ಆ್ಯಪ್ನಗರ

ಬೆಳಗಾಲಪೇಟೆ ಸುತ್ತ ಹರ್ಷ ತಂದ ವರ್ಷ

ಅಕ್ಕಿಆಲೂರು :ಸಮೀಪದ ಬೆಳಗಾಲಪೇಟೆ, ನಿಸ್ಸೀಮ ಆಲದಕಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ರೆತ ಸಮೂಹದಲ್ಲಿ ಹರ್ಷ

ವಿಕ ಸುದ್ದಿಲೋಕ 2 Jun 2016, 5:00 am
ಅಕ್ಕಿಆಲೂರು :ಸಮೀಪದ ಬೆಳಗಾಲಪೇಟೆ, ನಿಸ್ಸೀಮ ಆಲದಕಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದು, ರೆತ ಸಮೂಹದಲ್ಲಿ ಹರ್ಷ ಮನೆಮಾಡಿದೆ.
Vijaya Karnataka Web belagalapete brought joy around the year
ಬೆಳಗಾಲಪೇಟೆ ಸುತ್ತ ಹರ್ಷ ತಂದ ವರ್ಷ


ಸೂರ್ಯನ ಪ್ರಖರತೆ ಹಾಗೂ ಸೆಕೆಯಿಂದ ಬಸವಳಿದಿದ್ದ ಜನರು ಧಾರಾಕಾರ ಮಳೆಯಿಂದ ಸಂತಸಗೊಂಡಿದ್ದಾರೆ. ಗುಡುಗು ಸಹಿತ ಅಬ್ಬರಿಸಿದ ಮಳೆಗೆ ಯುವಕರು, ಮಕ್ಕಳು ನೆನೆದು ಖುಷಿ ಪಟ್ಟರು. ಮುಂಗಾರು ಹಂಗಾಮಿಗೆ ಕಷಿ ಭೂಮಿ ಸಿದ್ಧಪಡಿಸಿಕೊಂಡು ಮಳೆಗೆ ಕಾಯ್ದಿದ್ದ ರೆತ ಸಮೂಹ ಇನ್ನೇನು ಬಿತ್ತನೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದೆ.

ನಿರಾಸೆ: ಅಕ್ಕಿಆಲೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ನಿರ್ಮಾಣಗೊಂಡು ಗುಡುಗಿನ ಅಬ್ಬರ ಕಂಡು ಬಂದಿತಾದರೂ ಮಳೆ ಸುರಿಯದೇ ನಿರಾಸೆ ಮೂಡಿಸಿತು. ಕಳೆದೊಂದು ವಾರದಿಂದ ಇಲ್ಲಿ ಮಳೆ ಸುರಿದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ