ಆ್ಯಪ್ನಗರ

ಉಪಸಮರಕ್ಕೆ ಅಂತಿಮ ಅಖಾಡ ಸಿದ್ಧ; ಬಂಡಾಯ ಅಭ್ಯರ್ಥಿಯ ನಾಮಪತ್ರ ವಾಪಸ್ ನಂತರ ಬಿಜೆಪಿ ನಿಟ್ಟುಸಿರು

ಹಾನಗಲ್‌ನಲ್ಲಿ ಲಿಂಗಾಯತ ಪಂಚಮ ಸಾಲಿ ಸಮುದಾಯದ ಸಿ.ಆರ್‌. ಬಳ್ಳಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಸಮುದಾಯ ಕಡೆಗಣಿಸಲಾಗಿದೆ ಎಂದು ಆರೋಪಿಸಿ ನಾಮಪತ್ರ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹಾನಗಲ್‌ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದೆ. ಇದು ಸಿಎಂಗೆ ಪ್ರತಿಷ್ಠೆಯ ಗೆಲುವು ಆಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಬಂಡಾಯ ಅಭ್ಯರ್ಥಿ ಕರೆಯಿಸಿ ಸಭೆ ನಡೆಸಿದ್ದರು.

Vijaya Karnataka 14 Oct 2021, 11:51 am
ಹಾವೇರಿ/ ಸಿಂದಗಿ: ನಾಮಪತ್ರ ವಾಪಸ್‌ ಪಡೆಯಲು ಗಡುವು ಮುಗಿದಿದ್ದು ಹಾನಗಲ್‌ನಲ್ಲಿ ಭಾರೀ ಕಸರತ್ತಿನ ನಂತರ ಬಿಜೆಪಿ ಬಂಡುಕೋರ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದಿದ್ದಾರೆ.
Vijaya Karnataka Web bjp flag


ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇಬ್ಬರು ಕಣದಲ್ಲಿದ್ದಾರೆ. ಉಪ ಸಮರದ ನಾಮಪತ್ರ ಹಿಂದಕ್ಕೆ ಪಡೆಯಲು ಬುಧವಾರ ಕೊನೆಯ ದಿನವಾಗಿತ್ತು. ಹಾನಗಲ್‌ನಲ್ಲಿ 13 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಹಾನಗಲ್‌ ಕ್ಷೇತ್ರದಲ್ಲಿ 14 ಪಕ್ಷೇತರು ಮತ್ತು ಮೂವರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರರಾದ ಅಶೋಕ್‌ ಹಣಜಿ, ಸಿ. ಆರ್‌. ಬಳ್ಳಾರಿ, ಜಾಕೀರ ಹುಸೇನ್‌ ಅಳ್ಳಿಮರದ್‌, ಸಿಕಂದರ್‌ಖಾನ್‌ ಮತ್ತಿಹಳ್ಳಿ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ಉಪಸಮರದ ಅಖಾಡ ಸಿದ್ಧವಾಗಿದೆ.
ಹಾನಗಲ್‌ನಲ್ಲಿ ಕೊನೇ ಕ್ಷಣ ಟೆನ್ಷನ್‌ ತಂದ ಪಕ್ಷೇತರರು; ಬಂಡುಕೋರರ ಒಲೈಕೆಗೆ ಬಿಜೆಪಿ ರಣತಂತ್ರ
ಬಳ್ಳಾರಿ ಭಯ ದೂರ: ಹಾನಗಲ್‌ನಲ್ಲಿ ಲಿಂಗಾಯತ ಪಂಚಮ ಸಾಲಿ ಸಮುದಾಯದ ಸಿ.ಆರ್‌. ಬಳ್ಳಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಸಮುದಾಯ ಕಡೆಗಣಿಸಲಾಗಿದೆ ಎಂದು ಆರೋಪಿಸಿ ನಾಮಪತ್ರ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹಾನಗಲ್‌ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದೆ. ಇದು ಸಿಎಂಗೆ ಪ್ರತಿಷ್ಠೆಯ ಗೆಲುವು ಆಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ದಿಢೀರ್‌ ದಾವಣಗೆರೆ ರಾತ್ರಿ ಭೇಟಿ ನೀಡಿ ಹಾವೇರಿ ಜಿಲ್ಲೆಯ ಮುಖಂಡರು ಮತ್ತು ಬಂಡಾಯ ಅಭ್ಯರ್ಥಿ ಕರೆಯಿಸಿ ಸಭೆ ನಡೆಸಿದ್ದರು. ಅಲ್ಲಿ ಬಳ್ಳಾರಿಯವರ ಮನವೊಲಿಕೆಯ ಕಸರತ್ತು ನಡೆಸಲಾಗಿತ್ತು. ಸಮುದಾಯ ಮುಖಂಡರ ಜತೆ ಚರ್ಚೆ ನಡೆಸಿ ನಾಮಪತ್ರ ವಾಪಸ್‌ ಬಗ್ಗೆ ನಿರ್ಧರಿಸುವುದಾಗಿ ಬಂಡಾಯ ಅಭ್ಯರ್ಥಿಯೂ ಭರವಸೆ ನೀಡಿದ್ದರು. ಈಗ ಬಳ್ಳಾರಿ ಅವರು ನಾಮಪತ್ರ ವಾಪಸ್‌ ಪಡೆಯುವ ಮೂಲಕ ಬಿಜೆಪಿಗೆ ಇದ್ದ ಆತಂಕ ದೂರವಾಗಿದೆ. ಬಿಜೆಪಿ ಗೆಲ್ಲುವ ವಿಶ್ವಾಸವೂ ಮುಖಂಡರಲ್ಲಿ ವ್ಯಕ್ತವಾಗಿದೆ.
ಸಿಂದಗಿ, ಹಾನಗಲ್ ಬೈಎಲೆಕ್ಷನ್: ಬಿಜೆಪಿ ಅಭ್ಯರ್ಥಿಗಳಾಗಿ ರಮೇಶ್ ಭೂಸನೂರು, ಶಿವರಾಜ್ ಸಜ್ಜನರ್ ಹೆಸರು ಘೋಷಣೆ
ಈ ಹಿಂದಿನ ಎರಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಮತದ ಅಂತರ ಆರು ಸಾವಿರ ದಾಟಿರಲಿಲ್ಲ. ಇದರಿಂದ ಬಿಜೆಪಿಗೆ ಬಂಡಾಯ ಅಭ್ಯರ್ಥಿ ಆರು ಸಾವಿರ ಮತ ಸೆಳೆದರೂ ಸೋಲುವ ಆತಂಕ ಎದುರಾಗಿತ್ತು. ಬಳ್ಳಾರಿ ನಾಮಪತ್ರ ವಾಪಸ್‌ ಪಡೆದಿರುವುದರಿಂದ ಬಿಜೆಪಿ ನಿರಾತಂಕವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ