ಆ್ಯಪ್ನಗರ

ಕಲಿತ ಶಾಲೆ ಕುರಿತು ಅಭಿಮಾನವಿರಲಿ

ರಾಣೇಬೆನ್ನೂರ: ಜನ್ಮ ನೀಡಿದ ತಾಯಿ ಮತ್ತು ವಿದ್ಯೆ ಕಲಿಸಿದ ಗುರುವಿನ ಋುಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಮುಖ್ಯ ಶಿಕ್ಷ ಕ ಜಿ.ಎಲ್‌.ಕುಲಕರ್ಣಿ ಹೇಳಿದರು.

Vijaya Karnataka 3 Jul 2019, 5:00 am
ರಾಣೇಬೆನ್ನೂರ: ಜನ್ಮ ನೀಡಿದ ತಾಯಿ ಮತ್ತು ವಿದ್ಯೆ ಕಲಿಸಿದ ಗುರುವಿನ ಋುಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಮುಖ್ಯ ಶಿಕ್ಷ ಕ ಜಿ.ಎಲ್‌.ಕುಲಕರ್ಣಿ ಹೇಳಿದರು.
Vijaya Karnataka Web be proud of the school you learned
ಕಲಿತ ಶಾಲೆ ಕುರಿತು ಅಭಿಮಾನವಿರಲಿ


ಇಲ್ಲಿನ ವಿನಾಯಕ ನಗರದ ಪ್ರಾಚೀನ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲೆಯ ಹಳೆಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿದ ಸಮವಸ್ತ್ರಗಳು ಮತ್ತು ನೋಟ್‌ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು. ಹಣವನ್ನು ಕೂಡಿಟ್ಟರೆ ಯಾರೂ ಬೇಕಾದರೂ ಅಪಹರಿಸಬಹುದು. ಆದರೆ ಕಲಿತ ವಿದ್ಯೆಯು ಜೀವನಪೂರ್ತಿ ಬದುಕುವ ದಾರಿಯನ್ನು ಕಲಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಕಲಿತ ಶಾಲೆಯ ಬಗ್ಗೆ ಅಭಿಮಾನವಿಟ್ಟು ಅಲ್ಲಿನ ಮಕ್ಕಳ ಕಲಿಕೆಗೆ ಪೂರಕವಾದ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಿರುವ ಹಳೆಯ ವಿದ್ಯಾರ್ಥಿಗಳಾದ ಪ್ರಭು ಹುಣಸಿಮರದ ಹಾಗೂ ಹರಿಹರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇತರರಿಗೆ ಪ್ರೇರಣೆಯಾಗಿದೆ ಎಂದರು.

ಶಾಲೆಯ ಎಲ್ಲ 80 ವಿದ್ಯಾರ್ಥಿಗಳಿಗೂ ನೋಟಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.

ಮುಖ್ಯ ಶಿಕ್ಷ ಕಿ ಪುಷ್ಪಾ ನಾಡಿಗೇರ, ಕಮಲಾ ಪುರೋಹಿತ, ಸುವರ್ಣಾ ನೈನಾ, ಹಳೆಯ ವಿದ್ಯಾರ್ಥಿಗಳಾದ ಪ್ರಭು ಹುಣಸಿಮರದ ಹರಿಹರ ಮತ್ತು ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ