ಮಂಜುನಾಥ ಹಳ್ಳದ
ಹಾವೇರಿ : ನಗರದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು, ನಾಯಿಗಳ ಹಾವಳಿ ಜೊತೆಗೆ ಈಚೆಗೆ ಕುದುರೆಗಳ ಕಾಟವೂ ಹೆಚ್ಚಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಾಗುವಾಗ ಅಡ್ಡಾದಿಡ್ಡಿಯಾಗಿ ಜಾನುವಾರು ಸಂಚರಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿವೆ. ಹಿಂಡು ಹಿಂಡಾಗಿ ಬರುವ ನಾಯಿಗಳು, ಹಂದಿ ಹಾಗೂ ದನಗಳಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.
ದ್ವಿಚಕ್ರ ವಾಹನ ಸವಾರರಿಗಂತೂ ದಿಢೀರ್ ಅಡ್ಡ ಬರುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವುದೇ ಸವಾಲಾಗಿದೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಅಪಘಾತಗಳು ಸಹಜ ಎನ್ನುವಂತಾಗಿದೆ. ಈಚೆಗೆ ನಾಯಿ, ಹಂದಿಗಳ ಜತೆಗೆ, ಕುದುರೆಗಳು ರಸ್ತೆಗಳನ್ನೇ ಕಾಯಂ ವಾಸಸ್ಥಾನ ಮಾಡಿಕೊಂಡಿವೆ.
ಇಲ್ಲಿ ಬೀಡು ಬಿಟ್ಟಿವೆ:
ಪ್ರಮುಖ ವೃತ್ತಗಳಾದ ಪಿ.ಬಿ.ರಸ್ತೆ, ಕಾಗಿನೆಲೆ ರಸ್ತೆ, ಜೆ.ಎಚ್.ಪಟೇಲ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಜಿಲ್ಲಾ ಕ್ರೀಡಾಂಗಣ, ಹೊಸಮನಿ ಸಿದ್ಧಪ್ಪ ಸರ್ಕಲ್, ಕೇಂದ್ರ ಬಸ್ ನಿಲ್ದಾಣ, ದುಂಡಿ ಬಸವೇಶ್ವರ ಸರ್ಕಲ್, ಡಿ.ಸಿ. ಆಫೀಸ್ ರೋಡ, ಜಿ.ಎಚ್.ಕಾಲೇಜ್, ಸುಭಾಷ ಸರ್ಕಲ್, ಎಂ.ಜಿ.ರಸ್ತೆ, ಹುಕ್ಕೇರಿಮಠ, ರೈಲ್ವೆ ಸ್ಟೇಷನ್ ಸೇರಿದಂತೆ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿಯೇ ದನಗಳು, ಕುದುರೆಗಳ ಹಿಂಡು ಕಂಡುಬರುತ್ತಿವೆ.
ವಾರಸುದಾರರಿಲ್ಲದ ಕುದುರೆಗಳು:
ರಸ್ತೆಯಲ್ಲಿ ಕಾಣಸಿಗುವ ಕುದುರೆಗಳಿಗೆ ವಾರಸುದಾರರಿಲ್ಲದ ಕಾರಣ ಇವುಗಳಿಗೆ ಲಾಗಾಮು ಇಲ್ಲ. ಇದರಿಂದ ಈ ಕುದುರೆಗಳಿಗೆ ವಾರಸುದಾರರೆ ಇಲ್ಲವಾಗಿದ್ದರಿಂದ ಎಲ್ಲೆಂದರಲ್ಲಿ ಓಡಾಡುತ್ತಿವೆ. ಮನೆಗಳಿಗೆ ನುಗ್ಗುತ್ತಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರವೀಣ.
ಕುದುರೆಗಳ ಉಪಟಳ:
ರಸ್ತೆ ಮಧ್ಯೆದಲ್ಲಿಯೇ ಮಲಗುವ ಕುದುರೆಗಳು ಒಂದಕ್ಕೊಂದು ಕಚ್ಚಾಡುತ್ತಾ ಚಿತ್ತಾಟುತ್ತಾ ಜನರ ಮೇಲೆ ಬರುತ್ತವೆ. ಇವುಗಳಿಗೆ ಜನರ ಭಯವಿಲ್ಲ. ಉಪಟಳ ಹೆಚ್ಚಳವಾಗಿದ್ದು, ಜನರ ಜೀವನದ ಜೊತೆಗೆ ಆಟವಾಡುತ್ತಿವೆ.
ದನಗಳು, ಕುದುರೆಗಳ ಹಾವಳಿಯಿಂದ ನಾಗರಿಕರು ಸಂಕಷ್ಟ ಅನುಭವಿಸುತ್ತಾ, ನಗರಸಭೆ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಮಾತ್ರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಜನರು.
ಹಾವೇರಿ : ನಗರದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳು, ನಾಯಿಗಳ ಹಾವಳಿ ಜೊತೆಗೆ ಈಚೆಗೆ ಕುದುರೆಗಳ ಕಾಟವೂ ಹೆಚ್ಚಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಾಗುವಾಗ ಅಡ್ಡಾದಿಡ್ಡಿಯಾಗಿ ಜಾನುವಾರು ಸಂಚರಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿವೆ. ಹಿಂಡು ಹಿಂಡಾಗಿ ಬರುವ ನಾಯಿಗಳು, ಹಂದಿ ಹಾಗೂ ದನಗಳಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.
ದ್ವಿಚಕ್ರ ವಾಹನ ಸವಾರರಿಗಂತೂ ದಿಢೀರ್ ಅಡ್ಡ ಬರುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವುದೇ ಸವಾಲಾಗಿದೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಅಪಘಾತಗಳು ಸಹಜ ಎನ್ನುವಂತಾಗಿದೆ. ಈಚೆಗೆ ನಾಯಿ, ಹಂದಿಗಳ ಜತೆಗೆ, ಕುದುರೆಗಳು ರಸ್ತೆಗಳನ್ನೇ ಕಾಯಂ ವಾಸಸ್ಥಾನ ಮಾಡಿಕೊಂಡಿವೆ.
ಇಲ್ಲಿ ಬೀಡು ಬಿಟ್ಟಿವೆ:
ಪ್ರಮುಖ ವೃತ್ತಗಳಾದ ಪಿ.ಬಿ.ರಸ್ತೆ, ಕಾಗಿನೆಲೆ ರಸ್ತೆ, ಜೆ.ಎಚ್.ಪಟೇಲ್ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್, ಜಿಲ್ಲಾ ಕ್ರೀಡಾಂಗಣ, ಹೊಸಮನಿ ಸಿದ್ಧಪ್ಪ ಸರ್ಕಲ್, ಕೇಂದ್ರ ಬಸ್ ನಿಲ್ದಾಣ, ದುಂಡಿ ಬಸವೇಶ್ವರ ಸರ್ಕಲ್, ಡಿ.ಸಿ. ಆಫೀಸ್ ರೋಡ, ಜಿ.ಎಚ್.ಕಾಲೇಜ್, ಸುಭಾಷ ಸರ್ಕಲ್, ಎಂ.ಜಿ.ರಸ್ತೆ, ಹುಕ್ಕೇರಿಮಠ, ರೈಲ್ವೆ ಸ್ಟೇಷನ್ ಸೇರಿದಂತೆ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿಯೇ ದನಗಳು, ಕುದುರೆಗಳ ಹಿಂಡು ಕಂಡುಬರುತ್ತಿವೆ.
ವಾರಸುದಾರರಿಲ್ಲದ ಕುದುರೆಗಳು:
ರಸ್ತೆಯಲ್ಲಿ ಕಾಣಸಿಗುವ ಕುದುರೆಗಳಿಗೆ ವಾರಸುದಾರರಿಲ್ಲದ ಕಾರಣ ಇವುಗಳಿಗೆ ಲಾಗಾಮು ಇಲ್ಲ. ಇದರಿಂದ ಈ ಕುದುರೆಗಳಿಗೆ ವಾರಸುದಾರರೆ ಇಲ್ಲವಾಗಿದ್ದರಿಂದ ಎಲ್ಲೆಂದರಲ್ಲಿ ಓಡಾಡುತ್ತಿವೆ. ಮನೆಗಳಿಗೆ ನುಗ್ಗುತ್ತಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರವೀಣ.
ಕುದುರೆಗಳ ಉಪಟಳ:
ರಸ್ತೆ ಮಧ್ಯೆದಲ್ಲಿಯೇ ಮಲಗುವ ಕುದುರೆಗಳು ಒಂದಕ್ಕೊಂದು ಕಚ್ಚಾಡುತ್ತಾ ಚಿತ್ತಾಟುತ್ತಾ ಜನರ ಮೇಲೆ ಬರುತ್ತವೆ. ಇವುಗಳಿಗೆ ಜನರ ಭಯವಿಲ್ಲ. ಉಪಟಳ ಹೆಚ್ಚಳವಾಗಿದ್ದು, ಜನರ ಜೀವನದ ಜೊತೆಗೆ ಆಟವಾಡುತ್ತಿವೆ.
ದನಗಳು, ಕುದುರೆಗಳ ಹಾವಳಿಯಿಂದ ನಾಗರಿಕರು ಸಂಕಷ್ಟ ಅನುಭವಿಸುತ್ತಾ, ನಗರಸಭೆ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಮಾತ್ರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯ ಜನರು.