ಲ ಕೃತ್ರಿಮ ಭೇದಭಾವಗಳಿಂದ ಹೊರಬಂದು ಬದುಕುವ ಕಲೆಯನ್ನು ಕಲಿತು ನವಮಾನವರಾಗಲು ಶ್ರಮಿಸಿದ ಬಸವಣ್ಣ ನವಯುಗದ ಪ್ರವರ್ತಕ ಎಂದು ಹೇಳಿದರು.

ಆಕಾಶವಾಣಿ ಕಲಾವಿದೆ ಮಮತಾ ನಂದೀಹಳ್ಳಿ ವಚನ ಸಂಗೀತ ಪ್ರಸ್ತುತ ಪಡಿಸಿದರು. ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಸವ ಬಳಗದವರು ಹೊರತಂದ ಬಸವೇಶ್ವರ ವಚನ ಪುಸ್ತಕ ಮತ್ತು ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವೀರಣ್ಣ ವಳಸಂಗದ, ಕಾರ್ಯದರ್ಶಿ ವಿಜಯಕುಮಾರ ಕೂಡ್ಲಪ್ಪನವರ, ಬಸವ ಬಳಗದ ಅಧ್ಯಕ್ಷ ಉಳಿವೆಪ್ಪ ಪಂಪಣ್ಣನವರ, ಮುರುಗೆಪ್ಪ ಕಡೆಕೊಪ್ಪ, ಇಂದುಧರ ಯರೇಶೀಮಿ, ಅನಿಲ ಮಹಾರಾಜಪೇಟೆ, ಕೆ.ಆರ್‌. ನಾಶೀಪುರ, ವಿ.ವಿ. ಬನ್ನಿಮಟ್ಟಿ ಉಪಸ್ಥಿತರಿದ್ದರು.

ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಸ್ವಾಗತಿಸಿದರು. ಎಸ್‌.ಸಿ ಮರಳಿಹಳ್ಳಿ ನಿರೂಪಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ