ಹಾನಗಲ್ಲ: ಅಂಧಃಕಾರದಿಂದ ಬಿಡಿಸಿ, ಸಮಾಜವನ್ನು ಸಾತ್ವಿಕ ಚಿತ್ತದಲ್ಲಿಇರಿಸಿ, ಸಮಾನತೆಯ ಸಬಲತೆಗೆ ಹೆಣಗಾಡಿದ ಮಾನವತಾವಾದಿ ಬಸವಣ್ಣ ನಿರ್ವಾಣದೆಡೆಗೆ ಸಾಗಿದ ದುರಂತ ಕಥೆಯು ಬಿಇಡಿ ವಿದ್ಯಾರ್ಥಿಗಳ ಕಲಾ ಪ್ರೌಢಿಮೆ ಮೂಲಕ ರಂಗದ ಮೇಲೆ ಹೃದ್ಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸಾಹಿತಿ ವಿ.ಕೃ.ಗೋಕಾಕ ಅವರ 'ಕಲ್ಯಾಣದಲ್ಲಿಬಸವಣ್ಣನವರ ಕೊನೆಯ ದಿನ' ಎಂಬ ಖಂಡ ಕಾವ್ಯವನ್ನು ನಾಟಕದ ರೂಪಕ್ಕಿಳಿಸಿ, ಸ್ಥಳೀಯ ಕುಮಾರೇಶ್ವರ ಬಿಇಡಿ ಪ್ರಶಿಕ್ಷಣಾರ್ಥಿಗಳಲ್ಲಿನ ರಂಗ ಕಲೆಯನ್ನು ಎಚ್ಚರಗೊಳಿಸಿದ ಸಾಹಿತಿ ಡಾ.ವಿಶ್ವನಾಥ ಬೋಂದಾಡೆ ಅವರ ಶ್ರಮ ಸಾರ್ಥಕವಾಯಿತು. ಹಾನಗಲ್ಲಿನ ಕುಮಾರೇಶ್ವರ ಬಿಇಡಿ ಕಾಲೇಜಿನಲ್ಲಿವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ ಅಚ್ಚುಮೆಚ್ಚಾಗಿತ್ತು.
ಶರಣರ ಸಾತ್ವಿಕ ಸಮಾಜ ಸುಧಾರಣೆಯ ಹಾದಿಯಲ್ಲಿಅಡ್ಡಾಗಿ ಬಂದವರು, ಮಹಾಮನೆ, ಶರಣರ ಜೀವನ ದೃಷ್ಟಿ, ಕಾಯಕದ ಪರಾಕಾಷ್ಠೆ, ವಚನ ಚಳವಳಿ, ಮೌಲಿಕ ದಾರಿ ತೋರಿದ ಶರಣರ ನಡೆ, ವಚನಕಾರರ ಒಟ್ಟು ಆದರ್ಶವನ್ನು ಕಟ್ಟಿಟ್ಟ ನಾಟಕ ಹೃದಯವಂತಿಕೆ ಮೆರೆಯುವಂತಿತ್ತು.
ಬಿಜ್ಜಳನ ಪಾತ್ರದಲ್ಲಿಮಧುರ ಹೆಗಡೆ, ಬಸವಣ್ಣನ ಪಾತ್ರದಲ್ಲಿಮೇಘಾ ಲಕ್ಕೊಳ್ಳಿ, ಅಕ್ಕಮಹಾದೇವಿ ಪಾತ್ರದಲ್ಲಿಅನ್ನಪೂರ್ಣ, ಅಲ್ಲಮನ ಪಾತ್ರದಲ್ಲಿಗಂಗವ್ವ ದುಂಡಿನವರ, ದೋಹರ ಕಕ್ಕಯ್ಯನ ಪಾತ್ರದಲ್ಲಿಅನಿತಾ ಬಣಕಾರ, ಯು.ಮಮತಾ (ಮಡಿವಾಳ ಮಾಚಯ್ಯ), ಸುಧಾಮನಿ ಮ್ಯಾಗೇರ, (ಗಂಗಾಬಿಕೆ), ಸಾವಿತ್ರವ್ವ ಚೂರಿ (ನೀಲಾಂಬಿಕೆ), ಕವಿತಾ (ಹರಳಯ್ಯ), ಶ್ರೀನಿಧಿ ಹೆಗಡೆ (ಮಧುವಯ್ಯ), ಅಕ್ಷತಾ ಹುಣಸಿಕಟ್ಟಿಮಠ (ಗಿರಿಜೆ), ಕಾವೇರಿ ಹೆಗಡೆ (ಶಂಕರ), ರಾಜೇಶ್ವರಿ (ಪಡಿಹಾರ ಉತ್ತಣ್ಣ), ವಿದ್ಯಾ (ಹಡಪದ ಅಪ್ಪಣ್ಣ), ಪ್ರತಿಭಾ (ಸಕಲೇಶ ಮಾದರಸ), ಸೀತಾ (ಅಂಬಿಗರ ಚಾಡಯ್ಯ), ಶೃತಿ ತಂಬೂರಿ (ಕಸಪಯ್ಯ), ಮಂಜುಶ್ರೀ, ಸುನಿತಾ ಲಮಾಣಿ, ಶಂಕ್ರಮ್ಮ ಬಾಳಂಬೀಡ ಅವರ ಅಭಿನಯ ಅಧ್ಬುತವಾಗಿತ್ತು.
ಅಜ್ಜಿ ಕಥೆ ಮೂಲಕ ನಾಟಕವಾಗಿ ಮನಮುಟ್ಟಿತು. ಇಡೀ ನಾಟಕದ ನಿರೂಪಕಿಯಂತಿದ್ದ ಅಜ್ಜಿ ಆಗಾಗ ನಾಟಕದ ಕುತೂಹಲ ಹೆಚ್ಚಿಸಲು ಹೇಳುವ ಸಂದೇಶಗಳು ವಿಶೇಷವಾಗಿದ್ದವು. ಸಮಯಾಬಾನು ಲೋಹಾರ ಅವರ ಕಥೆ ಹೇಳುವ ಅಜ್ಜಿ, ಸುಶ್ಮಿತಾ ಹೀರೂರ ಹಾಗೂ ರಾಜೇಶ್ವರಿ ಪಾಟೀಲ ಮೊಮ್ಮಕ್ಕಳಾಗಿ ಕಥೆ ಕೇಳವ ದೃಶ್ಯ ಇಡೀ ಸಹೃದಯರೇ ಕಥೆ ಕೇಳುವಂತಿತ್ತು.
ನಾಟಕದ ಸಾಂದರ್ಭಿಕ ಸೆಲೆಯಾಗಿ ಶ್ವೇತಾ ಶಿವಗಿರಿ, ಶ್ರೀನಿಧಿ ಹೆಗಡೆ, ಶೋಭಾ ಬೆಣ್ಣಿ, ಗ್ಯಾನಪ್ಪ ಅವರ ವಚನ ಗಾಯನ ನಾಟಕಕ್ಕೆ ಮೆರಗು ತಂದಿತು.
ಸಾಹಿತಿ ವಿ.ಕೃ.ಗೋಕಾಕ ಅವರ 'ಕಲ್ಯಾಣದಲ್ಲಿಬಸವಣ್ಣನವರ ಕೊನೆಯ ದಿನ' ಎಂಬ ಖಂಡ ಕಾವ್ಯವನ್ನು ನಾಟಕದ ರೂಪಕ್ಕಿಳಿಸಿ, ಸ್ಥಳೀಯ ಕುಮಾರೇಶ್ವರ ಬಿಇಡಿ ಪ್ರಶಿಕ್ಷಣಾರ್ಥಿಗಳಲ್ಲಿನ ರಂಗ ಕಲೆಯನ್ನು ಎಚ್ಚರಗೊಳಿಸಿದ ಸಾಹಿತಿ ಡಾ.ವಿಶ್ವನಾಥ ಬೋಂದಾಡೆ ಅವರ ಶ್ರಮ ಸಾರ್ಥಕವಾಯಿತು. ಹಾನಗಲ್ಲಿನ ಕುಮಾರೇಶ್ವರ ಬಿಇಡಿ ಕಾಲೇಜಿನಲ್ಲಿವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ ಅಚ್ಚುಮೆಚ್ಚಾಗಿತ್ತು.
ಶರಣರ ಸಾತ್ವಿಕ ಸಮಾಜ ಸುಧಾರಣೆಯ ಹಾದಿಯಲ್ಲಿಅಡ್ಡಾಗಿ ಬಂದವರು, ಮಹಾಮನೆ, ಶರಣರ ಜೀವನ ದೃಷ್ಟಿ, ಕಾಯಕದ ಪರಾಕಾಷ್ಠೆ, ವಚನ ಚಳವಳಿ, ಮೌಲಿಕ ದಾರಿ ತೋರಿದ ಶರಣರ ನಡೆ, ವಚನಕಾರರ ಒಟ್ಟು ಆದರ್ಶವನ್ನು ಕಟ್ಟಿಟ್ಟ ನಾಟಕ ಹೃದಯವಂತಿಕೆ ಮೆರೆಯುವಂತಿತ್ತು.
ಬಿಜ್ಜಳನ ಪಾತ್ರದಲ್ಲಿಮಧುರ ಹೆಗಡೆ, ಬಸವಣ್ಣನ ಪಾತ್ರದಲ್ಲಿಮೇಘಾ ಲಕ್ಕೊಳ್ಳಿ, ಅಕ್ಕಮಹಾದೇವಿ ಪಾತ್ರದಲ್ಲಿಅನ್ನಪೂರ್ಣ, ಅಲ್ಲಮನ ಪಾತ್ರದಲ್ಲಿಗಂಗವ್ವ ದುಂಡಿನವರ, ದೋಹರ ಕಕ್ಕಯ್ಯನ ಪಾತ್ರದಲ್ಲಿಅನಿತಾ ಬಣಕಾರ, ಯು.ಮಮತಾ (ಮಡಿವಾಳ ಮಾಚಯ್ಯ), ಸುಧಾಮನಿ ಮ್ಯಾಗೇರ, (ಗಂಗಾಬಿಕೆ), ಸಾವಿತ್ರವ್ವ ಚೂರಿ (ನೀಲಾಂಬಿಕೆ), ಕವಿತಾ (ಹರಳಯ್ಯ), ಶ್ರೀನಿಧಿ ಹೆಗಡೆ (ಮಧುವಯ್ಯ), ಅಕ್ಷತಾ ಹುಣಸಿಕಟ್ಟಿಮಠ (ಗಿರಿಜೆ), ಕಾವೇರಿ ಹೆಗಡೆ (ಶಂಕರ), ರಾಜೇಶ್ವರಿ (ಪಡಿಹಾರ ಉತ್ತಣ್ಣ), ವಿದ್ಯಾ (ಹಡಪದ ಅಪ್ಪಣ್ಣ), ಪ್ರತಿಭಾ (ಸಕಲೇಶ ಮಾದರಸ), ಸೀತಾ (ಅಂಬಿಗರ ಚಾಡಯ್ಯ), ಶೃತಿ ತಂಬೂರಿ (ಕಸಪಯ್ಯ), ಮಂಜುಶ್ರೀ, ಸುನಿತಾ ಲಮಾಣಿ, ಶಂಕ್ರಮ್ಮ ಬಾಳಂಬೀಡ ಅವರ ಅಭಿನಯ ಅಧ್ಬುತವಾಗಿತ್ತು.
ಅಜ್ಜಿ ಕಥೆ ಮೂಲಕ ನಾಟಕವಾಗಿ ಮನಮುಟ್ಟಿತು. ಇಡೀ ನಾಟಕದ ನಿರೂಪಕಿಯಂತಿದ್ದ ಅಜ್ಜಿ ಆಗಾಗ ನಾಟಕದ ಕುತೂಹಲ ಹೆಚ್ಚಿಸಲು ಹೇಳುವ ಸಂದೇಶಗಳು ವಿಶೇಷವಾಗಿದ್ದವು. ಸಮಯಾಬಾನು ಲೋಹಾರ ಅವರ ಕಥೆ ಹೇಳುವ ಅಜ್ಜಿ, ಸುಶ್ಮಿತಾ ಹೀರೂರ ಹಾಗೂ ರಾಜೇಶ್ವರಿ ಪಾಟೀಲ ಮೊಮ್ಮಕ್ಕಳಾಗಿ ಕಥೆ ಕೇಳವ ದೃಶ್ಯ ಇಡೀ ಸಹೃದಯರೇ ಕಥೆ ಕೇಳುವಂತಿತ್ತು.
ನಾಟಕದ ಸಾಂದರ್ಭಿಕ ಸೆಲೆಯಾಗಿ ಶ್ವೇತಾ ಶಿವಗಿರಿ, ಶ್ರೀನಿಧಿ ಹೆಗಡೆ, ಶೋಭಾ ಬೆಣ್ಣಿ, ಗ್ಯಾನಪ್ಪ ಅವರ ವಚನ ಗಾಯನ ನಾಟಕಕ್ಕೆ ಮೆರಗು ತಂದಿತು.